‘ದೇಶಕ್ಕೆ ಯುವ ಸನ್ಯಾಸಿಗಳ ಅವಶ್ಯಕತೆ ಇದೆ ಎಂದು ಹಿಂದೆಯೇ ಹೇಳಿದ್ದೆ. ಅಂಥ ಯುವ ಸನ್ಯಾಸಿಯಾಗಿರುವ ವಚನಾನಂದ ಸ್ವಾಮೀಜಿ 21 ತಿಂಗಳಲ್ಲಿ ಈ ಬಂಜರು ಭೂಮಿಯಲ್ಲಿ ಸ್ವರ್ಗವನ್ನೇ ಸೃಷ್ಟಿಸಿದ್ದಾರೆ. ಯೋಗ, ಭಕ್ತಿಯ ಜತೆಗೆ ಸಂಯೋಜನೆ ಮಾಡುವ ಕಲೆಯೂ ಅವರಲ್ಲಿದೆ. ಸಮಾಜವನ್ನು ಸಂಯೋಜನೆ ಮಾಡಿ ಮುಂದಕ್ಕೆ ಒಯ್ಯುತ್ತಿದ್ದಾರೆ. ಅದು ಕರ್ನಾಟಕದ ಹೆಮ್ಮೆ, ಹಿಂದೂ ಧರ್ಮದ ಸೌಭಾಗ್ಯ’ ಎಂದು ಶ್ಲಾಘಿಸಿದರು.