‘ಗ್ರಾಮದ ಒಟ್ಟು 10 ಎಕರೆ ಸರ್ಕಾರಿ ಜಮೀನಿನಲ್ಲಿ 1.5 ಎಕರೆ ವಿಸ್ತೀರ್ಣದಲ್ಲಿ ಅಲೆಮಾರಿ ಸಿಂಧೋಳ್, ಸುಡಗಾಡು ಸಿದ್ದರ ಸಮುದಾಯಕ್ಕೆ ಸೇರಿದ 40ಕ್ಕೂ ಅಧಿಕ ಕುಟುಂಬಗಳ ನಿರಾಶ್ರಿತರಿಗೆ ಶಾಶ್ವತ ಸೂರು ಕಲ್ಪಿಸಲು ಸರ್ಕಾರದಿಂದ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲು ತೀರ್ಮಾನಿಸಲಾಗಿತ್ತು. ಆದರೆ, ಪಟ್ಟಣದಿಂದ ದೂರ ಎಂದು ಫಲಾನುಭವಿಗಳು ಮುಂದಾಗಿರಲಿಲ್ಲ. ಈಗ ಅವರೇ ಬಂದು ಮನವಿ ಮಾಡಿದ್ದಾರೆ. ಶೀಘ್ರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ದಾಖಲೆ ಸಂಗ್ರಹಿಸಿ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಹೇಳಿದರು.