ಪ್ರಾಂಶುಪಾಲ ಪ್ರೊ.ಎಚ್.ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾದಾಯಿನಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಿ.ಜಿ.ರಾಜೇಶ್ವರಿ, ಐಕ್ಯೂಎಸ್ಸಿ ಸಂಯೋಜಕ ಜಿ.ಎಸ್.ಸುರೇಶ, ಪಿ.ಎಸ್.ಐ ಶ್ರೀಪತಿ ಗಿನ್ನಿ, ರಮೇಶ್ ಎಂ.ಎನ್., ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ್ ಎಸ್., ದಾವಣಗೆರೆ ವಿವಿಯ ಅಧ್ಯಾಪಕ ಉಚ್ಚೇಗೌಡ, ಕನ್ನಡ ವಿಭಾಗದ ಮುಖ್ಯಸ್ಥೆ ಎಸ್.ಗೌರಮ್ಮ ಮಾತನಾಡಿದರು. ಮೇಘಾಲಯದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.