<p><strong>ಮಲೇಬೆನ್ನೂರು:</strong> ಪಟ್ಟಣದ ಹಿಂದೂ ಮಹಾ ಗಣಪತಿ ವಿಸರ್ಜನಾ ಕಾರ್ಯಕ್ರಮ ಸೆ. 21ರಂದು ನಡೆಯಲಿದ್ದು ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ಪೊಲೀಸ್ ಇಲಾಖೆ ವಾಹನಗಳ ಮಾರ್ಗ ಬದಲಾವಣೆ ಮಾಡಿದೆ.</p>.<p>ಹೊನ್ನಾಳಿಯಿಂದ ಹರಿಹರದ ಕಡೆ ಹೋಗುವ ಎಲ್ಲ ವಾಹನಗಳು ಕೊಮಾರನಹಳ್ಳಿ ಭದ್ರಾ ಮುಖ್ಯನಾಲೆ ಸೇವಾ ರಸ್ತೆ ಮೂಲಕ ಗುಡ್ಡ ಬೇವಿನಹಳ್ಳಿ– ಜಿಗಳಿ– ಕುಂಬಳೂರು ಮೂಲಕ ಸಂಚರಿಸಲಿವೆ.</p>.<p>ಅದೇ ರೀತಿ ಹರಿಹರದಿಂದ ಹೊನ್ನಾಳಿ ಕಡೆ ಸಂಚರಿಸುವ ವಾಹನಗಳು ಕುಂಬಳೂರು, ನಿಟ್ಟೂರು, ಹರಳಹಳ್ಳಿ, ಹಾಲಿವಾಣ, ಕೊಮಾರನಹಳ್ಳಿ ಕೆರೆ ಏರಿ ಕಡೆಯಿಂದ ಸಂಚರಿಸಲಿವೆ.</p>.<p>ಪಟ್ಟಣದಲ್ಲಿ ಸೆ 21ರಂದು ಬೆಳಿಗ್ಗೆ 6ರಿಂದ ರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧಿಸಿದೆ.</p>.<p><strong>ಪೊಲೀಸ್ ಭದ್ರತೆ:</strong> ಇಬ್ಬರು ಡಿವೈಎಸ್ಪಿ, 8 ಜನ ಸಿಪಿಐ, 20 ಜನ ಪಿಎಸ್ಐ, 30 ಎಎಸ್ಐ, 240 ಜನ ಪೊಲೀಸರು, ಡಿಎಆರ್ 2 ತುಕಡಿ, ಕೆಎಸ್ಆರ್ಪಿ ತುಕಡಿಯನ್ನು ನಿಯೋಜಿಸಲಾಗಿದೆ. ಸಿ.ಸಿ.ಟಿ.ವಿ ಕ್ಯಾಮೆರಾ, ಡ್ರೋನ್ ಬಳಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.</p>.<p>ಪಟ್ಟಣವನ್ನು ತಳಿರು ತೋರಣ, ಬಾಳೆಕಂಬ, ಬ್ಯಾನರ್, ಬಂಟಿಂಗ್ ಕಟ್ಟಿ ಶೃಂಗರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು:</strong> ಪಟ್ಟಣದ ಹಿಂದೂ ಮಹಾ ಗಣಪತಿ ವಿಸರ್ಜನಾ ಕಾರ್ಯಕ್ರಮ ಸೆ. 21ರಂದು ನಡೆಯಲಿದ್ದು ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ಪೊಲೀಸ್ ಇಲಾಖೆ ವಾಹನಗಳ ಮಾರ್ಗ ಬದಲಾವಣೆ ಮಾಡಿದೆ.</p>.<p>ಹೊನ್ನಾಳಿಯಿಂದ ಹರಿಹರದ ಕಡೆ ಹೋಗುವ ಎಲ್ಲ ವಾಹನಗಳು ಕೊಮಾರನಹಳ್ಳಿ ಭದ್ರಾ ಮುಖ್ಯನಾಲೆ ಸೇವಾ ರಸ್ತೆ ಮೂಲಕ ಗುಡ್ಡ ಬೇವಿನಹಳ್ಳಿ– ಜಿಗಳಿ– ಕುಂಬಳೂರು ಮೂಲಕ ಸಂಚರಿಸಲಿವೆ.</p>.<p>ಅದೇ ರೀತಿ ಹರಿಹರದಿಂದ ಹೊನ್ನಾಳಿ ಕಡೆ ಸಂಚರಿಸುವ ವಾಹನಗಳು ಕುಂಬಳೂರು, ನಿಟ್ಟೂರು, ಹರಳಹಳ್ಳಿ, ಹಾಲಿವಾಣ, ಕೊಮಾರನಹಳ್ಳಿ ಕೆರೆ ಏರಿ ಕಡೆಯಿಂದ ಸಂಚರಿಸಲಿವೆ.</p>.<p>ಪಟ್ಟಣದಲ್ಲಿ ಸೆ 21ರಂದು ಬೆಳಿಗ್ಗೆ 6ರಿಂದ ರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧಿಸಿದೆ.</p>.<p><strong>ಪೊಲೀಸ್ ಭದ್ರತೆ:</strong> ಇಬ್ಬರು ಡಿವೈಎಸ್ಪಿ, 8 ಜನ ಸಿಪಿಐ, 20 ಜನ ಪಿಎಸ್ಐ, 30 ಎಎಸ್ಐ, 240 ಜನ ಪೊಲೀಸರು, ಡಿಎಆರ್ 2 ತುಕಡಿ, ಕೆಎಸ್ಆರ್ಪಿ ತುಕಡಿಯನ್ನು ನಿಯೋಜಿಸಲಾಗಿದೆ. ಸಿ.ಸಿ.ಟಿ.ವಿ ಕ್ಯಾಮೆರಾ, ಡ್ರೋನ್ ಬಳಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.</p>.<p>ಪಟ್ಟಣವನ್ನು ತಳಿರು ತೋರಣ, ಬಾಳೆಕಂಬ, ಬ್ಯಾನರ್, ಬಂಟಿಂಗ್ ಕಟ್ಟಿ ಶೃಂಗರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>