ನಮ್ಮದು ಮೂಲತಃ ಕೃಷಿ ಕುಟುಂಬ. ಸಹೋದರನ ಜೊತೆಗೆ ಪತ್ರಿಕೆಯ ನಂಟು ಬೆಳೆಯಿತು. 20 ವರ್ಷಗಳಿಂದ ಪತ್ರಿಕೆ ವಿತರಿಸುತ್ತಿದ್ದೇನೆ. ನಿತ್ಯ ನಸುಕಿನ 4 ಗಂಟೆಗೆ ಕೆಲಸ ಶುರುವಾಗುತ್ತದೆ. ಬದುಕು ಕಟ್ಟಿಕೊಳ್ಳಲು ಪತ್ರಿಕೆ ನೆರವಾಗಿದೆ. ಇಬ್ಬರು ಮಕ್ಕಳು ಕೂಡ ಪತ್ರಿಕೆ ತಲುಪಿಸಲು ಜೊತೆಯಾದರು. 2 ನೇ ತರಗತಿಯಿಂದಲೇ ನೆರವಾಗುತ್ತಿರುವ ಪುತ್ರರು ಈಗ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಕೊಂಚ ತಂದರೆ ಆಗುತ್ತಿದೆ. ಆದರೂ ಕಾಯಕವನ್ನು ಮಾತ್ರ ಬಿಟ್ಟಿಲ್ಲ. ಪ್ರಕಾಶ್ ಎಂ.ಎನ್ ವಿತರಕ ಶಾಮನೂರು ದಾವಣಗೆರೆ