‘ನಾನು ಸರ್ಕಾರಿ ಕೋಟಾದಡಿ ಸೀಟನ್ನು ಪಡೆದಿದ್ದು, 16 ತಿಂಗಳಿಂದ ನಮಗೆ ಶಿಷ್ಯವೇತನ ಬಾರದೇ ಕಾಲೇಜು ಹಾಗೂ ಹಾಸ್ಟೆಲ್ ಶುಲ್ಕ ಭರಿಸಿಲ್ಲ. ಇತರೆ ಖರ್ಚುಗಳಿಗೆ ಇದನ್ನೇ ನಂಬಿಕೊಂಡಿದ್ದು, ಶಿಷ್ಯವೇತನ ಸಿಗದೇ ತುಂಬಾ ಕಷ್ಟವಾಗಿದೆ. ಆದರೂ ನಾವು ನಮ್ಮ ಕರ್ತವ್ಯವನ್ನು ನಿಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಆದ್ದರಿಂದ ಕೂಡಲೇ ಶಿಷ್ಯವೇತನ ಬಿಡುಗಡೆ ಮಾಡಬೇಕು’ ಎಂದು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.