<p>ದಾವಣಗೆರೆ: ರಕ್ಷಣಾ ವೇದಿಕೆ ಹೆಸರು ಹೇಳಿಕೊಂಡು ದಾವಣಗೆರೆಯ ವ್ಯಕ್ತಿಯೊಬ್ಬರಿಗೆ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಇಲ್ಲಿನ ವಿದ್ಯಾನಗರ ಪೊಲೀಸರು ಬಂಧಿತರಿಂದ ₹ 1.20 ಲಕ್ಷ ವಶಪಡಿಸಿಕೊಂಡಿದ್ದಾರೆ.</p>.<p>ಹುಬ್ಬಳ್ಳಿಯ ಶಿವರಾಜ್ ಚಂದ್ರ ಪಟ್ಟಣ (29), ಹಾಸನದ ರಮ್ಯಾ, ತುಮಕೂರಿನ ಪವಿತ್ರಾ (24), ಚಿಕ್ಕಮಗಳೂರಿನ ಸುರೇಶ್ ಕುಮಾರ (44) ಬಂಧಿತರು.</p>.<p>ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಯುವತಿಯೊಂದಿಗೆ ದಾವಣಗೆರೆಯ ವ್ಯಕ್ತಿಯು ಯುವತಿಯ ಜೊತೆ ಹೋಂ ಸ್ಟೇನಲ್ಲಿ ಇರುವಾಗ ಈ ಆರೋಪಿಗಳು ‘ನಿಮ್ಮ ಖಾಸಗಿ ಫೋಟೊ ಸೆರೆ ಹಿಡಿದಿದ್ದೇವೆ’ ಎಂದು ಎದುರಿಸಿ ₹ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ‘ಹಣ ಕೊಡದಿದ್ದರೆ ನಿಮ್ಮ ಮನೆಯವರಿಗೆ ತಿಳಿಸುತ್ತೇನೆ’ ಎಂದು ಹೆದರಿಸಿದ್ದಾರೆ. ಆಗ ದೂರುದಾರರು₹ 1.20 ನೀಡಿದ್ದಾರೆ. ಉಳಿದ ಹಣಕ್ಕೂ ಆರೋಪಿಗಳು ಬೇಡಿಕೆ ಇಟ್ಟಿದ್ದಾರೆ.</p>.<p>ಚೀತಾ ಗಸ್ತಿನಲ್ಲಿದ್ದ ಸಿಬ್ಬಂದಿ ನಾಗರಾಜ ಅವರು ಮಾಹಿತಿ ಆಧರಿಸಿ ಸಿಬ್ಬಂದಿಯೊಂದಿಗೆ ಈ ನಾಲ್ವರನ್ನು ಬಂಧಿಸಿದ್ದು, ಅವರಿಂದ ನಗದು, ಒಂದು ಜೆನ್ ಕಾರು ಹಾಗೂ 6 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ನೇತೃತ್ವದಲ್ಲಿ ಕೆ.ಟಿ.ಜೆ. ನಗರ ವೃತ್ತದ ಸಿಪಿಐ ಜಿ.ಶಶಿಧರ್, ಪಿಎಸ್ಐ ರೇಣುಕಾ ಜಿ.ಎಂ. ಕಾಂತರಾಜ್, ಎಎಸ್ಐ ನಾಗರಾಜ್, ಮಂಜಪ್ಪ, ಬುಡೇನ್ ವಲಿ, ಗಿರಿಧರ್, ಬಸವರಾಜ್ ತಂಡದಲ್ಲಿದ್ದರು. ಸಿಬ್ಬಂದಿಯನ್ನು ಎಸ್ಪಿ ಸಿ.ಬಿ.ರಿಷ್ಯಂತ್, ಎಎಸ್ಪಿ ಆರ್ಬಿ ಬಸರಗಿ ಶ್ಲಾಘಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ರಕ್ಷಣಾ ವೇದಿಕೆ ಹೆಸರು ಹೇಳಿಕೊಂಡು ದಾವಣಗೆರೆಯ ವ್ಯಕ್ತಿಯೊಬ್ಬರಿಗೆ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಇಲ್ಲಿನ ವಿದ್ಯಾನಗರ ಪೊಲೀಸರು ಬಂಧಿತರಿಂದ ₹ 1.20 ಲಕ್ಷ ವಶಪಡಿಸಿಕೊಂಡಿದ್ದಾರೆ.</p>.<p>ಹುಬ್ಬಳ್ಳಿಯ ಶಿವರಾಜ್ ಚಂದ್ರ ಪಟ್ಟಣ (29), ಹಾಸನದ ರಮ್ಯಾ, ತುಮಕೂರಿನ ಪವಿತ್ರಾ (24), ಚಿಕ್ಕಮಗಳೂರಿನ ಸುರೇಶ್ ಕುಮಾರ (44) ಬಂಧಿತರು.</p>.<p>ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಯುವತಿಯೊಂದಿಗೆ ದಾವಣಗೆರೆಯ ವ್ಯಕ್ತಿಯು ಯುವತಿಯ ಜೊತೆ ಹೋಂ ಸ್ಟೇನಲ್ಲಿ ಇರುವಾಗ ಈ ಆರೋಪಿಗಳು ‘ನಿಮ್ಮ ಖಾಸಗಿ ಫೋಟೊ ಸೆರೆ ಹಿಡಿದಿದ್ದೇವೆ’ ಎಂದು ಎದುರಿಸಿ ₹ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ‘ಹಣ ಕೊಡದಿದ್ದರೆ ನಿಮ್ಮ ಮನೆಯವರಿಗೆ ತಿಳಿಸುತ್ತೇನೆ’ ಎಂದು ಹೆದರಿಸಿದ್ದಾರೆ. ಆಗ ದೂರುದಾರರು₹ 1.20 ನೀಡಿದ್ದಾರೆ. ಉಳಿದ ಹಣಕ್ಕೂ ಆರೋಪಿಗಳು ಬೇಡಿಕೆ ಇಟ್ಟಿದ್ದಾರೆ.</p>.<p>ಚೀತಾ ಗಸ್ತಿನಲ್ಲಿದ್ದ ಸಿಬ್ಬಂದಿ ನಾಗರಾಜ ಅವರು ಮಾಹಿತಿ ಆಧರಿಸಿ ಸಿಬ್ಬಂದಿಯೊಂದಿಗೆ ಈ ನಾಲ್ವರನ್ನು ಬಂಧಿಸಿದ್ದು, ಅವರಿಂದ ನಗದು, ಒಂದು ಜೆನ್ ಕಾರು ಹಾಗೂ 6 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ನೇತೃತ್ವದಲ್ಲಿ ಕೆ.ಟಿ.ಜೆ. ನಗರ ವೃತ್ತದ ಸಿಪಿಐ ಜಿ.ಶಶಿಧರ್, ಪಿಎಸ್ಐ ರೇಣುಕಾ ಜಿ.ಎಂ. ಕಾಂತರಾಜ್, ಎಎಸ್ಐ ನಾಗರಾಜ್, ಮಂಜಪ್ಪ, ಬುಡೇನ್ ವಲಿ, ಗಿರಿಧರ್, ಬಸವರಾಜ್ ತಂಡದಲ್ಲಿದ್ದರು. ಸಿಬ್ಬಂದಿಯನ್ನು ಎಸ್ಪಿ ಸಿ.ಬಿ.ರಿಷ್ಯಂತ್, ಎಎಸ್ಪಿ ಆರ್ಬಿ ಬಸರಗಿ ಶ್ಲಾಘಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>