<p><strong>ಹಳೆಮಳಲಿ (ನ್ಯಾಮತಿ)</strong>: ‘ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ನಮ್ಮ ಕಾಯಕ ಎಂದು ಭಾವಿಸಿ ಶಿಕ್ಷಕರು ಕರ್ತವ್ಯ ನಿರ್ವಹಿಸಿದರೆ ಅಂತಹ ಶಾಲೆಗಳು ಅಭಿವೃದ್ಧಿಯಾಗುತ್ತವೆ’ ಎಂಬುದಕ್ಕೆ ಹಳೆಮಳಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಾಕ್ಷಿ.</p>.<p>ತುಂಗಭದ್ರಾ ನದಿ ದಡದಲ್ಲಿ 60 ಮನೆಗಳನ್ನು ಹೊಂದಿರುವ, ಹೊನ್ನಾಳಿ–ಶಿವಮೊಗ್ಗ ಮುಖ್ಯರಸ್ತೆಯಿಂದ 5 ಕಿ.ಮೀ ದೂರದಲ್ಲಿರುವ ಗ್ರಾಮ ಹಳೆಮಳಲಿ. ಈ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ 30 ಮಕ್ಕಳಿದ್ದು ಎಸ್ಡಿಎಂಸಿ, ಪೋಷಕರ ಸಹಕಾರದಿಂದ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ ಮತ್ತು ಯು.ಕೆ.ಜಿ) ವಿಭಾಗವನ್ನು 2018–19ನೇ ಸಾಲಿನಿಂದ ಆರಂಭಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 18 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.</p>.<p>ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶಯದಂತೆ ನೂರರಷ್ಟು ದಾಖಲಾತಿ, ಹಾಜರಾತಿ ಮತ್ತು ಕಲಿಕೆಯನ್ನು ಹೊಂದಿರುವುದು ಶಾಲೆಯ ವಿಶೇಷ. ಪೂರ್ವ ಪ್ರಾಥಮಿಕ ಶಾಲೆ ಆರಂಭ ಆದಾಗಿನಿಂದ ಪಾಲಕರು ಮಕ್ಕಳನ್ನು ಖಾಸಗಿ ಕಾನ್ವೆಂಟ್ಗೆ ಕಳಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.</p>.<p>ಗೋಡೆಗಳಿಗೆ ಸಾಧನ ಪದಗಳು, ವರ್ಣಮಾಲೆ, ಅಕ್ಷರಗಳ ಚಪ್ಪರ ಇವೆ. ಮಕ್ಕಳಿಗೆ ಶಿಕ್ಷಕರು ವಾರದಲ್ಲಿ 2 ದಿನ 4 ಅವಧಿಗಳಲ್ಲಿ ಲೇಜಿಮ್, ಡಂಬಲ್ಸ್, ಹೂಪ್ಸ್, ಸರಳ ವ್ಯಾಯಾಮ ಮಾಡಿಸುತ್ತಾರೆ. ಪೂರ್ವ ಪ್ರಾಥಮಿಕ ಶಾಲೆಯ ಪುಟಾಣಿಗಳು ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಪಟಪಟನೆ ಓದುತ್ತಾರೆ. ಉತ್ತಮ ಬರವಣಿಗೆಯೂ ಇದೆ. ಮಗ್ಗಿಗಳನ್ನು ಮೇಲಿನಿಂದ ಕೆಳಕ್ಕೆ, ಕೆಳಗಿನಿಂದ ಮೇಲೆ ಮತ್ತು ಅಡ್ಡಲಾಗಿ ಹೇಳುವ ಜಾಣ್ಮೆ ಹೊಂದಿದ್ದಾರೆ.</p>.<p>ಇಲ್ಲಿ ಶಾಲಾವನ, ಕೈತೋಟ, ಸುಸಜ್ಜಿತ ತರಗತಿ ಕೊಠಡಿಗಳು, ತಾಲ್ಲೂಕಿನಲ್ಲಿಯೇ ಮಾದರಿಯಾದ ಹೈಟೆಕ್ ಅಡುಗೆ ಕೊಠಡಿ, ಮುಖ್ಯಶಿಕ್ಷಕರ ಕೊಠಡಿ, ಶಾಲಾ ಆವರಣದಲ್ಲಿಯೇ ಅಂಗನವಾಡಿ ಕಟ್ಟಡ, ಶೌಚಾಲಯ ಇದೆ.</p>.<p>ಮುಖ್ಯಶಿಕ್ಷಕ ಕರಬಸಪ್ಪ ಅವರೇ ಈ ಮಾದರಿ ಶಾಲೆಯ ರೂವಾರಿ. ಇವರಿಗೆ ಸಹಶಿಕ್ಷಕಿ<br />ಕೆ.ಬಿ. ಕವಿತಾ, ಗೌರವಧನ ಶಿಕ್ಷಕಿ ಎಚ್.ಕೆ. ರಂಜಿತಾ, ಬಿಸಿಯೂಟ ತಯಾರಕರಾದ ಪುಷ್ಪಾ, ಚಂದ್ರಕಲಾ ಮತ್ತು ಗ್ರಾಮಸ್ಥರ ಸಹಕಾರ ದೊರೆತಿದೆ.</p>.<p>ಶಾಲೆಯ ಆವರಣದಲ್ಲಿ 6 ತೆಂಗಿನಮರಗಳು, 50 ಅಡಿಕೆ ಮರ, 100 ತೇಗದ ಗಿಡ, 25 ಇತರ ಜಾತಿಯ ಮರಗಳನ್ನು ಬೆಳೆಸಿರುವುದರಿಂದ ಹಸಿರು ವಾತಾವರಣವಿದೆ. ಕೋವಿಡ್ ಸಮಯದಲ್ಲಿಯೂ ಮಕ್ಕಳಿಗೆ ಶಿಕ್ಷಣ ನೀಡಿದ್ದೇವೆ ಎಂದು ಮುಖ್ಯಶಿಕ್ಷಕ ಕರಬಸಪ್ಪ ಹೇಳಿದರು.</p>.<p>‘ಇಲಾಖೆಯ ಮಾರ್ಗದರ್ಶನ<br />ದಲ್ಲಿ ಪೋಷಕರು, ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು, ದಾನಿಗಳ ಸಹಕಾರದಿಂದ ₹ 1 ಲಕ್ಷ ವೆಚ್ಚದ ಸ್ಮಾರ್ಟ್ ಕ್ಲಾಸ್ ಆರಂಭಿಸುವ ಯೋಜನೆ<br />ಯನ್ನು ಶಿಕ್ಷಕರು ರೂಪಿಸಿದ್ದು, ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಎಸ್ಡಿಎಂಸಿ ಅಧ್ಯಕ್ಷ ಎಂ.ಪಿ. ಷಡಾಕ್ಷರಿ, ಉಪಾಧ್ಯಕ್ಷೆ ಮಂಜುಳಮ್ಮ ಮತ್ತು ಸದಸ್ಯರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳೆಮಳಲಿ (ನ್ಯಾಮತಿ)</strong>: ‘ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ನಮ್ಮ ಕಾಯಕ ಎಂದು ಭಾವಿಸಿ ಶಿಕ್ಷಕರು ಕರ್ತವ್ಯ ನಿರ್ವಹಿಸಿದರೆ ಅಂತಹ ಶಾಲೆಗಳು ಅಭಿವೃದ್ಧಿಯಾಗುತ್ತವೆ’ ಎಂಬುದಕ್ಕೆ ಹಳೆಮಳಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಾಕ್ಷಿ.</p>.<p>ತುಂಗಭದ್ರಾ ನದಿ ದಡದಲ್ಲಿ 60 ಮನೆಗಳನ್ನು ಹೊಂದಿರುವ, ಹೊನ್ನಾಳಿ–ಶಿವಮೊಗ್ಗ ಮುಖ್ಯರಸ್ತೆಯಿಂದ 5 ಕಿ.ಮೀ ದೂರದಲ್ಲಿರುವ ಗ್ರಾಮ ಹಳೆಮಳಲಿ. ಈ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ 30 ಮಕ್ಕಳಿದ್ದು ಎಸ್ಡಿಎಂಸಿ, ಪೋಷಕರ ಸಹಕಾರದಿಂದ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ ಮತ್ತು ಯು.ಕೆ.ಜಿ) ವಿಭಾಗವನ್ನು 2018–19ನೇ ಸಾಲಿನಿಂದ ಆರಂಭಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 18 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.</p>.<p>ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶಯದಂತೆ ನೂರರಷ್ಟು ದಾಖಲಾತಿ, ಹಾಜರಾತಿ ಮತ್ತು ಕಲಿಕೆಯನ್ನು ಹೊಂದಿರುವುದು ಶಾಲೆಯ ವಿಶೇಷ. ಪೂರ್ವ ಪ್ರಾಥಮಿಕ ಶಾಲೆ ಆರಂಭ ಆದಾಗಿನಿಂದ ಪಾಲಕರು ಮಕ್ಕಳನ್ನು ಖಾಸಗಿ ಕಾನ್ವೆಂಟ್ಗೆ ಕಳಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.</p>.<p>ಗೋಡೆಗಳಿಗೆ ಸಾಧನ ಪದಗಳು, ವರ್ಣಮಾಲೆ, ಅಕ್ಷರಗಳ ಚಪ್ಪರ ಇವೆ. ಮಕ್ಕಳಿಗೆ ಶಿಕ್ಷಕರು ವಾರದಲ್ಲಿ 2 ದಿನ 4 ಅವಧಿಗಳಲ್ಲಿ ಲೇಜಿಮ್, ಡಂಬಲ್ಸ್, ಹೂಪ್ಸ್, ಸರಳ ವ್ಯಾಯಾಮ ಮಾಡಿಸುತ್ತಾರೆ. ಪೂರ್ವ ಪ್ರಾಥಮಿಕ ಶಾಲೆಯ ಪುಟಾಣಿಗಳು ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಪಟಪಟನೆ ಓದುತ್ತಾರೆ. ಉತ್ತಮ ಬರವಣಿಗೆಯೂ ಇದೆ. ಮಗ್ಗಿಗಳನ್ನು ಮೇಲಿನಿಂದ ಕೆಳಕ್ಕೆ, ಕೆಳಗಿನಿಂದ ಮೇಲೆ ಮತ್ತು ಅಡ್ಡಲಾಗಿ ಹೇಳುವ ಜಾಣ್ಮೆ ಹೊಂದಿದ್ದಾರೆ.</p>.<p>ಇಲ್ಲಿ ಶಾಲಾವನ, ಕೈತೋಟ, ಸುಸಜ್ಜಿತ ತರಗತಿ ಕೊಠಡಿಗಳು, ತಾಲ್ಲೂಕಿನಲ್ಲಿಯೇ ಮಾದರಿಯಾದ ಹೈಟೆಕ್ ಅಡುಗೆ ಕೊಠಡಿ, ಮುಖ್ಯಶಿಕ್ಷಕರ ಕೊಠಡಿ, ಶಾಲಾ ಆವರಣದಲ್ಲಿಯೇ ಅಂಗನವಾಡಿ ಕಟ್ಟಡ, ಶೌಚಾಲಯ ಇದೆ.</p>.<p>ಮುಖ್ಯಶಿಕ್ಷಕ ಕರಬಸಪ್ಪ ಅವರೇ ಈ ಮಾದರಿ ಶಾಲೆಯ ರೂವಾರಿ. ಇವರಿಗೆ ಸಹಶಿಕ್ಷಕಿ<br />ಕೆ.ಬಿ. ಕವಿತಾ, ಗೌರವಧನ ಶಿಕ್ಷಕಿ ಎಚ್.ಕೆ. ರಂಜಿತಾ, ಬಿಸಿಯೂಟ ತಯಾರಕರಾದ ಪುಷ್ಪಾ, ಚಂದ್ರಕಲಾ ಮತ್ತು ಗ್ರಾಮಸ್ಥರ ಸಹಕಾರ ದೊರೆತಿದೆ.</p>.<p>ಶಾಲೆಯ ಆವರಣದಲ್ಲಿ 6 ತೆಂಗಿನಮರಗಳು, 50 ಅಡಿಕೆ ಮರ, 100 ತೇಗದ ಗಿಡ, 25 ಇತರ ಜಾತಿಯ ಮರಗಳನ್ನು ಬೆಳೆಸಿರುವುದರಿಂದ ಹಸಿರು ವಾತಾವರಣವಿದೆ. ಕೋವಿಡ್ ಸಮಯದಲ್ಲಿಯೂ ಮಕ್ಕಳಿಗೆ ಶಿಕ್ಷಣ ನೀಡಿದ್ದೇವೆ ಎಂದು ಮುಖ್ಯಶಿಕ್ಷಕ ಕರಬಸಪ್ಪ ಹೇಳಿದರು.</p>.<p>‘ಇಲಾಖೆಯ ಮಾರ್ಗದರ್ಶನ<br />ದಲ್ಲಿ ಪೋಷಕರು, ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು, ದಾನಿಗಳ ಸಹಕಾರದಿಂದ ₹ 1 ಲಕ್ಷ ವೆಚ್ಚದ ಸ್ಮಾರ್ಟ್ ಕ್ಲಾಸ್ ಆರಂಭಿಸುವ ಯೋಜನೆ<br />ಯನ್ನು ಶಿಕ್ಷಕರು ರೂಪಿಸಿದ್ದು, ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಎಸ್ಡಿಎಂಸಿ ಅಧ್ಯಕ್ಷ ಎಂ.ಪಿ. ಷಡಾಕ್ಷರಿ, ಉಪಾಧ್ಯಕ್ಷೆ ಮಂಜುಳಮ್ಮ ಮತ್ತು ಸದಸ್ಯರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>