ದೇವಸ್ಥಾನದ ಆವರಣ ವಿಶಾಲವಾಗಿದ್ದು, ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಕಲ್ಯಾಣಿ ಪುನಶ್ಚೇತನದಿಂದ ಮಳೆ ನೀರು ಸಂಗ್ರಹವಾಗಿ ಗ್ರಾಮದಲ್ಲಿ ಅಂರ್ತಜಲ ಹೆಚ್ಚುತ್ತದೆ. ಅಲ್ಲದೇ ಕಲ್ಯಾಣಿಯ ಸುತ್ತಲೂ ಮರ, ಗಿಡಗಳನ್ನು ಬೆಳೆಸಿ, ತಂತಿ ಬೇಲಿಯಿಂದ ರಕ್ಷಣೆ ಕೊಡುವ ಉದ್ದೇಶ ಇದೆ ಎಂದು ಮುಖಂಡರಾದ ಎನ್.ಎಸ್. ನಾಗರಾಜ, ಎಂ.ಡಿ. ಬಸವರಾಜಪ್ಪ, ಬಿ. ಕರಿಬಸಪ್ಪ, ದಿಳ್ಳಿ ಭರ್ಮಪ್ಪ, ನಾಗಪ್ಪ ಕರಡಿ, ಎನ್.ಸಿ. ದೇವರಾಜ ಅವರು ‘ಪ್ರಜಾವಾಣಿ’ಗೆ
ತಿಳಿಸಿದರು.