ಒಳಭಾಗದ ಗಣೇಶ ದೇವಾಲಯದ ಎದುರಿಗೆ ಎರಡು ವರ್ಷಗಳ ಹಿಂದೆ ನಿರ್ಮಿಸಿದ ಔಷಧ ಸಸ್ಯಗಳ ಉದ್ಯಾನ ಹಾಗೂ ಹೂದೋಟ ಪೊಲೀಸ್ ಠಾಣೆಗೆ ಮುಕುಟ ಪ್ರಾಯವಾಗಿದೆ. ಬಿಲ್ವಪತ್ರೆ, ಶತಾವರಿ, ಅಶ್ವಗಂಧ, ಬಿಲ್ವ, ಅರಳಿ, ಔದುಂಬರ, ದೊಡ್ಡಪತ್ರೆ, ಕೆಸ, ಗರಿಕೆ, ಅಮೃತಬಳ್ಳಿ, ತುಳಸಿ, ಮಾವು, ಬೇವು, ಮಾವು, ಬನ್ನಿ ಸೇರಿ ಹಲವಾರು ಮರಗಿಡಗಳು ಹಸನಾಗಿ ಬೆಳೆದು ನಿಂತಿವೆ. ಗುಲಾಬಿ, ದಾಸವಾಳ, ಸೇವಂತಿಗೆ, ಕಾಬಾಳೆ, ಮಲ್ಲಿಗೆಯಂಥ ಹಲವು ಬಗೆಯ ಅಲಂಕಾರಿಕ ಹೂಗಿಡಗಳು ನಳನಳಿಸುತ್ತಿವೆ.