ಮಳೆಯು ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ನೂರಾರು ಮರಗಳನ್ನು ಧರಾಶಾಹಿಯಾಗಿಸಿದೆ. ಮರಗಳು ವಿದ್ಯುತ್ ಸರಬರಾಜು ಲೈನ್ ಮೇಲೆ ಕುಸಿಯುವುದರಿಂದ ಹಲವೆಡೆ ಕಂಬ, ಟಿಸಿಗಳಿಗೂ ಹಾನಿ ಉಂಟಾಗಿದೆ. ಪರಿಣಾಮವಾಗಿ ಬುಧವಾರ ಸಂಜೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಬಿದ್ದ ಮರ, ಗಿಡಗಳನ್ನು ತೆರವುಗೊಳಿಸಿ ವಿದ್ಯುತ್ ಕಂಬ, ವಿದ್ಯುತ್ ಲೈನ್ಗಳನ್ನು ಸರಿಪಡಿಸಲು ಬೆಸ್ಕಾಂ ಸಿಬ್ಬಂದಿ ಬುಧವಾರ ಸಂಜೆ ಹಾಗೂ ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಕಾರ್ಯಾಚರಣೆಯಲ್ಲಿ ತೊಡಗಿದ್ದರು.