ಪಿಸ್ತೂಲ್ ವಿಭಾಗದಲ್ಲಿ ಸಿದ್ದಾರ್ಥ್ ದಿವಟೆ, ಸುದೀಪ್ ಕಾಲಾಪುರ, ಆರಿಫ್ ಅಹಮದ್ ಚಾಲಮರದ್, ಹರ್ಷ ಮೆಹರವಾಡೆ, ಐಶ್ವರ್ಯಾ ಬಾಲೆಹೊಸೂರ, ಜೇಫರ್ ಅರಲಿ, ರೈಫಲ್ ವಿಭಾಗದಲ್ಲಿ ಶಶಾಂಕ ದಳವಿ, ಸುಚಿತ್ ಭೋವಿ, ಹರ್ಷ ಭದ್ರಾಪುರ ಮತ್ತು ದಾವಲ್ ಪರುಲೇಕರ್ ರಾಷ್ಟ್ರೀಯ ಟೂರ್ನಿಗೆ ಆಯ್ಕೆಯಾಗಿದ್ದಾರೆ. ಚೆನ್ನೈನಲ್ಲಿ ನಡೆದ ಟೂರ್ನಿಯಲ್ಲಿ ಸಿದ್ದಾರ್ಥ ಒಂದು ಬೆಳ್ಳಿ ಹಾಗೂ ಕಂಚು, ಸುದೀಪ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.