ಚುನಾವಣೆ ಕಣದಲ್ಲಿ ಜೆಡಿಎಸ್ನಿಂದ ಬಿ. ಅಲ್ತಾಫ್, ಕಾಂಗ್ರೆಸ್ನಿಂದ ಜೀನತ್ ಉನ್ನೀಸಾ, ಬಿಜೆಪಿಯಿಂದ ಸಂತೋಷ್ ರಾಜನಹಳ್ಳಿ ಹಾಗೂ ಪಕ್ಷೇತರ ಅಭ್ಯರ್ಥಿ ಸಂಕೇತ್ ಸ್ಪರ್ಧಿಸಿದ್ದರು. ಮತಗಟ್ಟೆಯ ಸುತ್ತ ಮೂರು ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ಠಿಕಾಣಿ ಹೂಡಿದ್ದರು. ಮತಗಟ್ಟೆಗೆ ಬರುವ ಮತದಾರರಿಗೆ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಮನವೊಲಿಸುವ ಅಂತಿಮ ಪ್ರಯತ್ನದಲ್ಲಿ ನಿರತರಾಗಿದ್ದರು.