<p><strong>ಸಾಸ್ವೆಹಳ್ಳಿ</strong>: ಹೋಬಳಿಯ ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿರೇಬಾಸೂರು, ಉಜ್ಜನಿಪುರ, ಸದಾಶಿವಪುರ ಹಾಗೂ ಬೀರಗೊಂಡನಹಳ್ಳಿ ಗ್ರಾಮಗಳಿವೆ. ಆದರೆ, ಸದಾಶಿವಪುರ ಬಿಟ್ಟು ಉಳಿದ ಗ್ರಾಮಗಳ ಜನರಿಗೆ ಇ-ಸ್ವತ್ತು ಸಿಗುತ್ತಿಲ್ಲ. ಇದು ಈ ಪಂಚಾಯಿತಿಯ ಸಮಸ್ಯೆಯಾಗಿದೆ.</p>.<p>‘ಮನೆಯಲ್ಲಿ ಅಜ್ಜನ ಕಾಲದಿಂದಲೂ ವಾಸವಿದ್ದೇವೆ. ನಾವಿರುವ ಮನೆ ದಾಖಲೆಯನ್ನು ಪಂಚಾಯಿತಿಯಲ್ಲಿ ಕೇಳಿದರೆ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ. ಇದರಿಂದ ಸರ್ಕಾರದ ಯೋಜನೆಗಳ ಲಾಭ ಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಹಿರೇಬಾಸೂರು ಗ್ರಾಮದ ಜನಾರ್ದನ್ ಪಾಟೀಲ್.</p>.<p>‘ಅರ್ಧ ಗ್ರಾಮವು ಗ್ರಾಮ ಠಾಣೆಗೆ ಸೇರಿದ್ದು, ಇನ್ನುಳಿದ ಜಾಗದ ಪಹಣಿ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿದೆ. 150ಕ್ಕೂ ಹೆಚ್ಚು ಮನೆಗಳಿದ್ದು, ಗ್ರಾಮಸ್ಥರು ಇ-ಸ್ವತ್ತು ನೀಡುವಂತೆ ಕೋರುತ್ತಿದ್ದಾರೆ. ದಾಖಲೆಗಳನ್ನು ಒದಗಿಸಿದರೂ, ಆ ಮನೆಗಳ ಇ-ಸ್ವತ್ತು ನೀಡಲು ಆಗುತ್ತಿಲ್ಲ. ಈ ಬಗ್ಗೆ ಹಲವು ಅರ್ಜಿಗಳನ್ನು ಮೇಲಧಿಕಾರಿಗಳಿಗೆ ಕಳುಹಿಸಿದ್ದರೂ, ಪರಿಹಾರ ಸಿಕ್ಕಿಲ್ಲ’ ಎನ್ನುತ್ತಾರೆ ಹಿರೇಬಾಸೂರು ಗ್ರಾಮ ಪಂಚಾಯಿತಿ ಸದಸ್ಯ ಹಾಲೇಶ್.</p>.<p>‘ಬೀರಗೊಂಡನ ಹಳ್ಳಿಯಲ್ಲಿ 600ಕ್ಕೂ ಹೆಚ್ಚು ಮನೆಗಳಿವೆ. ಇದು 1965ರಲ್ಲಿ ಸ್ಥಳಾಂತರಗೊಂಡ ಗ್ರಾಮ. ಅಂದು ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಅರ್ಹ ಫಲಾನುಭವಿಗಳಿಗೆ ನಿವೇಶನಕ್ಕೆ ಜಾಗ ನೀಡಲಾಗಿತ್ತು. ಗ್ರಾಮಸ್ಥರು ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಯಾರೊಬ್ಬರಿಗೂ ಇ-ಸ್ವತ್ತನ್ನು ನೀಡಿಲ್ಲ. ಈ ಬಗ್ಗೆ ಹಲವು ಬಾರಿ ಪಂಚಾಯಿತಿಯಲ್ಲಿ ಠರಾವು ಮಾಡಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕವಿತಾ ರಮೇಶ್.</p>.<p>‘ಉಜ್ಜನಿಪುರ ಮತ್ತು ಕ್ಯಾಂಪ್ನಲ್ಲಿ 110 ಮನೆಗಳಿವೆ. ಇದು 1971ರಲ್ಲಿ ಸ್ಥಳಾಂತರಗೊಂಡ ಗ್ರಾಮ. ಈ ಜಾಗದ ಪಹಣಿ 5 ಜನರ ಹೆಸರಿನಲ್ಲಿದ್ದು, ಇ-ಸ್ವತ್ತು ನೀಡಲು ಆಗುತ್ತಿಲ್ಲ. ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇ-ಸ್ವತ್ತು ಇಲ್ಲದ ಕಾರಣ ಗ್ರಾಮಸ್ಥರು ಪಂಚಾಯಿತಿಯ ಕಂದಾಯ ಕಟ್ಟುತ್ತಿಲ್ಲ’ ಎಂದು ಅಧ್ಯಕ್ಷ ಲೋಹಿತ್ ಬೇಸರ ವ್ಯಕ್ತಪಡಿಸಿದರು.</p>.<p>ಗ್ರಾಮ ಪಂಚಾಯಿತಿ ಇ-ಸ್ವತ್ತು ಸಮಸ್ಯೆ ಬಗೆಹರಿಸದಿದ್ದರೆ, ತಾಲ್ಲೂಕು ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪಂಚಾಯಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಎಚ್ಚರಿಸಿದ್ದಾರೆ.</p>.<p>‘ಇ-ಸ್ವತ್ತು ಗ್ರಾಮ ಪಂಚಾಯಿತಿಯ ಅತಿದೊಡ್ಡ ಸಮಸ್ಯೆಯಾಗಿದೆ. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ’ ಎಂದು ಪಿಡಿಒ ಮಂಜುಳಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಸ್ವೆಹಳ್ಳಿ</strong>: ಹೋಬಳಿಯ ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿರೇಬಾಸೂರು, ಉಜ್ಜನಿಪುರ, ಸದಾಶಿವಪುರ ಹಾಗೂ ಬೀರಗೊಂಡನಹಳ್ಳಿ ಗ್ರಾಮಗಳಿವೆ. ಆದರೆ, ಸದಾಶಿವಪುರ ಬಿಟ್ಟು ಉಳಿದ ಗ್ರಾಮಗಳ ಜನರಿಗೆ ಇ-ಸ್ವತ್ತು ಸಿಗುತ್ತಿಲ್ಲ. ಇದು ಈ ಪಂಚಾಯಿತಿಯ ಸಮಸ್ಯೆಯಾಗಿದೆ.</p>.<p>‘ಮನೆಯಲ್ಲಿ ಅಜ್ಜನ ಕಾಲದಿಂದಲೂ ವಾಸವಿದ್ದೇವೆ. ನಾವಿರುವ ಮನೆ ದಾಖಲೆಯನ್ನು ಪಂಚಾಯಿತಿಯಲ್ಲಿ ಕೇಳಿದರೆ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ. ಇದರಿಂದ ಸರ್ಕಾರದ ಯೋಜನೆಗಳ ಲಾಭ ಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಹಿರೇಬಾಸೂರು ಗ್ರಾಮದ ಜನಾರ್ದನ್ ಪಾಟೀಲ್.</p>.<p>‘ಅರ್ಧ ಗ್ರಾಮವು ಗ್ರಾಮ ಠಾಣೆಗೆ ಸೇರಿದ್ದು, ಇನ್ನುಳಿದ ಜಾಗದ ಪಹಣಿ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿದೆ. 150ಕ್ಕೂ ಹೆಚ್ಚು ಮನೆಗಳಿದ್ದು, ಗ್ರಾಮಸ್ಥರು ಇ-ಸ್ವತ್ತು ನೀಡುವಂತೆ ಕೋರುತ್ತಿದ್ದಾರೆ. ದಾಖಲೆಗಳನ್ನು ಒದಗಿಸಿದರೂ, ಆ ಮನೆಗಳ ಇ-ಸ್ವತ್ತು ನೀಡಲು ಆಗುತ್ತಿಲ್ಲ. ಈ ಬಗ್ಗೆ ಹಲವು ಅರ್ಜಿಗಳನ್ನು ಮೇಲಧಿಕಾರಿಗಳಿಗೆ ಕಳುಹಿಸಿದ್ದರೂ, ಪರಿಹಾರ ಸಿಕ್ಕಿಲ್ಲ’ ಎನ್ನುತ್ತಾರೆ ಹಿರೇಬಾಸೂರು ಗ್ರಾಮ ಪಂಚಾಯಿತಿ ಸದಸ್ಯ ಹಾಲೇಶ್.</p>.<p>‘ಬೀರಗೊಂಡನ ಹಳ್ಳಿಯಲ್ಲಿ 600ಕ್ಕೂ ಹೆಚ್ಚು ಮನೆಗಳಿವೆ. ಇದು 1965ರಲ್ಲಿ ಸ್ಥಳಾಂತರಗೊಂಡ ಗ್ರಾಮ. ಅಂದು ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಅರ್ಹ ಫಲಾನುಭವಿಗಳಿಗೆ ನಿವೇಶನಕ್ಕೆ ಜಾಗ ನೀಡಲಾಗಿತ್ತು. ಗ್ರಾಮಸ್ಥರು ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಯಾರೊಬ್ಬರಿಗೂ ಇ-ಸ್ವತ್ತನ್ನು ನೀಡಿಲ್ಲ. ಈ ಬಗ್ಗೆ ಹಲವು ಬಾರಿ ಪಂಚಾಯಿತಿಯಲ್ಲಿ ಠರಾವು ಮಾಡಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕವಿತಾ ರಮೇಶ್.</p>.<p>‘ಉಜ್ಜನಿಪುರ ಮತ್ತು ಕ್ಯಾಂಪ್ನಲ್ಲಿ 110 ಮನೆಗಳಿವೆ. ಇದು 1971ರಲ್ಲಿ ಸ್ಥಳಾಂತರಗೊಂಡ ಗ್ರಾಮ. ಈ ಜಾಗದ ಪಹಣಿ 5 ಜನರ ಹೆಸರಿನಲ್ಲಿದ್ದು, ಇ-ಸ್ವತ್ತು ನೀಡಲು ಆಗುತ್ತಿಲ್ಲ. ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇ-ಸ್ವತ್ತು ಇಲ್ಲದ ಕಾರಣ ಗ್ರಾಮಸ್ಥರು ಪಂಚಾಯಿತಿಯ ಕಂದಾಯ ಕಟ್ಟುತ್ತಿಲ್ಲ’ ಎಂದು ಅಧ್ಯಕ್ಷ ಲೋಹಿತ್ ಬೇಸರ ವ್ಯಕ್ತಪಡಿಸಿದರು.</p>.<p>ಗ್ರಾಮ ಪಂಚಾಯಿತಿ ಇ-ಸ್ವತ್ತು ಸಮಸ್ಯೆ ಬಗೆಹರಿಸದಿದ್ದರೆ, ತಾಲ್ಲೂಕು ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪಂಚಾಯಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಎಚ್ಚರಿಸಿದ್ದಾರೆ.</p>.<p>‘ಇ-ಸ್ವತ್ತು ಗ್ರಾಮ ಪಂಚಾಯಿತಿಯ ಅತಿದೊಡ್ಡ ಸಮಸ್ಯೆಯಾಗಿದೆ. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ’ ಎಂದು ಪಿಡಿಒ ಮಂಜುಳಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>