ಹರಿಹರ: ಹರಿಹರ ಉಪವಿಭಾಗದ ಘಟಕ-3ರ ಶಾಖಾ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಂಡ ನಿಮಿತ್ತ ಮೇ 16 ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್ಲೆಲ್ಲಿ?: ಗುತ್ತೂರು ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ವಿತರಣೆಯಾಗುವ ಎಫ್ 15-ಕರಲಹಳ್ಳಿ ಎನ್ಜೆವೈ ಮಾರ್ಗಕ್ಕೆ ಸಂಬಂಧಪಟ್ಟ ದೀಟೂರು, ಪಾಮೇನಹಳ್ಳಿ, ಗಂಗನರಸಿ ಹಾಗೂ ಕರಲಹಳ್ಳಿ ಗ್ರಾಮಗಳು ಹಾಗೂ ಸುತ್ತಲಿನ ಪ್ರದೇಶಗಳು.