<p><strong>ಸಾಸ್ವೆಹಳ್ಳಿ:</strong> ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ ಈ ಹಿಂದಿನ ಕಾರ್ಯದರ್ಶಿ ರಾಮನ ಗೌಡ ಅವರು ಗ್ರಾಮದ ಶಿವನಗೌಡ ಎಂಬವರಿಗೆ ಶಾಲೆಗೆ ಸೇರಿದ ಜಾಗವನ್ನೂ ಸೇರಿಸಿ ಹೆಚ್ಚುವರಿ ಜಾಗಕ್ಕೆ ಇ–ಸ್ವತ್ತು ನೀಡಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿಗೆ ದೂರು ನೀಡಿದ್ದಾರೆ.</p>.<p>ದೂರುದಾರ ಬಿ.ವೈ ಪರಮೇಶ್ವರಪ್ಪ ಮಾತನಾಡಿ, ಬೀರಗೊಂಡನಹಳ್ಳಿ ಶಾಲಾ ಕಾಂಪೌಂಡ್ ಒಳಗೆ ತಿಪ್ಪೆಗಳು, ಕಸ, ಕಲ್ಲು, ಮಣ್ಣು, ಹುಲ್ಲಿನ ಬಣವೆ ರಾಶಿಯನ್ನು ಹಾಕಿಕೊಂಡಿದ್ದರು.ಶಿವನಗೌಡ ಎಂಬುವವರು ಶಾಲಾ ಕಾಂಪೌಂಡ್ ಒತ್ತುವರಿ ಮಾಡಿ ಅದಕ್ಕೆ ಹೊಂದಿಕೊಂಡಂತೆ ದನದ ಕೊಟ್ಟಿಗೆಯನ್ನು ನಿರ್ಮಿಸಿಕೊಂಡಿದ್ದರು. ಅಧಿಕಾರಿಗಳು ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ತಿಪ್ಪೆಗಳನ್ನು ಹಾಗೂ ಕಲ್ಲಿನ ರಾಶಿಯನ್ನು ತೆರವುಗೊಳಿಸಿ ಶಾಲಾ ಮೈದಾನವನ್ನು ಸ್ವಚ್ಛಗೊಳಿಸಿದ್ದರು ಎಂದರು.</p>.<p>ಆದರೆ ಶಾಲಾ ಕಾಂಪೌಂಡ್ ಅತಿಕ್ರಮಿಸಿದವರ ವಿರುದ್ಧ ಯಾವುದೆ ಕ್ರಮ ಕೈಗೊಂಡಿಲ್ಲ. ಹಳೆಯ ದಾಖಲೆಗಳನ್ನು ಪರಿಶೀಲಿಸಿ, ದಾಖಲೆ ತಿದ್ದೀರುವ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳುವುದರೊಂದಿಗೆ ಸಾರ್ವಜನಿಕ ಆಸ್ತಿಯನ್ನು ಉಳಿಸ ಬೇಕು ಎಂದು ಹೊನ್ನಾಳಿ ತಾಲ್ಲೂಕುವ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.</p>.<p>ಗ್ರಾಮಸ್ಥರಾದ ಎಂ. ಕಿರಣ್ ಕುಮಾರ್, ಕೆ.ನಾಗರಾಜ್, ಮಳಲಿ ಹನುಮಂತಪ್ಪ, ಹರಮಘಟ್ಟ ರಮೇಶಣ್ಣ, ಟಿ.ಬಿ ಗಣೇಶಪ್ಪ, ಗುರುಬಸಪ್ಪ ಗೌಡ ಉಪಸ್ಥಿತರಿದ್ದರು.</p>.<p>ಬೀರಗೊಂಡನಹಳ್ಳಿಯಲ್ಲಿ ಕಾರ್ಯ ನಿರ್ವಹಿಸಿ, ದಾಖಲೆ ತಿದ್ದುಪಡಿ ಮಾಡಿದ್ದ ಅಲ್ಲಿನ ಹಿಂದಿನ ಕಾರ್ಯದರ್ಶಿ ರಾಮನ ಗೌಡ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿಗೆ ಪತ್ರ ಬರೆಯಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಪ್ರಕಾಶ್ ಎಂ. ಆರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಸ್ವೆಹಳ್ಳಿ:</strong> ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ ಈ ಹಿಂದಿನ ಕಾರ್ಯದರ್ಶಿ ರಾಮನ ಗೌಡ ಅವರು ಗ್ರಾಮದ ಶಿವನಗೌಡ ಎಂಬವರಿಗೆ ಶಾಲೆಗೆ ಸೇರಿದ ಜಾಗವನ್ನೂ ಸೇರಿಸಿ ಹೆಚ್ಚುವರಿ ಜಾಗಕ್ಕೆ ಇ–ಸ್ವತ್ತು ನೀಡಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿಗೆ ದೂರು ನೀಡಿದ್ದಾರೆ.</p>.<p>ದೂರುದಾರ ಬಿ.ವೈ ಪರಮೇಶ್ವರಪ್ಪ ಮಾತನಾಡಿ, ಬೀರಗೊಂಡನಹಳ್ಳಿ ಶಾಲಾ ಕಾಂಪೌಂಡ್ ಒಳಗೆ ತಿಪ್ಪೆಗಳು, ಕಸ, ಕಲ್ಲು, ಮಣ್ಣು, ಹುಲ್ಲಿನ ಬಣವೆ ರಾಶಿಯನ್ನು ಹಾಕಿಕೊಂಡಿದ್ದರು.ಶಿವನಗೌಡ ಎಂಬುವವರು ಶಾಲಾ ಕಾಂಪೌಂಡ್ ಒತ್ತುವರಿ ಮಾಡಿ ಅದಕ್ಕೆ ಹೊಂದಿಕೊಂಡಂತೆ ದನದ ಕೊಟ್ಟಿಗೆಯನ್ನು ನಿರ್ಮಿಸಿಕೊಂಡಿದ್ದರು. ಅಧಿಕಾರಿಗಳು ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ತಿಪ್ಪೆಗಳನ್ನು ಹಾಗೂ ಕಲ್ಲಿನ ರಾಶಿಯನ್ನು ತೆರವುಗೊಳಿಸಿ ಶಾಲಾ ಮೈದಾನವನ್ನು ಸ್ವಚ್ಛಗೊಳಿಸಿದ್ದರು ಎಂದರು.</p>.<p>ಆದರೆ ಶಾಲಾ ಕಾಂಪೌಂಡ್ ಅತಿಕ್ರಮಿಸಿದವರ ವಿರುದ್ಧ ಯಾವುದೆ ಕ್ರಮ ಕೈಗೊಂಡಿಲ್ಲ. ಹಳೆಯ ದಾಖಲೆಗಳನ್ನು ಪರಿಶೀಲಿಸಿ, ದಾಖಲೆ ತಿದ್ದೀರುವ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳುವುದರೊಂದಿಗೆ ಸಾರ್ವಜನಿಕ ಆಸ್ತಿಯನ್ನು ಉಳಿಸ ಬೇಕು ಎಂದು ಹೊನ್ನಾಳಿ ತಾಲ್ಲೂಕುವ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.</p>.<p>ಗ್ರಾಮಸ್ಥರಾದ ಎಂ. ಕಿರಣ್ ಕುಮಾರ್, ಕೆ.ನಾಗರಾಜ್, ಮಳಲಿ ಹನುಮಂತಪ್ಪ, ಹರಮಘಟ್ಟ ರಮೇಶಣ್ಣ, ಟಿ.ಬಿ ಗಣೇಶಪ್ಪ, ಗುರುಬಸಪ್ಪ ಗೌಡ ಉಪಸ್ಥಿತರಿದ್ದರು.</p>.<p>ಬೀರಗೊಂಡನಹಳ್ಳಿಯಲ್ಲಿ ಕಾರ್ಯ ನಿರ್ವಹಿಸಿ, ದಾಖಲೆ ತಿದ್ದುಪಡಿ ಮಾಡಿದ್ದ ಅಲ್ಲಿನ ಹಿಂದಿನ ಕಾರ್ಯದರ್ಶಿ ರಾಮನ ಗೌಡ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿಗೆ ಪತ್ರ ಬರೆಯಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಪ್ರಕಾಶ್ ಎಂ. ಆರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>