<p><strong>ಮಲೇಬೆನ್ನೂರು: </strong>ಮುಂಗಾರಿಗೂ ಮುನ್ನ ಅಧಿಕ ಮಳೆ ಸುರಿಯುತ್ತಿರುವ ಕಾರಣ, ಒಣ ಹುಲ್ಲಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.</p>.<p>ಕೃಷಿಕರು ಬೇಸಿಗೆ ಹಂಗಾಮಿನನಲ್ಲಿ ಭತ್ತದ ಕಟಾವಿನ ನಂತರ ಚೆನ್ನಾಗಿ ಒಣಗಿದ ಹುಲ್ಲನ್ನು ಬಣವೆ ಹಾಕಿ ಸಂಗ್ರಹಿಸುವುದು ವಾಡಿಕೆ. ಒಣ ಹುಲ್ಲು ವರ್ಷಪೂರ್ತಿ ಹಸು, ಎಮ್ಮೆ ಕರುಗಳ ಜೀವನಾಧಾರ.</p>.<p>ಈ ಬಾರಿ ಭತ್ತದ ಒಕ್ಕಲು ಆರಂಭವಾದಾಗಿನಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಭತ್ತದ ಗದ್ದೆಗಳಲ್ಲಿ ಬೆಳೆ ಚಾಪೆ ಹಾಸಿದ್ದು, ತೇವಾಂಶ ಹೆಚ್ಚಾಗಿದೆ. ಮಳೆಗೆ ಸಿಲುಕಿ ತೊಯ್ದು ತೊಪ್ಪೆಯಾಗುತ್ತಿದೆ. ಹಸಿ ಹುಲ್ಲನ್ನು ಬೇಲ್ ಯಂತ್ರ ಬಳಸಿ ಕಟ್ಟಲು ಮತ್ತು ಬಣವೆ ಹಾಕಲು ಆಗುತ್ತಿಲ್ಲ.</p>.<p>ಕೆಲವೆಡೆ ಈಗಾಗಲೇ ಒಣಗಿರುವ ಹುಲ್ಲಿನ ಸಂಗ್ರಹಣೆ, ಕಟ್ಟು ಕಟ್ಟುವ ಕಾರ್ಯ ಭರದಿಂದ ಸಾಗಿದೆ. ಒಂದು ಕಟ್ಟಿಗೆ ₹200 ಇದ್ದು, 1 ಎಕರೆಯಿಂದ ದೊರೆಯುವ ಹುಲ್ಲಿಗೆ ಅಂದಾಜು ₹4,000 ಧಾರಣೆ ಇದೆ. ಟ್ರ್ಯಾಕ್ಟರ್ ಬಾಡಿಗೆ, ಕಾರ್ಮಿಕರ ಕೂಲಿ ಪ್ರತ್ಯೇಕ.</p>.<p>ಸುತ್ತಮುತ್ತಲ ಪ್ರದೇಶಗಳಾದ ರಾಣೆಬೆನ್ನೂರು, ಹಾವೇರಿ, ರಟ್ಟಿಹಳ್ಳಿ ಹಾಗೂ ಸ್ಥಳೀಯವಾಗಿಯೂ ಬೇಡಿಕೆ ಹೆಚ್ಚಿದೆ ಎಂದು ರೈತರಾದ ಹೊಸಳ್ಳಿ ಕರಿಬಸಪ್ಪ, ಕುಂಬಳೂರು ಹನುಮಂತು, ನಿಟ್ಟೂರು ಬಸವರಾಜಪ್ಪ ಮಾಹಿತಿ ನೀಡಿದರು.</p>.<p>ಭತ್ತದ ಧಾರಣೆ ಕುಸಿದಾಗ ಒಣ ಹುಲ್ಲಿಗೆ ಬೇಡಿಕೆ ಹೆಚ್ಚಾಗಿರುವುದು ವಿಶೇಷ. ಜಾನುವಾರುಗಳಿಗೆ ಹುಲ್ಲು ಬೇಕಾಗಿದ್ದು, ಬೆಲೆ ಅಧಿಕವಾದರೂ ಕೊಳ್ಳಲೇ ಬೇಕಾಗಿದೆ ಎಂದು ರಟ್ಟಿಹಳ್ಳಿ ತಾಲ್ಲೂಕು ಕುಡುಪಲಿ ಗ್ರಾಮದ ರೈತ ಸೋಮಶೇಖರ ಹೇಳಿದರು.</p>.<p>ರೈತರು ಜಾಗರೂಕತೆಯಿಂದ ಹುಲ್ಲನ್ನು ಸಾಗಿಸಬೇಕು. ವಿದ್ಯುತ್ ಮಾರ್ಗ ಇರುವೆಡೆ ಟ್ರ್ಯಾಕ್ಟರ್ ಮೇಲೆ ಕುಳಿತುಕೊಳ್ಳಬಾರದು. ವೇಗವಾಗಿ ಚಾಲನೆ ಮಾಡುವುದು ಅಪಾಯಕಾರಿ. ಅಕ್ಕಪಕ್ಕದ ಸಂಚರಿಸುವ ವಾಹನಗಳಿಗೆ ಬದು ನೀಡುವಾಗ ಜಾಗ್ರತೆ ವಹಿಸಬೇಕು ಎಂದು ಪೊಲೀಸರು ಸೂಚನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು: </strong>ಮುಂಗಾರಿಗೂ ಮುನ್ನ ಅಧಿಕ ಮಳೆ ಸುರಿಯುತ್ತಿರುವ ಕಾರಣ, ಒಣ ಹುಲ್ಲಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.</p>.<p>ಕೃಷಿಕರು ಬೇಸಿಗೆ ಹಂಗಾಮಿನನಲ್ಲಿ ಭತ್ತದ ಕಟಾವಿನ ನಂತರ ಚೆನ್ನಾಗಿ ಒಣಗಿದ ಹುಲ್ಲನ್ನು ಬಣವೆ ಹಾಕಿ ಸಂಗ್ರಹಿಸುವುದು ವಾಡಿಕೆ. ಒಣ ಹುಲ್ಲು ವರ್ಷಪೂರ್ತಿ ಹಸು, ಎಮ್ಮೆ ಕರುಗಳ ಜೀವನಾಧಾರ.</p>.<p>ಈ ಬಾರಿ ಭತ್ತದ ಒಕ್ಕಲು ಆರಂಭವಾದಾಗಿನಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಭತ್ತದ ಗದ್ದೆಗಳಲ್ಲಿ ಬೆಳೆ ಚಾಪೆ ಹಾಸಿದ್ದು, ತೇವಾಂಶ ಹೆಚ್ಚಾಗಿದೆ. ಮಳೆಗೆ ಸಿಲುಕಿ ತೊಯ್ದು ತೊಪ್ಪೆಯಾಗುತ್ತಿದೆ. ಹಸಿ ಹುಲ್ಲನ್ನು ಬೇಲ್ ಯಂತ್ರ ಬಳಸಿ ಕಟ್ಟಲು ಮತ್ತು ಬಣವೆ ಹಾಕಲು ಆಗುತ್ತಿಲ್ಲ.</p>.<p>ಕೆಲವೆಡೆ ಈಗಾಗಲೇ ಒಣಗಿರುವ ಹುಲ್ಲಿನ ಸಂಗ್ರಹಣೆ, ಕಟ್ಟು ಕಟ್ಟುವ ಕಾರ್ಯ ಭರದಿಂದ ಸಾಗಿದೆ. ಒಂದು ಕಟ್ಟಿಗೆ ₹200 ಇದ್ದು, 1 ಎಕರೆಯಿಂದ ದೊರೆಯುವ ಹುಲ್ಲಿಗೆ ಅಂದಾಜು ₹4,000 ಧಾರಣೆ ಇದೆ. ಟ್ರ್ಯಾಕ್ಟರ್ ಬಾಡಿಗೆ, ಕಾರ್ಮಿಕರ ಕೂಲಿ ಪ್ರತ್ಯೇಕ.</p>.<p>ಸುತ್ತಮುತ್ತಲ ಪ್ರದೇಶಗಳಾದ ರಾಣೆಬೆನ್ನೂರು, ಹಾವೇರಿ, ರಟ್ಟಿಹಳ್ಳಿ ಹಾಗೂ ಸ್ಥಳೀಯವಾಗಿಯೂ ಬೇಡಿಕೆ ಹೆಚ್ಚಿದೆ ಎಂದು ರೈತರಾದ ಹೊಸಳ್ಳಿ ಕರಿಬಸಪ್ಪ, ಕುಂಬಳೂರು ಹನುಮಂತು, ನಿಟ್ಟೂರು ಬಸವರಾಜಪ್ಪ ಮಾಹಿತಿ ನೀಡಿದರು.</p>.<p>ಭತ್ತದ ಧಾರಣೆ ಕುಸಿದಾಗ ಒಣ ಹುಲ್ಲಿಗೆ ಬೇಡಿಕೆ ಹೆಚ್ಚಾಗಿರುವುದು ವಿಶೇಷ. ಜಾನುವಾರುಗಳಿಗೆ ಹುಲ್ಲು ಬೇಕಾಗಿದ್ದು, ಬೆಲೆ ಅಧಿಕವಾದರೂ ಕೊಳ್ಳಲೇ ಬೇಕಾಗಿದೆ ಎಂದು ರಟ್ಟಿಹಳ್ಳಿ ತಾಲ್ಲೂಕು ಕುಡುಪಲಿ ಗ್ರಾಮದ ರೈತ ಸೋಮಶೇಖರ ಹೇಳಿದರು.</p>.<p>ರೈತರು ಜಾಗರೂಕತೆಯಿಂದ ಹುಲ್ಲನ್ನು ಸಾಗಿಸಬೇಕು. ವಿದ್ಯುತ್ ಮಾರ್ಗ ಇರುವೆಡೆ ಟ್ರ್ಯಾಕ್ಟರ್ ಮೇಲೆ ಕುಳಿತುಕೊಳ್ಳಬಾರದು. ವೇಗವಾಗಿ ಚಾಲನೆ ಮಾಡುವುದು ಅಪಾಯಕಾರಿ. ಅಕ್ಕಪಕ್ಕದ ಸಂಚರಿಸುವ ವಾಹನಗಳಿಗೆ ಬದು ನೀಡುವಾಗ ಜಾಗ್ರತೆ ವಹಿಸಬೇಕು ಎಂದು ಪೊಲೀಸರು ಸೂಚನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>