ದಾವಣಗೆರೆ ತಾಲ್ಲೂಕಿನಲ್ಲಿ 138 ಮಂದಿಗೆ ಸೋಂಕು ತಗುಲಿದೆ. ಅದರಲ್ಲಿ ಎಲೆಬೇತೂರು, ಬಸಾಪುರ, ಅತ್ತಿಗೆರೆ, ಬೆಳವನೂರು ಹೀಗೆ ಸುಮಾರು 10 ಮಂದಿ ಗ್ರಾಮೀಣ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಉಳಿದವರು ಪಾಲಿಕೆ ವ್ಯಾಪ್ತಿಯವರು. ಪಿ.ಜೆ. ಬಡಾವಣೆ, ಸರಸ್ವತಿ ನಗರ, ರವೀಂದ್ರನಾಥ ಬಡಾವಣೆ, ಜಯನಗರ, ನಿಟುವಳ್ಳಿ, ಶಾಮನೂರು, ವಿನೋಬನಗರ, ವಿದ್ಯಾನಗರ ಮುಂತಾದ ಕಡೆಗಳಲ್ಲಿ ಐದಕ್ಕಿಂತ ಅಧಿಕ ಪ್ರಕರಣಗಳು ಕಂಡು ಬಂದಿವೆ.