<p><strong>ದಾವಣಗೆರೆ:</strong> ‘ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ವಾರ್ಡ್ಗಳಿಗೆ ಹೆಚ್ಚಿನ ಅನುದಾನ ಮೀಸಲಿರಿಸಲಾಗಿದೆ ಎಂಬ ಮಹಾನಗರ ಪಾಲಿಕೆ ಮೇಯರ್ಬಿ.ಜಿ. ಅಜಯಕುಮಾರ್ ಹೇಳಿಕೆ ಸತ್ಯಕ್ಕೆ ದೂರ. ಯಾವುದೇ ವಾರ್ಡ್ಗಳಿಗೆ ನಾವು ಕೇಳಿದಷ್ಟು ನೀಡಿಲ್ಲ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹ 2 ಕೋಟಿ, ₹ 3 ಕೋಟಿ ಕೇಳಿದ ಕಡೆ ಕೇವಲ ₹ 50 ಲಕ್ಷ, 60 ಲಕ್ಷ ನೀಡಿದ್ದಾರೆ’ ಎಂದು ಪಾಲಿಕೆ ವಿರೋಧಪಕ್ಷದ ನಾಯಕ ಎ. ನಾಗರಾಜ್ ಆರೋಪಿಸಿದರು.</p>.<p>‘ಅನುದಾನ ಹಂಚಿಕೆ ತಾರತಮ್ಯವನ್ನು 15 ದಿನಗಳೊಳಗಾಗಿ ಸರಿಪಡಿಸಬೇಕು. ಇಲ್ಲದಿದ್ದರೆ ಮೇಯರ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದಾಗ ಅವರಿಗೆ ಘೆರಾವ್ ಹಾಕಲಾಗುವುದು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.</p>.<p>‘ಕಾಂಗ್ರೆಸ್ಗೆ ಅಧಿಕಾರದ ದಾಹ ಇಲ್ಲ. ನೀರು ಪೂರೈಕೆಯಾಗುತ್ತಿಲ್ಲ. ಮೋಟರ್ ಕೆಟ್ಟಿದೆ ಎಂದು ನಾವು ಅವರನ್ನು ಎಚ್ಚರಿಸಿದಾಗ ಎಚ್ಚೆತ್ತುಕೊಳ್ಳುವ ಬಿಜೆಪಿಗೆ ಅಭಿವೃದ್ಧಿ ಬೇಕಾಗಿಲ್ಲ. ತಳ್ಳುಗಾಡಿ ವ್ಯಾಪಾರಿಗಳಿಂದಲೂ ಮಾಮೂಲಿ ವಸೂಲಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.</p>.<p>‘ನನ್ನ 16ನೇ ವಾರ್ಡ್ಗೆ ₹ 70 ಲಕ್ಷ ಅನುದಾನ ಮಾತ್ರ ಹಂಚಿಕೆ ಮಾಡಿದ್ದಾರೆ. ಅದೂ ಪಕ್ಕದ ವಾರ್ಡ್ನ ₹ 30 ಲಕ್ಷ ಸೇರಿ ₹ 70 ಲಕ್ಷ ಎಂದು ತೋರಿಸಿದ್ದಾರೆ. 35ನೇ ವಾರ್ಡ್ನಲ್ಲಿ ಕಾಮಗಾರಿಗೆ ಅನುದಾನ ಕೇಳಿದ್ದು ₹ 2. 85 ಕೋಟಿ. ನೀಡಿದ್ದು ₹ 60 ಲಕ್ಷ. ಇಲ್ಲಿ ಟಿಎಸ್ಪಿ ಯೋಜನೆಯಡಿ ₹ 1.34 ಕೋಟಿ ಹಂಚಿಕೆ ಮಾಡಿದ್ದಾರೆ. ಇದು ಎಸ್ಟಿ ಜನಾಂಗ ಇರುವ ಕಡೆ ಈ ಅನುದಾನ ನೀಡಲೇಬೇಕು. ನೀಡದಿದ್ದರೆ ಅನುದಾನ ವಾಪಸ್ ಹೋಗುತ್ತದೆ. ಇದರಲ್ಲಿ ಅವರ ಹೆಚ್ಚುಗಾರಿಕೆ ಇಲ್ಲ. ಕಾಂಗ್ರೆಸ್ ಸದಸ್ಯರು ಇರುವ 22 ವಾರ್ಡ್ಗಳಲ್ಲಿ 4 ವಾರ್ಡ್ಗಳ ವಿವರ ಮಾತ್ರ ಮೇಯರ್ ನೀಡಿದ್ದಾರೆ. ಉಳಿದ 18 ವಾರ್ಡ್ಗಳಿಗೆ ಏನು ಅನುದಾನ ನೀಡಿದ್ದಾರೆ ಎಂಬುದನ್ನು ಹೇಳಿಲ್ಲ’ ಎಂದು ತಿರುಗೇಟು ನೀಡಿದರು.</p>.<p>‘ಬಹುತೇಕ ವಾರ್ಡ್ ಸದಸ್ಯರು ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ನೀಡಿ ಎಲ್ಲ ಕಡೆ ₹ 2.5 ಕೋಟಿ, ₹ 2 ಕೋಟಿ ಅನುದಾನ ಕೇಳಿದ್ದರು. ಆದರೆ ಅವರು ನೀಡಿದ್ದು ₹ 50 ಲಕ್ಷ, ₹ 60 ಲಕ್ಷ ಮಾತ್ರ.ಸ್ಮಾರ್ಟ್ ಸಿಟಿ ಯೋಜನೆಯಡಿ ಕೆಲ ವಾರ್ಡ್ಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳು ಏನು ಎಂಬುದರ ಬಗ್ಗೆ ಮೇಯರ್ ಮೊದಲು ತಿಳಿದುಕೊಳ್ಳಲಿ’ ಎಂದರು.</p>.<p>ಆಶಾ ಉಮೇಶ್ ಪ್ರತಿನಿಧಿಸುವ ವಾರ್ಡ್ಗೆ ₹ 60 ಲಕ್ಷ ನೀಡಿ, ಶಾಸಕ ಎಸ್.ಎ. ರವೀಂದ್ರನಾಥ್ ಪುತ್ರಿ ವೀಣಾ ನಂಜಪ್ಪ ಪ್ರತಿನಿಧಿಸುವ ವಾರ್ಡ್ಗೆ ₹ 5. 25 ಕೋಟಿ ಅನುದಾನ ನೀಡಿದ್ದಾರೆಎಂದು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ‘ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ವಾರ್ಡ್ಗಳಿಗೆ ಹೆಚ್ಚಿನ ಅನುದಾನ ಮೀಸಲಿರಿಸಲಾಗಿದೆ ಎಂಬ ಮಹಾನಗರ ಪಾಲಿಕೆ ಮೇಯರ್ಬಿ.ಜಿ. ಅಜಯಕುಮಾರ್ ಹೇಳಿಕೆ ಸತ್ಯಕ್ಕೆ ದೂರ. ಯಾವುದೇ ವಾರ್ಡ್ಗಳಿಗೆ ನಾವು ಕೇಳಿದಷ್ಟು ನೀಡಿಲ್ಲ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹ 2 ಕೋಟಿ, ₹ 3 ಕೋಟಿ ಕೇಳಿದ ಕಡೆ ಕೇವಲ ₹ 50 ಲಕ್ಷ, 60 ಲಕ್ಷ ನೀಡಿದ್ದಾರೆ’ ಎಂದು ಪಾಲಿಕೆ ವಿರೋಧಪಕ್ಷದ ನಾಯಕ ಎ. ನಾಗರಾಜ್ ಆರೋಪಿಸಿದರು.</p>.<p>‘ಅನುದಾನ ಹಂಚಿಕೆ ತಾರತಮ್ಯವನ್ನು 15 ದಿನಗಳೊಳಗಾಗಿ ಸರಿಪಡಿಸಬೇಕು. ಇಲ್ಲದಿದ್ದರೆ ಮೇಯರ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದಾಗ ಅವರಿಗೆ ಘೆರಾವ್ ಹಾಕಲಾಗುವುದು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.</p>.<p>‘ಕಾಂಗ್ರೆಸ್ಗೆ ಅಧಿಕಾರದ ದಾಹ ಇಲ್ಲ. ನೀರು ಪೂರೈಕೆಯಾಗುತ್ತಿಲ್ಲ. ಮೋಟರ್ ಕೆಟ್ಟಿದೆ ಎಂದು ನಾವು ಅವರನ್ನು ಎಚ್ಚರಿಸಿದಾಗ ಎಚ್ಚೆತ್ತುಕೊಳ್ಳುವ ಬಿಜೆಪಿಗೆ ಅಭಿವೃದ್ಧಿ ಬೇಕಾಗಿಲ್ಲ. ತಳ್ಳುಗಾಡಿ ವ್ಯಾಪಾರಿಗಳಿಂದಲೂ ಮಾಮೂಲಿ ವಸೂಲಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.</p>.<p>‘ನನ್ನ 16ನೇ ವಾರ್ಡ್ಗೆ ₹ 70 ಲಕ್ಷ ಅನುದಾನ ಮಾತ್ರ ಹಂಚಿಕೆ ಮಾಡಿದ್ದಾರೆ. ಅದೂ ಪಕ್ಕದ ವಾರ್ಡ್ನ ₹ 30 ಲಕ್ಷ ಸೇರಿ ₹ 70 ಲಕ್ಷ ಎಂದು ತೋರಿಸಿದ್ದಾರೆ. 35ನೇ ವಾರ್ಡ್ನಲ್ಲಿ ಕಾಮಗಾರಿಗೆ ಅನುದಾನ ಕೇಳಿದ್ದು ₹ 2. 85 ಕೋಟಿ. ನೀಡಿದ್ದು ₹ 60 ಲಕ್ಷ. ಇಲ್ಲಿ ಟಿಎಸ್ಪಿ ಯೋಜನೆಯಡಿ ₹ 1.34 ಕೋಟಿ ಹಂಚಿಕೆ ಮಾಡಿದ್ದಾರೆ. ಇದು ಎಸ್ಟಿ ಜನಾಂಗ ಇರುವ ಕಡೆ ಈ ಅನುದಾನ ನೀಡಲೇಬೇಕು. ನೀಡದಿದ್ದರೆ ಅನುದಾನ ವಾಪಸ್ ಹೋಗುತ್ತದೆ. ಇದರಲ್ಲಿ ಅವರ ಹೆಚ್ಚುಗಾರಿಕೆ ಇಲ್ಲ. ಕಾಂಗ್ರೆಸ್ ಸದಸ್ಯರು ಇರುವ 22 ವಾರ್ಡ್ಗಳಲ್ಲಿ 4 ವಾರ್ಡ್ಗಳ ವಿವರ ಮಾತ್ರ ಮೇಯರ್ ನೀಡಿದ್ದಾರೆ. ಉಳಿದ 18 ವಾರ್ಡ್ಗಳಿಗೆ ಏನು ಅನುದಾನ ನೀಡಿದ್ದಾರೆ ಎಂಬುದನ್ನು ಹೇಳಿಲ್ಲ’ ಎಂದು ತಿರುಗೇಟು ನೀಡಿದರು.</p>.<p>‘ಬಹುತೇಕ ವಾರ್ಡ್ ಸದಸ್ಯರು ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ನೀಡಿ ಎಲ್ಲ ಕಡೆ ₹ 2.5 ಕೋಟಿ, ₹ 2 ಕೋಟಿ ಅನುದಾನ ಕೇಳಿದ್ದರು. ಆದರೆ ಅವರು ನೀಡಿದ್ದು ₹ 50 ಲಕ್ಷ, ₹ 60 ಲಕ್ಷ ಮಾತ್ರ.ಸ್ಮಾರ್ಟ್ ಸಿಟಿ ಯೋಜನೆಯಡಿ ಕೆಲ ವಾರ್ಡ್ಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳು ಏನು ಎಂಬುದರ ಬಗ್ಗೆ ಮೇಯರ್ ಮೊದಲು ತಿಳಿದುಕೊಳ್ಳಲಿ’ ಎಂದರು.</p>.<p>ಆಶಾ ಉಮೇಶ್ ಪ್ರತಿನಿಧಿಸುವ ವಾರ್ಡ್ಗೆ ₹ 60 ಲಕ್ಷ ನೀಡಿ, ಶಾಸಕ ಎಸ್.ಎ. ರವೀಂದ್ರನಾಥ್ ಪುತ್ರಿ ವೀಣಾ ನಂಜಪ್ಪ ಪ್ರತಿನಿಧಿಸುವ ವಾರ್ಡ್ಗೆ ₹ 5. 25 ಕೋಟಿ ಅನುದಾನ ನೀಡಿದ್ದಾರೆಎಂದು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>