<p><strong>ನ್ಯಾಮತಿ:</strong> ತಾಲ್ಲೂಕಿನ ಮುಸ್ಸೇನಾಳು ಗ್ರಾಮದ ರೈತರಿಗೆ ಸೇರಿದ ಅಡಿಕೆ ಮರಗಳು ಶನಿವಾರ ರಾತ್ರಿ ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾಗಿವೆ. </p>.<p>ಗ್ರಾಮದ ರೈತ ಧರ್ಮಿಬಾಯಿ ರಾಮನಾಯ್ಕ ಅವರ 2 ಎಕರೆಯಲ್ಲಿನ ಅಡಿಕೆ ಮರಗಳು ಬೆಂಕಿಗೆ ಸುಟ್ಟಿವೆ. ಡ್ರಿಪ್ ಪೈಪುಗಳು, ಪಿವಿಸಿ ಪೈಪ್ಗಳು, ಸ್ಪ್ರಿಂಕ್ಲರ್ ಸೇರಿದಂತೆ ಅಂದಾಜು ₹5 ಲಕ್ಷ ಮೌಲ್ಯದ ಸಾಮಗ್ರಿ ಹಾಗೂ 8 ಸಾಗುವಾನಿ ಮರಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. </p>.<p>ರಾಮನಾಯ್ಕ ಪೀರ್ಯಾನಾಯ್ಕ ಅವರ 1 ಎಕರೆ 25 ಗುಂಟೆಯಲ್ಲಿ ಬೆಳೆದಿದ್ದ ಅಡಿಕೆ ಮರಗಳು ಹಾಗೂ ಸಾಮಗ್ರಿ ಸುಟ್ಟಿದ್ದು, ₹ 3 ಲಕ್ಷ ನಷ್ಟ ಸಂಭವಿಸಿದೆ. </p>.<p>ಹಾಲಿಬಾಯಿ ರಾಜೇಶನಾಯ್ಕ ಅವರ ಎರಡೂವರೆ ಎಕರೆಯಲ್ಲಿ ಬೆಳೆದಿದ್ದ ಅಡಿಕೆ ಮರಗಳು ಹಾಗೂ ಸಾಮಗ್ರಿ ಸುಟ್ಟಿದ್ದು, ₹ 4.50 ಲಕ್ಷ ನಷ್ಟ ಸಂಭವಿಸಿದೆ. </p>.<p>ಗೋಪಾಲನಾಯ್ಕ ಶೇಖರನಾಯ್ಕ ಎಂಬುವರ 3 ಎಕರೆಯಲ್ಲಿನ ಅಡಿಕೆ ಮರಗಳು ಸುಟ್ಟಿದ್ದು ₹3 ಲಕ್ಷ ನಷ್ಟವಾಗಿದೆ. </p>.<p>ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಎಚ್.ಮಂಜುನಾಥ ಭೇಟಿ ನೀಡಿದ್ದರು.</p>.<p>ಸ್ಥಳಕ್ಕೆ ಹೊನ್ನಾಳಿ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯಾಮತಿ:</strong> ತಾಲ್ಲೂಕಿನ ಮುಸ್ಸೇನಾಳು ಗ್ರಾಮದ ರೈತರಿಗೆ ಸೇರಿದ ಅಡಿಕೆ ಮರಗಳು ಶನಿವಾರ ರಾತ್ರಿ ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾಗಿವೆ. </p>.<p>ಗ್ರಾಮದ ರೈತ ಧರ್ಮಿಬಾಯಿ ರಾಮನಾಯ್ಕ ಅವರ 2 ಎಕರೆಯಲ್ಲಿನ ಅಡಿಕೆ ಮರಗಳು ಬೆಂಕಿಗೆ ಸುಟ್ಟಿವೆ. ಡ್ರಿಪ್ ಪೈಪುಗಳು, ಪಿವಿಸಿ ಪೈಪ್ಗಳು, ಸ್ಪ್ರಿಂಕ್ಲರ್ ಸೇರಿದಂತೆ ಅಂದಾಜು ₹5 ಲಕ್ಷ ಮೌಲ್ಯದ ಸಾಮಗ್ರಿ ಹಾಗೂ 8 ಸಾಗುವಾನಿ ಮರಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. </p>.<p>ರಾಮನಾಯ್ಕ ಪೀರ್ಯಾನಾಯ್ಕ ಅವರ 1 ಎಕರೆ 25 ಗುಂಟೆಯಲ್ಲಿ ಬೆಳೆದಿದ್ದ ಅಡಿಕೆ ಮರಗಳು ಹಾಗೂ ಸಾಮಗ್ರಿ ಸುಟ್ಟಿದ್ದು, ₹ 3 ಲಕ್ಷ ನಷ್ಟ ಸಂಭವಿಸಿದೆ. </p>.<p>ಹಾಲಿಬಾಯಿ ರಾಜೇಶನಾಯ್ಕ ಅವರ ಎರಡೂವರೆ ಎಕರೆಯಲ್ಲಿ ಬೆಳೆದಿದ್ದ ಅಡಿಕೆ ಮರಗಳು ಹಾಗೂ ಸಾಮಗ್ರಿ ಸುಟ್ಟಿದ್ದು, ₹ 4.50 ಲಕ್ಷ ನಷ್ಟ ಸಂಭವಿಸಿದೆ. </p>.<p>ಗೋಪಾಲನಾಯ್ಕ ಶೇಖರನಾಯ್ಕ ಎಂಬುವರ 3 ಎಕರೆಯಲ್ಲಿನ ಅಡಿಕೆ ಮರಗಳು ಸುಟ್ಟಿದ್ದು ₹3 ಲಕ್ಷ ನಷ್ಟವಾಗಿದೆ. </p>.<p>ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಎಚ್.ಮಂಜುನಾಥ ಭೇಟಿ ನೀಡಿದ್ದರು.</p>.<p>ಸ್ಥಳಕ್ಕೆ ಹೊನ್ನಾಳಿ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>