ಸೋಮವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಯಾದವ ಸಮುದಾಯಕ್ಕೆ ಎರಡು ಟಿಕೆಟ್ ನೀಡಿದ್ದರು. ಬೇರೆ ಪಕ್ಷಗಳು ನೀಡಿರಲಿಲ್ಲ. ರಾಜಕೀಯ ಶಕ್ತಿ ನೀಡಿದ್ದಾರೆ ಎಂದು ರಾಜ್ಯದಲ್ಲಿರುವ ಯಾದವ ಸಮುದಾಯದ 40 ಲಕ್ಷ ಜನ ಬೆಂಬಲ ನೀಡಿದ್ದರು. ಇನ್ನೂ ನೀಡುತ್ತಾರೆ ಎಂಬ ನಿರೀಕ್ಷೆ ಇದೆ. ಈ ಸಮುದಾಯ ಕಾಂಗ್ರೆಸ್, ಜೆಡಿಎಸ್ ಜತೆ ಇತ್ತು. ಪೂರ್ಣಿಮಾ ಬಿಜೆಪಿಗೆ ಬಂದ ಮೇಲೆ ಸಮುದಾಯವೂ ಬಂದಿದೆ. ಸಚಿವ ಸ್ಥಾನ ನೀಡದೇ ಇದ್ದರೆ ಅದು ಬಿಜೆಪಿಗೆ ಹೊಡೆತ’ ಎಂದು ತಿಳಿಸಿದರು.