ದಾವಣಗೆರೆ: ಕೊರೊನಾದಿಂದ ಸಂಕಷ್ಟಕ್ಕೆ ಈಡಾದ ಎಪಿಎಂಸಿ, ಗ್ರಾಮೀಣ ಬಜಾರ, ಮಿಲ್ ಗೋಡೌನ್, ವೇರಹೌಸ್, ಗೂಡ್ಸ್ಶೆಡ್, ಟ್ಯ್ರಾನ್ಸ್ಪೋರ್ಟ್, ಬಂದರುಗಳಲ್ಲಿರುವ ಹಮಾಲಿ ಕಾರ್ಮಿಕರಿಗೆ ಆರ್ಥಿಕ ನೆರವು ಮತ್ತು ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿಲ್ಲ. ಅವರ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ಹಮಾಲಿ ಕಾರ್ಮಿಕರು ಎರಡು ದಿನಗಳ ಮುಷ್ಕರವನ್ನು ಬುಧವಾರ ಆರಂಭಿಸಿದ್ದಾರೆ.