ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕ ಸೇರಿ 16 ಮಂದಿಗೆ ಕೋವಿಡ್

ತಂದೆಯಿಂದ ಮಗನಿಗೆ ಹರಡಿದ ವೈರಸ್‌* ಪೊಲೀಸ್ ಕಾನ್ಸ್‌ಟೆಬಲ್, ಇಬ್ಬರು ಪೌರಕಾರ್ಮಿಕರಿಗೆ ಸೋಂಕು
Last Updated 1 ಜುಲೈ 2020, 17:26 IST
ಅಕ್ಷರ ಗಾತ್ರ

ದಾವಣಗೆರೆ: ಒಂದು ವರ್ಷದ ಮಗು ಸೇರಿ ಜಿಲ್ಲೆಯಲ್ಲಿ 16 ಮಂದಿಗೆ ಬುಧವಾರ ಕೋವಿಡ್‌–19 ದೃಢಪ‍ಟ್ಟಿದೆ. ಮೂವರು ಸಂಪೂರ್ಣರಾಗಿ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ.

ಒಬ್ಬರು ಪೊಲೀಸ್ ಕಾನ್‌ಸ್ಟೆಬಲ್, ಎಂಸಿಸಿ ‘ಬಿ’ ಬ್ಲಾಕ್‌ನ ಹಾಗೂ ಜಗಳೂರಿನ ತಲಾ ಒಬ್ಬ ಪೌರಕಾರ್ಮಿಕರು, ಕಂಟೈನ್‌ಮೆಂಟ್‌ ವಲಯದ ನಾಲ್ಕು ಮಂದಿ ಹಾಗೂ ತೀವ್ರ ಉಸಿರಾಟದ ಸಮಸ್ಯೆ ಇರುವ ನಾಲ್ಕು ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದೆ.

ದಾವಣಗೆರೆ ತಾಲ್ಲೂಕಿನ ನೇರ್ಲಿಗೆ ಗ್ರಾಮದ 45 ವರ್ಷದ ಪುರುಷನಿಗೆ (ಪಿ.15374) ಸಿ.ಜೆ. ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ (ಪಿ.8064) ಸಂಪರ್ಕದಿಂದ, ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದ 35 ವರ್ಷದ ಪುರುಷನಿಗೆ (15375) ಅದೇ ಗ್ರಾಮದ 59 ವರ್ಷದ ವ್ಯಕ್ತಿಯಿಂದ (ಪಿ.10396) ಸೋಂಕು ಕಾಣಿಸಿಕೊಂಡಿದೆ.

ಆಜಾದ್‌ನಗರದ 66 ವರ್ಷದ ಪುರುಷ (ಪಿ15376), ಹರಿಹರ ವಿದ್ಯಾನಗರದ ಸಿ ಬ್ಲಾಕ್‌ನ 33 ವರ್ಷದ ಪುರುಷ (15380), ದಾವಣಗೆರೆಯ ಕುರುಬರ ಕೇರಿಯ 58 ವರ್ಷದ ಪುರುಷ (ಪಿ.15388) ಹಾಗೂ 50 ಮಹಿಳೆ (15389)ಗೆ ಶೀತ ಜ್ವರದ ಹಿನ್ನೆಲೆ ಹೊಂದಿದ್ದು, ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ.

28 ವರ್ಷದ ಪೊಲೀಸ್ ಕಾನ್‌ಸ್ಟೆಬಲ್ (15377), ಎಂಸಿಸಿ ಬಿ ಬ್ಲಾಕ್‌ನ 30 ವರ್ಷದ ಪೌರಕಾರ್ಮಿಕ (15378)ನಿಗೆ ಕೋವಿಡ್–19 ದೃಢಪಟ್ಟಿತ್ತು ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ.

ಹೊನ್ನಾಳಿ ತಾಲ್ಲೂಕಿನ ಹತ್ತೂರು ಗ್ರಾಮದ ಒಂದು ವರ್ಷದ ಗಂಡು ಮಗುವಿಗೆ (15379) ಹಾಗೂ 58 ವರ್ಷದ ಪುರುಷನಿಗೆ (15385) ಸೋಂಕು ಕಾಣಿಸಿಕೊಂಡಿದ್ದು, ಮಗನನ್ನು ನೋಡಲು ಹೋಗಿದ್ದ ವೇಳೆ ತಂದೆಯ ಸಂಪರ್ಕದಿಂದಲೇ (ಪಿ.9892) ಸಂಪರ್ಕದಿಂದ ಬಂದಿದೆ.

ಹರಿಹರ ಚರ್ಚ್‌ ರಸ್ತೆಯ ಚಿನ್ನಪ್ಪ ಕಾಂಪೌಂಡ್‌ನ 40 ವರ್ಷದ ಪುರುಷ (ಪಿ.15380) ಜಗಳೂರು ತಾಲ್ಲೂಕಿನ ಚಿಕ್ಕ ಉಜ್ಜೈನಿಯ 11 ವರ್ಷದ ಬಾಲಕಿ (ಪಿ.15381) ಭಾಷಾನಗರದ 31 ವರ್ಷದ ಪುರುಷನಿಗೆ ಹಾಗೂ ನ್ಯಾಮತಿಯ ಟ್ಯಾಗೋರ್ ರಸ್ತೆಯ 65 ವರ್ಷದ ಪುರುಷನಿಗೆ ನಿಯಮಿತ ತಪಾಸಣೆ (ರ್ಯಾಂಡಮ್ ಟೆಸ್ಟ್‌) ವೇಳೆ ಸೋಂಕು ತಗುಲಿದ್ದು, ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ.

ಸುಲ್ತಾನ್‌ಪೇಟೆಯ 58 ವರ್ಷದ ಮಹಿಳೆಗೆ (ಪಿ.15384) ಹೊಂಡದ ಸರ್ಕಲ್‌ನ 35 ವರ್ಷದ ಮಹಿಳೆ (14403)ಯಿಂದ ಬಂದಿದೆ. ಜಗಳೂರಿನ 49 ವರ್ಷದ ಪೌರಕಾರ್ಮಿಕನಿಗೆ (15387) ಸೋಂಕು ತಗುಲಿದ್ದು, ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ.

ಮೂವರ ಬಿಡುಗಡೆ: ಚನ್ನಗಿರಿ ಗೌಡರ ಬೀದಿಯ 14 ವರ್ಷದ ಬಾಲಕ (ಪಿ.9891) ಕುಂಬಾರ ಬೀದಿಯ 11 ವರ್ಷದ ಬಾಲಕಿ (ಪಿ.9895) ಹಾಗೂ 39 ವರ್ಷದ ಪುರುಷ (9896) ಬಿಡುಗಡೆಗೊಂಡಿದ್ದಾರೆ.

ಒಟ್ಟು 325 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 266 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 8 ಸಾವು ಸಂಭವಿಸಿದ್ದು 51 ಸಕ್ರಿಯ ಪ್ರಕರಣಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT