‘ಅಡಿಕೆ ತೋಟಗಳು ಹೆಚ್ಚಾದಂತೆ ಸೊಪ್ಪು ಬೆಳೆ ಪ್ರದೇಶ ಕುಸಿದಿತ್ತು. ಅದರಲ್ಲೂ ಕೆಲವರು ಸೊಪ್ಪು ಬೆಳೆದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ತೀವ್ರ ಮಳೆಗೆ ಬೆಳೆದ ಸೊಪ್ಪು ನಲುಗಿದೆ. ಕೊತ್ತಂಬರಿ, ಪಾಲಕ್, ಎಳೆ ಅರಿವೆ, ಸಬ್ಬಸಿಗೆ, ಪುದೀನ ಸೊಪ್ಪಿನ ಬೀಜ ಚೆಲ್ಲಲು ₹6 ಸಾವಿರ ಖರ್ಚು ಮಾಡಿದ್ದೆ. ಚೆಲ್ಲಿದ ಬೀಜ ಮೊಳಕೆಯೊಡೆಯಲಿಲ್ಲಿ. ಹಾಗಾಗಿ ಸೊಪ್ಪಿನ ಲಭ್ಯತೆ ಈ ಭಾಗದಲ್ಲಿ ಇಲ್ಲವೇ ಇಲ್ಲ’ ಎನ್ನುತ್ತಾರೆ ಸೊಪ್ಪು ಬೆಳೆವ ರೈತ ಪ್ರಶಾಂತ್.