<p><strong>ಕಡರನಾಯ್ಕನಹಳ್ಳಿ</strong>: ಪತ್ರಿಕಾ ವಿತರಕರು ಪತ್ರಿಕಾ ಮಾಧ್ಯಮದ ಆಧಾರಸ್ತಂಭಗಳು. ನಸುಕಿನ ವೇಳೆ ಪತ್ರಿಕೆಗಳನ್ನು ಹಂಚುವ ಮೂಲಕ ಸುದ್ದಿಗಳನ್ನು ತಲುಪಿಸುವ ಮಹಾತ್ಕಾರ್ಯ ಮಾಡುತ್ತಿರುವ ಅವರಿಗೆ ಸರ್ಕಾರಿ ಸೌಲಭ್ಯಗಳನ್ನು ದೊರಕಿಸುವ ಅವಶ್ಯಕತೆಯಿದೆ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗ ಅಭಿಪ್ರಾಯಪಟ್ಟರು. </p>.<p>ಕಡರನಾಯ್ಕನಹಳ್ಳಿ ಗ್ರಾಮದ ಎಚ್.ಎನ್.ಟಿ ತೋಟದ ಮನೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮಾಂತರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಹರಿಹರ ತಾಲ್ಲೂಕು ಘಟಕದ ಸ್ನೇಹ ಸಮ್ಮೇಳನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ವಿತರಕರು ಹೆಚ್ಚೆಚ್ಚು ಪತ್ರಿಕೆಗಳನ್ನು ಮನೆಗಳಿಗೆ ತಲುಪಿಸುವ ಮೂಲಕ ಹೆಚ್ಚು ಆದಾಯ ಗಳಿಸುವಂತಾಗಬೇಕು. ಈ ವೃತ್ತಿ ಬಗ್ಗೆ ಕೀಳರಿಮೆ ಬೇಡ. ಸಾರ್ವಜನಿಕರು ಹಾಗೂ ಪತ್ರಿಕಾ ಸಂಸ್ಥೆಯ ನಡುವಿನ ಸೇತುವೆಯಾಗಿ ವಿತರಕರು ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಿತರಕರಿಗೆ ಸರ್ಕಾರದ ಸೌಲಭ್ಯಗಳು ದೊರಕಿಸಿಕೊಡಲು ಒಕ್ಕೂಟ ಪ್ರಯತ್ನಿಸುತ್ತದೆ’ ಎಂದು ಭರವಸೆ ನೀಡಿದರು. </p>.<p>‘ಎಲ್ಲ ವಿತರಕರು ಕಾರ್ಮಿಕ ಇಲಾಖೆಯ ಇ–ಶ್ರಮ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಬೇಕು. ಇದರಿಂದ ಅಪಘಾತ ವಿಮೆ ಮತ್ತು ಗಂಭೀರ ಕಾಯಿಲೆಗಳಿಗೆ ಹಣ ಮರುಪಾವತಿ ಸೌಲಭ್ಯಗಳು ಲಭಿಸುತ್ತವೆ’ ಎಂದು ಕಾರ್ಮಿಕ ಇಲಾಖೆಯ ಸಹಾಯಕ ಅಧಿಕಾರಿ ಚಿಕ್ಕಣ್ಣ ಸಲಹೆ ನೀಡಿದರು. </p>.<p>‘ವಿತರಕರು ದ್ವಿಚಕ್ರ ವಾಹನಗಳಲ್ಲಿ ತೆರಳಿ ಪೇಪರ್ ಹಂಚುತ್ತಾರೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಬೈಕ್ಗಳಿಗೆ ವಿಮೆ ಮಾಡಿಸಬೇಕು. ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವಿರಬೇಕು’ ಎಂದು ಮಲ್ಲಿಕಾರ್ಜುನ್ ಕಲಾಲ್ ತಮ್ಮ ಉಪನ್ಯಾಸದಲ್ಲಿ ತಿಳಿಹೇಳಿದರು. </p>.<p>ನಿವೃತ್ತ ಮುಖ್ಯೋಪಾಧ್ಯಾಯ ಎಚ್.ಎನ್. ತಿಪ್ಪೇಶ್, ‘ಪ್ರಜಾವಾಣಿ’ ಪ್ರಸರಣ ವಿಭಾಗದ ಸತೀಶ್ ಚಂದು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ‘ಪ್ರಜಾವಾಣಿ’ ಬಳಗದ ಬಿಡ್ಡಪ್ಪ ಭಾಗವಹಿಸಿದ್ದರು.</p>.<p>ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ ಮಂಜುನಾಥ್ ಪತ್ರಿಕಾ ವಿತರಕರಿಗೆ ಗುರುತಿನ ಪತ್ರ ವಿತರಿಸಿದರು.</p>.<p>ಪತ್ರಿಕಾ ವಿತರಕರಾದ ಕೆ.ಎನ್ ನಾಗೇಂದ್ರಪ್ಪ, ಎಸ್.ಎಸ್. ಗಣೇಶ್, ಸೋಮಶೇಖರಾಚಾರಿ, ಎಸ್.ಹನುಮಂತಪ್ಪ, ಶಿವಕುಮಾರ್, ತಿಮ್ಮನಗೌಡ, ತಿಪ್ಪೆರುದ್ರಸ್ವಾಮಿ, ಮಂಜುನಾಥ ರೆಡ್ಡಿ, ಎಸ್. ಭೀಮಣ್ಣ, ಎ.ಬಿ. ವೀರಯ್ಯ, ವಿನಾಯಕ, ಕಸ್ತೂರಮ್ಮ, ಡಿ.ಕೆ. ನಿಂಗಪ್ಪ, ಮಹಾಂತಯ್ಯಸ್ವಾಮಿ, ರಾಜು ಅವರನ್ನು ಸನ್ಮಾನಿಸಲಾಯಿತು.</p>.<p>ಕೆ.ನಾಗೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿವರಾಜ್ ಸ್ವಾಗತಿಸಿದರು. ‘ಪ್ರಜಾವಾಣಿ’ ಅರೆಕಾಲಿಕ ವರದಿಗಾರ ವಿ.ನಾಗೇಂದ್ರಪ್ಪ, ಪತ್ರಕರ್ತ ಪ್ರಕಾಶ್ ಜಿಗಳಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡರನಾಯ್ಕನಹಳ್ಳಿ</strong>: ಪತ್ರಿಕಾ ವಿತರಕರು ಪತ್ರಿಕಾ ಮಾಧ್ಯಮದ ಆಧಾರಸ್ತಂಭಗಳು. ನಸುಕಿನ ವೇಳೆ ಪತ್ರಿಕೆಗಳನ್ನು ಹಂಚುವ ಮೂಲಕ ಸುದ್ದಿಗಳನ್ನು ತಲುಪಿಸುವ ಮಹಾತ್ಕಾರ್ಯ ಮಾಡುತ್ತಿರುವ ಅವರಿಗೆ ಸರ್ಕಾರಿ ಸೌಲಭ್ಯಗಳನ್ನು ದೊರಕಿಸುವ ಅವಶ್ಯಕತೆಯಿದೆ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗ ಅಭಿಪ್ರಾಯಪಟ್ಟರು. </p>.<p>ಕಡರನಾಯ್ಕನಹಳ್ಳಿ ಗ್ರಾಮದ ಎಚ್.ಎನ್.ಟಿ ತೋಟದ ಮನೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮಾಂತರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಹರಿಹರ ತಾಲ್ಲೂಕು ಘಟಕದ ಸ್ನೇಹ ಸಮ್ಮೇಳನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ವಿತರಕರು ಹೆಚ್ಚೆಚ್ಚು ಪತ್ರಿಕೆಗಳನ್ನು ಮನೆಗಳಿಗೆ ತಲುಪಿಸುವ ಮೂಲಕ ಹೆಚ್ಚು ಆದಾಯ ಗಳಿಸುವಂತಾಗಬೇಕು. ಈ ವೃತ್ತಿ ಬಗ್ಗೆ ಕೀಳರಿಮೆ ಬೇಡ. ಸಾರ್ವಜನಿಕರು ಹಾಗೂ ಪತ್ರಿಕಾ ಸಂಸ್ಥೆಯ ನಡುವಿನ ಸೇತುವೆಯಾಗಿ ವಿತರಕರು ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಿತರಕರಿಗೆ ಸರ್ಕಾರದ ಸೌಲಭ್ಯಗಳು ದೊರಕಿಸಿಕೊಡಲು ಒಕ್ಕೂಟ ಪ್ರಯತ್ನಿಸುತ್ತದೆ’ ಎಂದು ಭರವಸೆ ನೀಡಿದರು. </p>.<p>‘ಎಲ್ಲ ವಿತರಕರು ಕಾರ್ಮಿಕ ಇಲಾಖೆಯ ಇ–ಶ್ರಮ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಬೇಕು. ಇದರಿಂದ ಅಪಘಾತ ವಿಮೆ ಮತ್ತು ಗಂಭೀರ ಕಾಯಿಲೆಗಳಿಗೆ ಹಣ ಮರುಪಾವತಿ ಸೌಲಭ್ಯಗಳು ಲಭಿಸುತ್ತವೆ’ ಎಂದು ಕಾರ್ಮಿಕ ಇಲಾಖೆಯ ಸಹಾಯಕ ಅಧಿಕಾರಿ ಚಿಕ್ಕಣ್ಣ ಸಲಹೆ ನೀಡಿದರು. </p>.<p>‘ವಿತರಕರು ದ್ವಿಚಕ್ರ ವಾಹನಗಳಲ್ಲಿ ತೆರಳಿ ಪೇಪರ್ ಹಂಚುತ್ತಾರೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಬೈಕ್ಗಳಿಗೆ ವಿಮೆ ಮಾಡಿಸಬೇಕು. ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವಿರಬೇಕು’ ಎಂದು ಮಲ್ಲಿಕಾರ್ಜುನ್ ಕಲಾಲ್ ತಮ್ಮ ಉಪನ್ಯಾಸದಲ್ಲಿ ತಿಳಿಹೇಳಿದರು. </p>.<p>ನಿವೃತ್ತ ಮುಖ್ಯೋಪಾಧ್ಯಾಯ ಎಚ್.ಎನ್. ತಿಪ್ಪೇಶ್, ‘ಪ್ರಜಾವಾಣಿ’ ಪ್ರಸರಣ ವಿಭಾಗದ ಸತೀಶ್ ಚಂದು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ‘ಪ್ರಜಾವಾಣಿ’ ಬಳಗದ ಬಿಡ್ಡಪ್ಪ ಭಾಗವಹಿಸಿದ್ದರು.</p>.<p>ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ ಮಂಜುನಾಥ್ ಪತ್ರಿಕಾ ವಿತರಕರಿಗೆ ಗುರುತಿನ ಪತ್ರ ವಿತರಿಸಿದರು.</p>.<p>ಪತ್ರಿಕಾ ವಿತರಕರಾದ ಕೆ.ಎನ್ ನಾಗೇಂದ್ರಪ್ಪ, ಎಸ್.ಎಸ್. ಗಣೇಶ್, ಸೋಮಶೇಖರಾಚಾರಿ, ಎಸ್.ಹನುಮಂತಪ್ಪ, ಶಿವಕುಮಾರ್, ತಿಮ್ಮನಗೌಡ, ತಿಪ್ಪೆರುದ್ರಸ್ವಾಮಿ, ಮಂಜುನಾಥ ರೆಡ್ಡಿ, ಎಸ್. ಭೀಮಣ್ಣ, ಎ.ಬಿ. ವೀರಯ್ಯ, ವಿನಾಯಕ, ಕಸ್ತೂರಮ್ಮ, ಡಿ.ಕೆ. ನಿಂಗಪ್ಪ, ಮಹಾಂತಯ್ಯಸ್ವಾಮಿ, ರಾಜು ಅವರನ್ನು ಸನ್ಮಾನಿಸಲಾಯಿತು.</p>.<p>ಕೆ.ನಾಗೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿವರಾಜ್ ಸ್ವಾಗತಿಸಿದರು. ‘ಪ್ರಜಾವಾಣಿ’ ಅರೆಕಾಲಿಕ ವರದಿಗಾರ ವಿ.ನಾಗೇಂದ್ರಪ್ಪ, ಪತ್ರಕರ್ತ ಪ್ರಕಾಶ್ ಜಿಗಳಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>