‘ನನ್ನ ಸೇವಾವಧಿಯಲ್ಲಿ ಇಷ್ಟು ದೊಡ್ಡ ಗಾತ್ರದ ಉಡವನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಕೊಂಡುಕುರಿ ಧಾಮ ಘೋಷಣೆಯ ನಂತರ ವನ್ಯ ಪ್ರಾಣಿಗಳ ಬೇಟೆಯ ನಿಯಂತ್ರಣ ಮತ್ತು ಉತ್ತಮ ಸಂರಕ್ಷಣೆಯಿಂದ ಸರಿಸೃಪಗಳು ಸೇರಿ ಎಲ್ಲಾ ಪ್ರಾಣಿ, ಪಕ್ಷಿ ಸಂಕುಲದ ಸಂತತಿಯ ಅತ್ಯುತ್ತಮ ಆವಾಸ ಸ್ಥಾನವಾಗಿ ಈ ಅರಣ್ಯ ಮಹತ್ವ ಪಡೆದಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ಮೂರ್ತಿ ಹೇಳಿದರು.