<p><strong>ಚನ್ನಗಿರಿ: </strong>ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆ ಸೂಳೆಕೆರೆ ಮಾರ್ಗದಿಂದ ಚನ್ನಗಿರಿಗೆ ಹೋಗುವ ರಸ್ತೆ ಕಿರಿದಾದ ಕಾರಣ ಅಪಘಾತ ಸಂಭವಿಸುತ್ತಿತ್ತು. ಸದ್ಯ ರಸ್ತೆಗೆ ಸಿಕ್ಕಿದೆ ವಿಸ್ತರಣೆ ಭಾಗ್ಯ.</p>.<p>ಸೂಳೆಕೆರೆ ಏರಿಯ ಮೇಲೆ ಮಲ್ಪೆ-ಮೊಳಕಾಲ್ಮುರು ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ಪ್ರತಿ ದಿನ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ತಡೆಗೋಡೆ ಇಲ್ಲದೇ ಇರುವುದು ಹಾಗೂ ಕಿರಿದಾದ ರಸ್ತೆಯಿಂದಾಗಿ ಹಲವು ವಾಹನಗಳು ಅಪಘಾತಕ್ಕೆ ಈಡಾಗಿ ಕೆರೆಯಲ್ಲಿ ಬಿದ್ದಿದ್ದವು.</p>.<p>2010ರಿಂದ 2021ವರೆಗೆ ಮಾರ್ಗದಲ್ಲಿ ರಸ್ತೆ ಅಪಘಾತದ 68 ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಮೂರು ಖಾಸಗಿ ಬಸ್ಗಳು ಕೆರೆಗೆ ಬಿದ್ದು, 10ಕ್ಕಿಂತ ಹೆಚ್ಚು ಪ್ರಯಾಣಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ನೂರಾರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದರು. ಈ ರಸ್ತೆ ವಿಸ್ತರಣೆ ಮಾಡುವಂತೆ ಹಲವರಿಂದ ಒತ್ತಾಯ ಕೇಳಿಬಂದಿತ್ತು. ಆದರೂ ಲೋಕೋಪಯೋಗಿ ರಸ್ತೆ ವಿಸ್ತರಣೆಗೆ ಮುಂದಾಗಿರಲಿಲ್ಲ.</p>.<p>ಸೂಳೆಕೆರೆಯಲ್ಲಿ ಆಗುತ್ತಿರುವ ಅಪಘಾತಗಳನ್ನು ತೀವ್ರತೆ ಮನಗಂಡು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ರಸ್ತೆ ವಿಸ್ತರಣೆಗೆ ಮುಂದಾದರು. ಈ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಗೆ ಅವರು ಒಟ್ಟು ₹ 4.5 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದರ ಫಲವಾಗಿ ಸೂಳಕೆರೆಯ ಕಿರಿದಾದ ರಸ್ತೆಗಳು ವಿಸ್ತರಣೆಯಾಗುತ್ತಿವೆ.</p>.<p>ಕೆರೆಯ ಒಂದು ಬದಿಯಲ್ಲಿ ಕಬ್ಬಿಣದ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಇನ್ನು ಎರಡು ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಂಡು ಲೋಕಾರ್ಪಣೆಯಾಗಲಿದೆ.</p>.<p>ಈ ಹಿಂದೆ 7 ಮೀಟರ್ ಅಗಲವಾದ ರಸ್ತೆಯಿತ್ತು. ರಸ್ತೆಯ ಒಂದು ಬದಿಗೆ ಬಂಡೆಗಳು ತುಂಬಿರುವ ಗುಡ್ಡ ಇತ್ತು. ಸದ್ಯ ಈ ರಸ್ತೆಯನ್ನು 700 ಮೀಟರ್ ದೂರದವರೆಗೆ ನಿರ್ಮಿಸಿದ್ದು, 15 ಮೀಟರ್ವರೆಗೆ ವಿಸ್ತರಿಸಲಾಗಿದೆ. ರಸ್ತೆ ಮಾಡಲು ಅಡ್ಡಿಯಾಗಿದ್ದ ಬಂಡೆಗಳನ್ನು ಲಘು ಸ್ಫೋಟಕಗಳನ್ನು ಬಳಸಿ ಒಡೆದು, ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗಿದೆ.</p>.<p>ಏಕಕಾಲದಲ್ಲಿ ಎರಡು ಬಸ್ ಅಥವಾ ವಾಹನಗಳು ಸುಗಮವಾಗಿ ಸಂಚರಿಸುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಸ್ತೆ ಬದಿಯಲ್ಲಿ ಬಣ್ಣದ ಸಿಮೆಂಟ್ ಹಾಸುಗಳನ್ನೂ ಹಾಕಲಾಗಿದೆ. ಈಗಾಗಲೇ ಬಸವರಾಜಪುರ ಗ್ರಾಮದಿಂದ ಸೇವಾನಗರ ಗ್ರಾಮದವರೆಗೆ₹ 1.5 ಕೋಟಿ ವೆಚ್ಚದಲ್ಲಿ ಮೊದಲನೇ ಹಂತದ ರಸ್ತೆಯನ್ನು ಪೂರ್ಣಗೊಳಿಸಲಾಗಿದೆ. ಈಗ ಎರಡನೇ ಹಂತದ 700 ಮೀಟರ್ ರಸ್ತೆ ಕಾಮಗಾರಿಯನ್ನು₹ 3 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದೆ. ಎರಡು ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಶಿವಕುಮಾರ್ ಮಾಹಿತಿ ನೀಡಿದರು.</p>.<p>‘ಹಿಂದೆಂದೂ ಕಾಣದಂತಹ ಹೊಸ ರಸ್ತೆ ಸೂಳೆಕೆರೆಯಲ್ಲಿ ನಿರ್ಮಾಣವಾಗುತ್ತಿದೆ. ಈ ಕೆರೆಯ ಏರಿಯ ಮೇಲೆ ಪ್ರತಿದಿನ ವಾಹನಗಳು ಅಪಘಾತಕ್ಕೆ ಈಡಾಗುವುದನ್ನು ಕಂಡಿದ್ದೆವು. ಈಗ ರಸ್ತೆ ವಿಸ್ತರಣೆ ಮಾಡಲು ಮುಂದಾಗಿರುವುದು ಖುಷಿಯ ಸಂಗತಿ’ ಎಂದು ಕೆರೆಬಿಳಚಿ ಗ್ರಾಮದ ಅಲ್ಪಾಫ್ ಸಂತಸ ಹಂಚಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಗಿರಿ: </strong>ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆ ಸೂಳೆಕೆರೆ ಮಾರ್ಗದಿಂದ ಚನ್ನಗಿರಿಗೆ ಹೋಗುವ ರಸ್ತೆ ಕಿರಿದಾದ ಕಾರಣ ಅಪಘಾತ ಸಂಭವಿಸುತ್ತಿತ್ತು. ಸದ್ಯ ರಸ್ತೆಗೆ ಸಿಕ್ಕಿದೆ ವಿಸ್ತರಣೆ ಭಾಗ್ಯ.</p>.<p>ಸೂಳೆಕೆರೆ ಏರಿಯ ಮೇಲೆ ಮಲ್ಪೆ-ಮೊಳಕಾಲ್ಮುರು ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ಪ್ರತಿ ದಿನ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ತಡೆಗೋಡೆ ಇಲ್ಲದೇ ಇರುವುದು ಹಾಗೂ ಕಿರಿದಾದ ರಸ್ತೆಯಿಂದಾಗಿ ಹಲವು ವಾಹನಗಳು ಅಪಘಾತಕ್ಕೆ ಈಡಾಗಿ ಕೆರೆಯಲ್ಲಿ ಬಿದ್ದಿದ್ದವು.</p>.<p>2010ರಿಂದ 2021ವರೆಗೆ ಮಾರ್ಗದಲ್ಲಿ ರಸ್ತೆ ಅಪಘಾತದ 68 ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಮೂರು ಖಾಸಗಿ ಬಸ್ಗಳು ಕೆರೆಗೆ ಬಿದ್ದು, 10ಕ್ಕಿಂತ ಹೆಚ್ಚು ಪ್ರಯಾಣಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ನೂರಾರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದರು. ಈ ರಸ್ತೆ ವಿಸ್ತರಣೆ ಮಾಡುವಂತೆ ಹಲವರಿಂದ ಒತ್ತಾಯ ಕೇಳಿಬಂದಿತ್ತು. ಆದರೂ ಲೋಕೋಪಯೋಗಿ ರಸ್ತೆ ವಿಸ್ತರಣೆಗೆ ಮುಂದಾಗಿರಲಿಲ್ಲ.</p>.<p>ಸೂಳೆಕೆರೆಯಲ್ಲಿ ಆಗುತ್ತಿರುವ ಅಪಘಾತಗಳನ್ನು ತೀವ್ರತೆ ಮನಗಂಡು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ರಸ್ತೆ ವಿಸ್ತರಣೆಗೆ ಮುಂದಾದರು. ಈ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಗೆ ಅವರು ಒಟ್ಟು ₹ 4.5 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದರ ಫಲವಾಗಿ ಸೂಳಕೆರೆಯ ಕಿರಿದಾದ ರಸ್ತೆಗಳು ವಿಸ್ತರಣೆಯಾಗುತ್ತಿವೆ.</p>.<p>ಕೆರೆಯ ಒಂದು ಬದಿಯಲ್ಲಿ ಕಬ್ಬಿಣದ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಇನ್ನು ಎರಡು ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಂಡು ಲೋಕಾರ್ಪಣೆಯಾಗಲಿದೆ.</p>.<p>ಈ ಹಿಂದೆ 7 ಮೀಟರ್ ಅಗಲವಾದ ರಸ್ತೆಯಿತ್ತು. ರಸ್ತೆಯ ಒಂದು ಬದಿಗೆ ಬಂಡೆಗಳು ತುಂಬಿರುವ ಗುಡ್ಡ ಇತ್ತು. ಸದ್ಯ ಈ ರಸ್ತೆಯನ್ನು 700 ಮೀಟರ್ ದೂರದವರೆಗೆ ನಿರ್ಮಿಸಿದ್ದು, 15 ಮೀಟರ್ವರೆಗೆ ವಿಸ್ತರಿಸಲಾಗಿದೆ. ರಸ್ತೆ ಮಾಡಲು ಅಡ್ಡಿಯಾಗಿದ್ದ ಬಂಡೆಗಳನ್ನು ಲಘು ಸ್ಫೋಟಕಗಳನ್ನು ಬಳಸಿ ಒಡೆದು, ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗಿದೆ.</p>.<p>ಏಕಕಾಲದಲ್ಲಿ ಎರಡು ಬಸ್ ಅಥವಾ ವಾಹನಗಳು ಸುಗಮವಾಗಿ ಸಂಚರಿಸುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಸ್ತೆ ಬದಿಯಲ್ಲಿ ಬಣ್ಣದ ಸಿಮೆಂಟ್ ಹಾಸುಗಳನ್ನೂ ಹಾಕಲಾಗಿದೆ. ಈಗಾಗಲೇ ಬಸವರಾಜಪುರ ಗ್ರಾಮದಿಂದ ಸೇವಾನಗರ ಗ್ರಾಮದವರೆಗೆ₹ 1.5 ಕೋಟಿ ವೆಚ್ಚದಲ್ಲಿ ಮೊದಲನೇ ಹಂತದ ರಸ್ತೆಯನ್ನು ಪೂರ್ಣಗೊಳಿಸಲಾಗಿದೆ. ಈಗ ಎರಡನೇ ಹಂತದ 700 ಮೀಟರ್ ರಸ್ತೆ ಕಾಮಗಾರಿಯನ್ನು₹ 3 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದೆ. ಎರಡು ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಶಿವಕುಮಾರ್ ಮಾಹಿತಿ ನೀಡಿದರು.</p>.<p>‘ಹಿಂದೆಂದೂ ಕಾಣದಂತಹ ಹೊಸ ರಸ್ತೆ ಸೂಳೆಕೆರೆಯಲ್ಲಿ ನಿರ್ಮಾಣವಾಗುತ್ತಿದೆ. ಈ ಕೆರೆಯ ಏರಿಯ ಮೇಲೆ ಪ್ರತಿದಿನ ವಾಹನಗಳು ಅಪಘಾತಕ್ಕೆ ಈಡಾಗುವುದನ್ನು ಕಂಡಿದ್ದೆವು. ಈಗ ರಸ್ತೆ ವಿಸ್ತರಣೆ ಮಾಡಲು ಮುಂದಾಗಿರುವುದು ಖುಷಿಯ ಸಂಗತಿ’ ಎಂದು ಕೆರೆಬಿಳಚಿ ಗ್ರಾಮದ ಅಲ್ಪಾಫ್ ಸಂತಸ ಹಂಚಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>