<p><strong>ದಾವಣಗೆರೆ: </strong>ನಗರ ಸೇರಿ ಜಿಲ್ಲೆಯಾದ್ಯಂತ ಗುರುವಾರ ಶ್ರೀರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದ ಹಲವು ಬಡಾವಣೆಗಳ ಶ್ರೀರಾಮನ ದೇವಾಲಯಗಳು ಸೇರಿದಂತೆ ವಿವಿಧ ದೇವಾಲಯಗಳ ಎದುರಿನ ರಸ್ತೆಯಲ್ಲಿ ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು.</p>.<p>ದೇವಾಲಯಗಳಲ್ಲಿ ಅಭಿಷೇಕ, ಅಲಂಕಾರ ಪೂಜೆ ನಡೆದವು. ರಾಮನವಮಿ ಅಂಗವಾಗಿ ಭಕ್ತರು ಬೆಳಿಗ್ಗೆಯಿಂದಲೇ ದೇವಾಲಯಗಳಲ್ಲಿ ಶ್ರೀರಾಮನ ದರ್ಶನ ಪಡೆದರು.</p>.<p>ದೇವಾಲಯಗಳಲ್ಲಿ ತೊಟ್ಟಿಲೋತ್ಸವ, ಅಭಿಷೇಕ, ಸಂಜೆ ಭಜನೆ ಕಾರ್ಯಕ್ರಮಗಳು ನಡೆದವು. ದೇವಾಲಯಗಳಲ್ಲಿ ಜನಜಂಗುಳಿ ಇತ್ತು.</p>.<p class="Subhead">ಗಮನ ಸೆಳೆದ ಶೋಭಾಯಾತ್ರೆ: ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ ರಾಮನವಮಿ ಉತ್ಸವ ಸಮಿತಿಯಿಂದ ಶೋಭಾಯಾತ್ರೆ ಆಯೋಜಿಸಲಾಗಿತ್ತು. ವೃತ್ತದಿಂದ ಪಿ.ಜೆ. ಬಡಾವಣೆಯ ರಾಮನ ದೇವಾಲಯದವರೆಗೆ ರಾಮನ ಮೂರ್ತಿಯ ಮೆರವಣಿಗೆ ನಡೆಯಿತು. ಮೆರವಣಿಗೆಗೆ ನಂದಿಕೋಲು, ಡೋಲು ಸೇರಿದಂತೆ ಜನಪದ ಕಲಾ ತಂಡಗಳು ಮೆರುಗು ನೀಡಿದವು.</p>.<p>ಉತ್ಸವ ಸಮಿತಿಯ ಅಧ್ಯಕ್ಷ ಸಂತೋಷಕುಮಾರ್ ಕೆ., ಅಮೋಘವರ್ಷ, ಹರೀಶ್, ಸಚಿನ್, ಗುಬ್ಬಿ ಮಂಜುನಾಥ್, ಅರುಣ್ ಇದ್ದರು.</p>.<p class="Subhead">ದೇವಾಲಯಗಳಲ್ಲಿ ಪೂಜೆ: ಪಿ.ಜೆ. ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ 6ರಿಂದಲೇ ವಿಶೇಷ ಅಭಿಷೇಕ ಪೂಜೆ ನಡೆದವು. ಗಣಪತಿ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ, ಹೂವಿನ ಅಲಂಕಾರ ಪೂಜೆ ನಡೆದವು.</p>.<p>ಬಳಿಕ ತೊಟ್ಟಿಲೋತ್ಸವ ನಡೆಯಿತು. ಸಂಜೆ ಭಜನೆ ನಡೆಯಿತು. ಭಕ್ತರು ತೊಟ್ಟಿಲನ್ನು ತೂಗಿ, ರಾಮನ ದರ್ಶನ ಪಡೆದರು. </p>.<p>ಪಿ.ಬಿ. ರಸ್ತೆಯ ಕೋದಂಡರಾಮ ದೇವಾಲಯದಲ್ಲೂ ತೊಟ್ಟಿಲೋತ್ಸವ, ವಿಶೇಷ ಪೂಜೆ ನಡೆದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತರ ದಂಡು ಹೆಚ್ಚಿತ್ತು. ಮಾರ್ಚ್ 31ರಂದು ಶ್ರೀರಾಮ ಪಟ್ಟಾಭಿಷೇಕ, ಮೂರ್ತಿಯ ಮೆರವಣಿಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.</p>.<p>ಎಂ.ಸಿ.ಸಿ ‘ಎ’ ಬ್ಲಾಕ್ನಲ್ಲಿ ವಾನರ ಸೇನೆಯಿಂದ ಆಯೋಜಿಸಿದ್ದ ರಾಮನವಮಿ ಉತ್ಸವದಲ್ಲಿ ರಾಮ ದೇವರ ಭಾವಚಿತ್ರದ ಮೆರವಣಿಗೆ ನಡೆಯಿತು. ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು.</p>.<p>ಹಿಂದೂ ಜನಜಾಗೃತಿ ಸೇನಾ ಸಮಿತಿಯ ಜಿಲ್ಲಾ ಘಟಕ ವತಿಯಿಂದ ಮಜ್ಜಿಗೆ ಮತ್ತು ಪಾಯಸ ವಿತರಿಸಲಾಯಿತು. </p>.<p>ಸಮಿತಿ ಅಧ್ಯಕ್ಷ ಚೇತನ್, ಜಿ. ಓಬಳೇಶ್, ಶಾಂತಕುಮಾರ್, ಮಧು, ಶಾಂತೇಶ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶಕುಂತಲಾ, ವಿಜಯಲಕ್ಷ್ಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ನಗರ ಸೇರಿ ಜಿಲ್ಲೆಯಾದ್ಯಂತ ಗುರುವಾರ ಶ್ರೀರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದ ಹಲವು ಬಡಾವಣೆಗಳ ಶ್ರೀರಾಮನ ದೇವಾಲಯಗಳು ಸೇರಿದಂತೆ ವಿವಿಧ ದೇವಾಲಯಗಳ ಎದುರಿನ ರಸ್ತೆಯಲ್ಲಿ ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು.</p>.<p>ದೇವಾಲಯಗಳಲ್ಲಿ ಅಭಿಷೇಕ, ಅಲಂಕಾರ ಪೂಜೆ ನಡೆದವು. ರಾಮನವಮಿ ಅಂಗವಾಗಿ ಭಕ್ತರು ಬೆಳಿಗ್ಗೆಯಿಂದಲೇ ದೇವಾಲಯಗಳಲ್ಲಿ ಶ್ರೀರಾಮನ ದರ್ಶನ ಪಡೆದರು.</p>.<p>ದೇವಾಲಯಗಳಲ್ಲಿ ತೊಟ್ಟಿಲೋತ್ಸವ, ಅಭಿಷೇಕ, ಸಂಜೆ ಭಜನೆ ಕಾರ್ಯಕ್ರಮಗಳು ನಡೆದವು. ದೇವಾಲಯಗಳಲ್ಲಿ ಜನಜಂಗುಳಿ ಇತ್ತು.</p>.<p class="Subhead">ಗಮನ ಸೆಳೆದ ಶೋಭಾಯಾತ್ರೆ: ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ ರಾಮನವಮಿ ಉತ್ಸವ ಸಮಿತಿಯಿಂದ ಶೋಭಾಯಾತ್ರೆ ಆಯೋಜಿಸಲಾಗಿತ್ತು. ವೃತ್ತದಿಂದ ಪಿ.ಜೆ. ಬಡಾವಣೆಯ ರಾಮನ ದೇವಾಲಯದವರೆಗೆ ರಾಮನ ಮೂರ್ತಿಯ ಮೆರವಣಿಗೆ ನಡೆಯಿತು. ಮೆರವಣಿಗೆಗೆ ನಂದಿಕೋಲು, ಡೋಲು ಸೇರಿದಂತೆ ಜನಪದ ಕಲಾ ತಂಡಗಳು ಮೆರುಗು ನೀಡಿದವು.</p>.<p>ಉತ್ಸವ ಸಮಿತಿಯ ಅಧ್ಯಕ್ಷ ಸಂತೋಷಕುಮಾರ್ ಕೆ., ಅಮೋಘವರ್ಷ, ಹರೀಶ್, ಸಚಿನ್, ಗುಬ್ಬಿ ಮಂಜುನಾಥ್, ಅರುಣ್ ಇದ್ದರು.</p>.<p class="Subhead">ದೇವಾಲಯಗಳಲ್ಲಿ ಪೂಜೆ: ಪಿ.ಜೆ. ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ 6ರಿಂದಲೇ ವಿಶೇಷ ಅಭಿಷೇಕ ಪೂಜೆ ನಡೆದವು. ಗಣಪತಿ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ, ಹೂವಿನ ಅಲಂಕಾರ ಪೂಜೆ ನಡೆದವು.</p>.<p>ಬಳಿಕ ತೊಟ್ಟಿಲೋತ್ಸವ ನಡೆಯಿತು. ಸಂಜೆ ಭಜನೆ ನಡೆಯಿತು. ಭಕ್ತರು ತೊಟ್ಟಿಲನ್ನು ತೂಗಿ, ರಾಮನ ದರ್ಶನ ಪಡೆದರು. </p>.<p>ಪಿ.ಬಿ. ರಸ್ತೆಯ ಕೋದಂಡರಾಮ ದೇವಾಲಯದಲ್ಲೂ ತೊಟ್ಟಿಲೋತ್ಸವ, ವಿಶೇಷ ಪೂಜೆ ನಡೆದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತರ ದಂಡು ಹೆಚ್ಚಿತ್ತು. ಮಾರ್ಚ್ 31ರಂದು ಶ್ರೀರಾಮ ಪಟ್ಟಾಭಿಷೇಕ, ಮೂರ್ತಿಯ ಮೆರವಣಿಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.</p>.<p>ಎಂ.ಸಿ.ಸಿ ‘ಎ’ ಬ್ಲಾಕ್ನಲ್ಲಿ ವಾನರ ಸೇನೆಯಿಂದ ಆಯೋಜಿಸಿದ್ದ ರಾಮನವಮಿ ಉತ್ಸವದಲ್ಲಿ ರಾಮ ದೇವರ ಭಾವಚಿತ್ರದ ಮೆರವಣಿಗೆ ನಡೆಯಿತು. ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು.</p>.<p>ಹಿಂದೂ ಜನಜಾಗೃತಿ ಸೇನಾ ಸಮಿತಿಯ ಜಿಲ್ಲಾ ಘಟಕ ವತಿಯಿಂದ ಮಜ್ಜಿಗೆ ಮತ್ತು ಪಾಯಸ ವಿತರಿಸಲಾಯಿತು. </p>.<p>ಸಮಿತಿ ಅಧ್ಯಕ್ಷ ಚೇತನ್, ಜಿ. ಓಬಳೇಶ್, ಶಾಂತಕುಮಾರ್, ಮಧು, ಶಾಂತೇಶ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶಕುಂತಲಾ, ವಿಜಯಲಕ್ಷ್ಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>