ತಡರಾತ್ರಿ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಪ್ರಸಕ್ತ ಸಾಲಿನ ಮುಂಗಾರು ಪೂರ್ವ ಪೈಕಿ ಇದು ಹದ ಮಳೆ ಎನಿಸಿದೆ.
ನದಿ, ಕೆರೆ, ಹಳ್ಳ, ಕೊಳ್ಳ ಹಾಗೂ ಕೊಳವೆ ಬಾವಿಗಳಲ್ಲಿ ನೀರು ಇಲ್ಲದಂತಾಗಿ ಬಸವಳಿದಿದ್ದ ರೈತರು ಹಾಗೂ ಜನ ಸಾಮಾನ್ಯರಿಗೆ ಈ ಮಳೆ ಆಶಾಭಾವನೆ ಮೂಡಿಸಿದೆ.
ಮಳೆ ಪ್ರಮಾಣ: ಹರಿಹರದಲ್ಲಿ 3 ಸೆಂ.ಮೀ ಕೊಂಡಜ್ಜಿಯಲ್ಲಿ 2, ಹೊಳೆಸಿರಿಗೆರೆಯಲ್ಲಿ 3.3, ಮಲೆಬೆನ್ನೂರು 1.7, ಸೆಂ.ಮೀ ಸೇರಿ 10 ಸೆಂ.ಮೀ ಮಳೆ ದಾಖಲಾಗಿದೆ.
ಈ ಮಳೆಯಿಂದಾಗಿ ಮಳೆಯಾಶ್ರಿತ ಬೆಳೆ ಬೆಳೆಯುವ ರೈತರು ಜಮೀನು ಹದ ಮಾಡಿಕೊಳ್ಳಲು ಅನುವು ಮಾಡಿದೆ. ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದ ತೋಟಗಾರಿಕೆ ಬೆಳೆಗಳಿಗೆ ಆಪತ್ಬಾಂಧವವಾಗಿ ಪರಿಣಮಿಸಿದೆ ಎಂಬ ಅಭಿಪ್ರಾಯ ಮೂಡಿದೆ.