‘ಏಪ್ರಿಲ್, ಮೇ ತಿಂಗಳಲ್ಲಿ ಸೇವಾ ಸಿಂಧುವಿನಲ್ಲಿ ಅರ್ಜಿ ಭರ್ತಿ ಮಾಡಿ 5900 ಮಂದಿ ವಿವಿಧ ರಾಜ್ಯಗಳಿಗೆ, ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋದರು. 268 ಮಂದಿ ಹೆಸರು ನೋಂದಾಯಿಸಿ ಹೊರರಾಜ್ಯಗಳಿಂದ ನಮ್ಮಲ್ಲಿಗೆ ಬಂದರು. ಹಲವು ಮಂದಿ ಹೆಸರು ನೋಂದಾಯಿಸಿ ಬಳಿಕ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಬಂದರು. ಅವರನ್ನೆಲ್ಲ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಯಿತು. ಇದಲ್ಲದೇ 178 ಮಂದಿ ಯಾವುದೇ ಮಾಹಿತಿ ನೀಡಿದೇ ಹೊರಗಿನಿಂದ ನಮ್ಮ ಜಿಲ್ಲೆಗೆ ಬಂದರು. ಅವರನ್ನೂ ಪತ್ತೆ ಹಚ್ಚಲಾಯಿತು’ ಎಂದು ವಿವರಿಸಿದರು.