ದಾವಣಗೆರೆ: ಇ–ನಾಮ್ (ನ್ಯಾಷನಲ್ ಎಗ್ರಿಕಲ್ಚರ್ ಮಾರ್ಕೆಟ್) ಆ್ಯಪ್ನಲ್ಲಿ ಜಿಲ್ಲೆಯ ಎಪಿಎಂಸಿಗಳೂ ನೋಂದಾಯಿಸಿಕೊಂಡರೆ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಇನ್ನಷ್ಟು ಸಿಗಲು ಸುಲಭವಾಗಲಿದೆ ಎಂಬುದು ರೈತರ ಒತ್ತಾಯವಾಗಿದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಇ ಮಾರ್ಕೆಟ್ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್ ಎಂಬ ಆ್ಯಪ್ ಮೊದಲೇ ಇತ್ತು. ಅದುವೇ ಇ–ನಾಮ್ಗೆ ಮಾದರಿಯಾಗಿರುವುದು. ಹಾಗಾಗಿ ಅದರ ಅಗತ್ಯ ಇಲ್ಲ ಎಂದು ಜಾರಿ ಮಾಡಿಲ್ಲ ಎಂಬುದು ಎಪಿಎಂಸಿ ಅಧಿಕಾರಿಗಳ ಸಮರ್ಥನೆ.