<p><strong>ದಾವಣಗೆರೆ:</strong> ಅಕ್ಷರ ಪ್ರೀತಿ, ಕಾವ್ಯ ಪ್ರೀತಿಯಾಗಿ ಮಾರ್ಪಾಡು ಆದಾಗ ಉತ್ತಮ ಕವಿತೆ ಹುಟ್ಟುತ್ತದೆ ಎಂದು ಪತ್ರಕರ್ತ ಬಿ.ಎನ್. ಮಲ್ಲೇಶ್ ಹೇಳಿದರು.</p>.<p>ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಚಿತ್ರದುರ್ಗದ ಸೃಷ್ಟಿ ಗ್ರಂಥಮಾಲೆ ಹಾಗೂ ದಾವಣಗೆರೆಯ ಸೋಮೇಶ್ವರ ವಿದ್ಯಾಲಯದ ಸಹಯೋಗದಲ್ಲಿ ಸಾಹಿತಿ ಹಂಶಿ ಅವರ ‘ಸಂತೆಯಲ್ಲಿ ಸಂತನ ಸುತ್ತಾಟ’ ಕಾವ್ಯ ಸಂಕಲನ ಬಿಡುಗಡೆ ಮಾಡಿ<br />ಅವರು ಮಾತನಾಡಿದರು.</p>.<p>ಅವಸರದಲ್ಲಿ ಕವಿತೆ ಹುಟ್ಟುವುದಿಲ್ಲ. ಪದಕ್ಕೆ, ಪದ ಜೋಡಿಸಿದರೆ ಕಾವ್ಯವಾಗುವುದಿಲ್ಲ. ಹಾಲು ತುಪ್ಪವಾಗುವ ರೀತಿಯಲ್ಲಿ ಮಣ್ಣು ಮಡಕೆಯಾಗುವ ರೀತಿಯಲ್ಲಿ ನಮ್ಮೊಳಗೆ ನಾವು ಬೆಂದಾಗ ಕವಿತೆ ಹುಟ್ಟುತ್ತದೆ ಎಂದು ಅವರು ವಿಶ್ಲೇಷಿಸಿದರು.</p>.<p>‘ನಮ್ಮ ವೈಯಕ್ತಿಕ ಅನುಭವವನ್ನು ಕವನವನ್ನಾಗಿ ಮಾಡುತ್ತೇವೆ. ನಮ್ಮ ಅನುಭವ ಓದುಗರ ಅನುಭವವಾದರೆ ಅದು ಉತ್ತಮ ಕವಿತೆಯಾಗಿರುತ್ತದೆ. ಹೂವು, ಹಣ್ಣು, ಪ್ರಕೃತಿ, ಸೂರ್ಯ, ಚಂದ್ರ ಎಂದು ಕವಿತೆ ಬರೆಯುವ ಜತೆಗೆ ಸಾಮಾಜಿಕ ತಲ್ಲಣಗಳಿಗೂ ಕವಿ ಧ್ವನಿಯಾಗಬೇಕು.<br />ಸಮಾಜದ ವಿದ್ಯಮಾನಗಳನ್ನು ಎದುರುಗೊಳ್ಳುವ ಕವಿ<br />ಶಾಶ್ವತವಾಗಿ ಉಳಿಯುತ್ತಾನೆ’ ಎಂದು ಹೇಳಿದರು.</p>.<p>ಸಿದ್ಧಾಂತ ಸಾಹಿತಿ ಓಂಕಾರಯ್ಯ ತವನಿಧಿ ಆಶಯ ನುಡಿಗಳನ್ನಾಡಿದರು. ವರದಿಗಾರರ ಕೂಟದ ಅಧ್ಯಕ್ಷ<br />ಜಿ.ಎಂ.ಆರ್. ಆರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಹಂಶಿ, ಸೋಮೇಶ್ವರ ವಿದ್ಯಾಲಯದ ಕೆ.ಎಂ. ಸುರೇಶ್, ನಿವೃತ್ತ ಪ್ರಾಧ್ಯಾಪಕಿ ಡಾ.ಎಸ್.ವಿ.ಕಮಲಮ್ಮ, ಉದ್ಯಮಿ ಎನ್. ರಾಘವೇಂದ್ರ, ಕೆ.ಪಿ. ಬಸವರಾಜಪ್ಪ, ಎನ್.ಆರ್. ತಿಪ್ಪೇಸ್ವಾಮಿ, ಎನ್.ಪಿ. ನಾಗರಾಜ, ಎಚ್.ಆರ್.ಅಶೋಕರೆಡ್ಡಿ ಅವರೂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಅಕ್ಷರ ಪ್ರೀತಿ, ಕಾವ್ಯ ಪ್ರೀತಿಯಾಗಿ ಮಾರ್ಪಾಡು ಆದಾಗ ಉತ್ತಮ ಕವಿತೆ ಹುಟ್ಟುತ್ತದೆ ಎಂದು ಪತ್ರಕರ್ತ ಬಿ.ಎನ್. ಮಲ್ಲೇಶ್ ಹೇಳಿದರು.</p>.<p>ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಚಿತ್ರದುರ್ಗದ ಸೃಷ್ಟಿ ಗ್ರಂಥಮಾಲೆ ಹಾಗೂ ದಾವಣಗೆರೆಯ ಸೋಮೇಶ್ವರ ವಿದ್ಯಾಲಯದ ಸಹಯೋಗದಲ್ಲಿ ಸಾಹಿತಿ ಹಂಶಿ ಅವರ ‘ಸಂತೆಯಲ್ಲಿ ಸಂತನ ಸುತ್ತಾಟ’ ಕಾವ್ಯ ಸಂಕಲನ ಬಿಡುಗಡೆ ಮಾಡಿ<br />ಅವರು ಮಾತನಾಡಿದರು.</p>.<p>ಅವಸರದಲ್ಲಿ ಕವಿತೆ ಹುಟ್ಟುವುದಿಲ್ಲ. ಪದಕ್ಕೆ, ಪದ ಜೋಡಿಸಿದರೆ ಕಾವ್ಯವಾಗುವುದಿಲ್ಲ. ಹಾಲು ತುಪ್ಪವಾಗುವ ರೀತಿಯಲ್ಲಿ ಮಣ್ಣು ಮಡಕೆಯಾಗುವ ರೀತಿಯಲ್ಲಿ ನಮ್ಮೊಳಗೆ ನಾವು ಬೆಂದಾಗ ಕವಿತೆ ಹುಟ್ಟುತ್ತದೆ ಎಂದು ಅವರು ವಿಶ್ಲೇಷಿಸಿದರು.</p>.<p>‘ನಮ್ಮ ವೈಯಕ್ತಿಕ ಅನುಭವವನ್ನು ಕವನವನ್ನಾಗಿ ಮಾಡುತ್ತೇವೆ. ನಮ್ಮ ಅನುಭವ ಓದುಗರ ಅನುಭವವಾದರೆ ಅದು ಉತ್ತಮ ಕವಿತೆಯಾಗಿರುತ್ತದೆ. ಹೂವು, ಹಣ್ಣು, ಪ್ರಕೃತಿ, ಸೂರ್ಯ, ಚಂದ್ರ ಎಂದು ಕವಿತೆ ಬರೆಯುವ ಜತೆಗೆ ಸಾಮಾಜಿಕ ತಲ್ಲಣಗಳಿಗೂ ಕವಿ ಧ್ವನಿಯಾಗಬೇಕು.<br />ಸಮಾಜದ ವಿದ್ಯಮಾನಗಳನ್ನು ಎದುರುಗೊಳ್ಳುವ ಕವಿ<br />ಶಾಶ್ವತವಾಗಿ ಉಳಿಯುತ್ತಾನೆ’ ಎಂದು ಹೇಳಿದರು.</p>.<p>ಸಿದ್ಧಾಂತ ಸಾಹಿತಿ ಓಂಕಾರಯ್ಯ ತವನಿಧಿ ಆಶಯ ನುಡಿಗಳನ್ನಾಡಿದರು. ವರದಿಗಾರರ ಕೂಟದ ಅಧ್ಯಕ್ಷ<br />ಜಿ.ಎಂ.ಆರ್. ಆರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಹಂಶಿ, ಸೋಮೇಶ್ವರ ವಿದ್ಯಾಲಯದ ಕೆ.ಎಂ. ಸುರೇಶ್, ನಿವೃತ್ತ ಪ್ರಾಧ್ಯಾಪಕಿ ಡಾ.ಎಸ್.ವಿ.ಕಮಲಮ್ಮ, ಉದ್ಯಮಿ ಎನ್. ರಾಘವೇಂದ್ರ, ಕೆ.ಪಿ. ಬಸವರಾಜಪ್ಪ, ಎನ್.ಆರ್. ತಿಪ್ಪೇಸ್ವಾಮಿ, ಎನ್.ಪಿ. ನಾಗರಾಜ, ಎಚ್.ಆರ್.ಅಶೋಕರೆಡ್ಡಿ ಅವರೂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>