<p><strong>ದಾವಣಗೆರೆ: </strong>‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗದಿಂದ ‘ದೀಕ್ಷಾ’ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಆರನೇ ಆವೃತ್ತಿಯ ‘ಪ್ರಜಾವಾಣಿ ಕ್ವಿಜ್ ಚಾಂಪಿಯನ್ಷಿಪ್’ ಆಯೋಜಿಸಲಾಗಿದೆ.</p>.<p>ಮೊದಲನೇ ಬಹುಮಾನ ₹ 50 ಸಾವಿರ, ಎರಡನೇ ಬಹುಮಾನ ₹ 30 ಸಾವಿರ, ಮೂರನೇ ಬಹುಮಾನ ₹ 10 ಸಾವಿರ, ನಾಲ್ಕನೇ ಬಹುಮಾನ ₹ 6,000 ಹಾಗೂ ಐದನೇ ಬಹುಮಾನ ₹ 4,000 ನೀಡಲಾಗುವುದು.</p>.<p>5ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರತಿ ಶಾಲೆಯಿಂದ ತಲಾ ಇಬ್ಬರು ವಿದ್ಯಾರ್ಥಿಗಳ ಮೂರು ತಂಡಗಳು ಪಾಲ್ಗೊಳ್ಳಲು ಅವಕಾಶವಿದೆ. ಸ್ಪರ್ಧಿಗಳು ಶಾಲೆಗಳ ಮೂಲಕವೇ ಪಾಲ್ಗೊಳ್ಳಬೇಕು. ಪ್ರವೇಶ ಉಚಿತವಾಗಿದೆ.</p>.<p>ಆದಿತ್ಯ ಬಿರ್ಲಾ, ವೇದಾಂತ–ಸೀಸಾ ಗೋವಾ ಐರನ್ ಓರ್ ಕಂಪನಿ ಹಾಗೂ ಎಸ್ಬಿಐ ಸಹ ಪ್ರಾಯೋಜಕತ್ವದಲ್ಲಿ ಈ ಸ್ಪರ್ಧೆ ನಡೆಯಲಿದೆ.</p>.<p>ದಾವಣಗೆರೆ ವಲಯದ ರಸಪ್ರಶ್ನೆ ಸ್ಪರ್ಧೆಯು ದಾವಣಗೆರೆಯ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಜನವರಿ 20ರಂದು ಬೆಳಿಗ್ಗೆ 9.30ಕ್ಕೆ ಆರಂಭಗೊಳ್ಳಲಿದೆ. ಬೆಳಿಗ್ಗೆ 8.30ರಿಂದ ನೋಂದಣಿ ಪ್ರಕ್ರಿಯೆ ನಡೆಯಲಿದೆ.</p>.<p>ವಲಯ ಮಟ್ಟದಲ್ಲಿ ಆಯ್ಕೆಯಾಗುವ ತಂಡಗಳಿಗೆ ಜನವರಿ 30ರಂದು ಬೆಂಗಳೂರಿನಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ.</p>.<p>ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳ ಶಾಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಸಕ್ತರು ಮಾಹಿತಿಗಾಗಿ ದಾವಣಗೆರೆ: ಪ್ರಕಾಶ್ ಎಸ್. – 9448914995, ಶಿವಮೊಗ್ಗ: ಎಸ್.ಕೆ. ಸಂಜೀವ್ಕುಮಾರ್ – 9606931790, ಚಿತ್ರದುರ್ಗ: ನಂದಗೋಪಾಲ – 9606912249 ಸಂಪರ್ಕಿಸಬಹುದು.</p>.<p>ನೋಂದಣಿ ಅರ್ಜಿಯನ್ನು ಇ–ಮೇಲ್ pvquizdvg@prajavani.co.in ಮೂಲಕವೂ ಶಾಲೆಯ ಮುಖ್ಯೋಪಾಧ್ಯಾಯರು/ಪ್ರಾಚಾರ್ಯರ ಮೂಲಕ ಕಳಿಸಿ ನೋಂದಾಯಿಸಿಕೊಳ್ಳಬಹುದು. ನೋಂದಣಿ ಆರಂಭವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗದಿಂದ ‘ದೀಕ್ಷಾ’ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಆರನೇ ಆವೃತ್ತಿಯ ‘ಪ್ರಜಾವಾಣಿ ಕ್ವಿಜ್ ಚಾಂಪಿಯನ್ಷಿಪ್’ ಆಯೋಜಿಸಲಾಗಿದೆ.</p>.<p>ಮೊದಲನೇ ಬಹುಮಾನ ₹ 50 ಸಾವಿರ, ಎರಡನೇ ಬಹುಮಾನ ₹ 30 ಸಾವಿರ, ಮೂರನೇ ಬಹುಮಾನ ₹ 10 ಸಾವಿರ, ನಾಲ್ಕನೇ ಬಹುಮಾನ ₹ 6,000 ಹಾಗೂ ಐದನೇ ಬಹುಮಾನ ₹ 4,000 ನೀಡಲಾಗುವುದು.</p>.<p>5ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರತಿ ಶಾಲೆಯಿಂದ ತಲಾ ಇಬ್ಬರು ವಿದ್ಯಾರ್ಥಿಗಳ ಮೂರು ತಂಡಗಳು ಪಾಲ್ಗೊಳ್ಳಲು ಅವಕಾಶವಿದೆ. ಸ್ಪರ್ಧಿಗಳು ಶಾಲೆಗಳ ಮೂಲಕವೇ ಪಾಲ್ಗೊಳ್ಳಬೇಕು. ಪ್ರವೇಶ ಉಚಿತವಾಗಿದೆ.</p>.<p>ಆದಿತ್ಯ ಬಿರ್ಲಾ, ವೇದಾಂತ–ಸೀಸಾ ಗೋವಾ ಐರನ್ ಓರ್ ಕಂಪನಿ ಹಾಗೂ ಎಸ್ಬಿಐ ಸಹ ಪ್ರಾಯೋಜಕತ್ವದಲ್ಲಿ ಈ ಸ್ಪರ್ಧೆ ನಡೆಯಲಿದೆ.</p>.<p>ದಾವಣಗೆರೆ ವಲಯದ ರಸಪ್ರಶ್ನೆ ಸ್ಪರ್ಧೆಯು ದಾವಣಗೆರೆಯ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಜನವರಿ 20ರಂದು ಬೆಳಿಗ್ಗೆ 9.30ಕ್ಕೆ ಆರಂಭಗೊಳ್ಳಲಿದೆ. ಬೆಳಿಗ್ಗೆ 8.30ರಿಂದ ನೋಂದಣಿ ಪ್ರಕ್ರಿಯೆ ನಡೆಯಲಿದೆ.</p>.<p>ವಲಯ ಮಟ್ಟದಲ್ಲಿ ಆಯ್ಕೆಯಾಗುವ ತಂಡಗಳಿಗೆ ಜನವರಿ 30ರಂದು ಬೆಂಗಳೂರಿನಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ.</p>.<p>ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳ ಶಾಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಸಕ್ತರು ಮಾಹಿತಿಗಾಗಿ ದಾವಣಗೆರೆ: ಪ್ರಕಾಶ್ ಎಸ್. – 9448914995, ಶಿವಮೊಗ್ಗ: ಎಸ್.ಕೆ. ಸಂಜೀವ್ಕುಮಾರ್ – 9606931790, ಚಿತ್ರದುರ್ಗ: ನಂದಗೋಪಾಲ – 9606912249 ಸಂಪರ್ಕಿಸಬಹುದು.</p>.<p>ನೋಂದಣಿ ಅರ್ಜಿಯನ್ನು ಇ–ಮೇಲ್ pvquizdvg@prajavani.co.in ಮೂಲಕವೂ ಶಾಲೆಯ ಮುಖ್ಯೋಪಾಧ್ಯಾಯರು/ಪ್ರಾಚಾರ್ಯರ ಮೂಲಕ ಕಳಿಸಿ ನೋಂದಾಯಿಸಿಕೊಳ್ಳಬಹುದು. ನೋಂದಣಿ ಆರಂಭವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>