<p><strong>ಕಡರನಾಯ್ಕನಹಳ್ಳಿ</strong>: ಭತ್ತದ ಕೊಯ್ಲು ಪ್ರಾರಂಭವಾಗಿದ್ದರೂ ವರಣನ ಆರ್ಭಟ ನಿಂತಿಲ್ಲ. ಜಮೀನುಗಳಲ್ಲೇ ಭತ್ತ ಕೊಳೆಯುತ್ತಿದ್ದು, ಜಾನುವಾರುಗಳ ಮೇವಿಗೂ ಕುತ್ತು ಬಂದಿದೆ ಎಂಬುದು ರೈತರ ಆತಂಕಕ್ಕೆ ಕಾರಣವಾಗಿದೆ. </p>.<p>ಮಳೆಯ ಬಿಡುವಿನಲ್ಲೇ ಯಂತ್ರದ ಮೂಲಕ ಕೆಲವು ರೈತರು ಕಟಾವು ಮಾಡಿದ್ದಾರೆ. ಆದರೆ ಒಣಗಿಸಲು ಬಿಸಿಲು ಇಲ್ಲದೆ ಪರದಾಡುತ್ತಿದ್ದಾರೆ. ಜಾನುವಾರುಗಳಿಗೆ ಮೇವು ಇಲ್ಲದಂತಾಗಿ, ರೈತರಿಗೆ ನಷ್ಟದ ಮೇಲೆ ನಷ್ಟ ಅನುಭವಿಸುವಂತಾಗಿದೆ ಎಂದು ರೈತರಾದ ಚಂದ್ರಪ್ಪ ಗೋಣೆಪ್ಪರ ಮತ್ತು ಮಂಜುನಾಥ್ ಗೋಣೆಪ್ಪರ ಅಳಲನ್ನು ತೋಡಿಕೊಂಡರು.</p>.<p>ಎಕರೆಗೆ ₹15,000ದಿಂದ ₹20,000 ಖರ್ಚು ಬರುತ್ತದೆ. ಕ್ವಿಂಟಲ್ ಭತ್ತದ ದರ ₹1,950 ನಿಂದ ₹2,000 ಇದೆ. ಮೇವೂ ಸಿಗದ ಸ್ಥಿತಿ ಇದ್ದು, ಇದನ್ನೂ ಪರಿಗಣಿಸಿ, ಪರಿಹಾರ ನೀಡಬೇಕು ಎಂದು ವಾಸನದ ರೈತ ಗದಿಗೆಪ್ಪ ಗಂಟೇರ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡರನಾಯ್ಕನಹಳ್ಳಿ</strong>: ಭತ್ತದ ಕೊಯ್ಲು ಪ್ರಾರಂಭವಾಗಿದ್ದರೂ ವರಣನ ಆರ್ಭಟ ನಿಂತಿಲ್ಲ. ಜಮೀನುಗಳಲ್ಲೇ ಭತ್ತ ಕೊಳೆಯುತ್ತಿದ್ದು, ಜಾನುವಾರುಗಳ ಮೇವಿಗೂ ಕುತ್ತು ಬಂದಿದೆ ಎಂಬುದು ರೈತರ ಆತಂಕಕ್ಕೆ ಕಾರಣವಾಗಿದೆ. </p>.<p>ಮಳೆಯ ಬಿಡುವಿನಲ್ಲೇ ಯಂತ್ರದ ಮೂಲಕ ಕೆಲವು ರೈತರು ಕಟಾವು ಮಾಡಿದ್ದಾರೆ. ಆದರೆ ಒಣಗಿಸಲು ಬಿಸಿಲು ಇಲ್ಲದೆ ಪರದಾಡುತ್ತಿದ್ದಾರೆ. ಜಾನುವಾರುಗಳಿಗೆ ಮೇವು ಇಲ್ಲದಂತಾಗಿ, ರೈತರಿಗೆ ನಷ್ಟದ ಮೇಲೆ ನಷ್ಟ ಅನುಭವಿಸುವಂತಾಗಿದೆ ಎಂದು ರೈತರಾದ ಚಂದ್ರಪ್ಪ ಗೋಣೆಪ್ಪರ ಮತ್ತು ಮಂಜುನಾಥ್ ಗೋಣೆಪ್ಪರ ಅಳಲನ್ನು ತೋಡಿಕೊಂಡರು.</p>.<p>ಎಕರೆಗೆ ₹15,000ದಿಂದ ₹20,000 ಖರ್ಚು ಬರುತ್ತದೆ. ಕ್ವಿಂಟಲ್ ಭತ್ತದ ದರ ₹1,950 ನಿಂದ ₹2,000 ಇದೆ. ಮೇವೂ ಸಿಗದ ಸ್ಥಿತಿ ಇದ್ದು, ಇದನ್ನೂ ಪರಿಗಣಿಸಿ, ಪರಿಹಾರ ನೀಡಬೇಕು ಎಂದು ವಾಸನದ ರೈತ ಗದಿಗೆಪ್ಪ ಗಂಟೇರ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>