ದಾವಣಗೆರೆ: ‘ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ವಾರ್ಡ್ಗಳಿಗೆ ಹೆಚ್ಚಿನ ಅನುದಾನ ಮೀಸಲಿರಿಸಲಾಗಿದೆ ಎಂಬ ಮಹಾನಗರ ಪಾಲಿಕೆ ಮೇಯರ್ಬಿ.ಜಿ. ಅಜಯಕುಮಾರ್ ಹೇಳಿಕೆ ಸತ್ಯಕ್ಕೆ ದೂರ. ಯಾವುದೇ ವಾರ್ಡ್ಗಳಿಗೆ ನಾವು ಕೇಳಿದಷ್ಟು ನೀಡಿಲ್ಲ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹ 2 ಕೋಟಿ, ₹ 3 ಕೋಟಿ ಕೇಳಿದ ಕಡೆ ಕೇವಲ ₹ 50 ಲಕ್ಷ, 60 ಲಕ್ಷ ನೀಡಿದ್ದಾರೆ’ ಎಂದು ಪಾಲಿಕೆ ವಿರೋಧಪಕ್ಷದ ನಾಯಕ ಎ. ನಾಗರಾಜ್ ಆರೋಪಿಸಿದರು.