<p><strong>ಚನ್ನಗಿರಿ: </strong>ಪಟ್ಟಣ ಸೇರಿ ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಚದುರಿದಂತೆ ಸಾಧಾರಣ ಮಳೆಯಾಗಿದೆ. ಮಳೆಗೆ ತಾಲ್ಲೂಕಿನ ಕಾಕನೂರು ಗ್ರಾಮದ ಬಳಿ ಇರುವ ಸೂಳೆಕೆರೆಯ ಪ್ರಮುಖ ನೀರಿನ ಸೆಲೆಯಾಗಿರುವ ಹಿರೇಹಳ್ಳ (ಹರಿದ್ರಾವತಿ ನದಿ) ಮೈ ದುಂಬಿ ಹರಿಯುತ್ತಿದೆ.</p>.<p>ಈ ಹಳ್ಳ ನೆರೆಯ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಗ್ರಾಮದ ಕಡೆಯಿಂದ ಹರಿದು ಬರುತ್ತದೆ. ಈ ಭಾಗದಲ್ಲಿ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿರುವುದರಿಂದ ಹಿರೇಹಳ್ಳ ತುಂಬಿದೆ. ವರ್ಷದಲ್ಲಿ ಈ ಹಿರೇಹಳ್ಳ ತುಂಬಿ ಹರಿದರೆ ತಾಲ್ಲೂಕಿನ ಹೊನ್ನೇಮರದಹಳ್ಳಿ, ಲಕ್ಷ್ಮೀಸಾಗರ, ಕೊರಟಿಕೆರೆ, ಹಿರೇಗಂಗುರು, ಚಿಕ್ಕಗಂಗೂರು, ಬೊಮ್ಮೇನಹಳ್ಳಿ, ನುಗ್ಗಿಹಳ್ಳಿ, ಬುಳುಸಾಗರ ಮುಂತಾದ ಗ್ರಾಮಗಳ ಕೊಳವೆಬಾವಿಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಈ ಕಾರಣದಿಂದ ಈ ಭಾಗದ ರೈತರಲ್ಲಿ ಸಂತಸ ಮನೆ ಮಾಡಿದೆ.</p>.<p>ಚನ್ನಗಿರಿ– 5.5 ಮಿ.ಮೀ., ದೇವರಹಳ್ಳಿ– 8.2 ಮಿ.ಮೀ., ಬಸವಾಪಟ್ಟಣ– 5.4 ಮಿ.ಮೀ., ಉಬ್ರಾಣಿ– 12.4 ಮಿ.ಮೀ. ಹಾಗೂ ಕೆರೆಬಿಳಚಿ ಗ್ರಾಮದಲ್ಲಿ 8.8 ಮಿ.ಮೀ. ಮಳೆಯಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪ್ರಭಾರ ತಹಶೀಲ್ದಾರ್ ಅರುಣ್ ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಗಿರಿ: </strong>ಪಟ್ಟಣ ಸೇರಿ ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಚದುರಿದಂತೆ ಸಾಧಾರಣ ಮಳೆಯಾಗಿದೆ. ಮಳೆಗೆ ತಾಲ್ಲೂಕಿನ ಕಾಕನೂರು ಗ್ರಾಮದ ಬಳಿ ಇರುವ ಸೂಳೆಕೆರೆಯ ಪ್ರಮುಖ ನೀರಿನ ಸೆಲೆಯಾಗಿರುವ ಹಿರೇಹಳ್ಳ (ಹರಿದ್ರಾವತಿ ನದಿ) ಮೈ ದುಂಬಿ ಹರಿಯುತ್ತಿದೆ.</p>.<p>ಈ ಹಳ್ಳ ನೆರೆಯ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಗ್ರಾಮದ ಕಡೆಯಿಂದ ಹರಿದು ಬರುತ್ತದೆ. ಈ ಭಾಗದಲ್ಲಿ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿರುವುದರಿಂದ ಹಿರೇಹಳ್ಳ ತುಂಬಿದೆ. ವರ್ಷದಲ್ಲಿ ಈ ಹಿರೇಹಳ್ಳ ತುಂಬಿ ಹರಿದರೆ ತಾಲ್ಲೂಕಿನ ಹೊನ್ನೇಮರದಹಳ್ಳಿ, ಲಕ್ಷ್ಮೀಸಾಗರ, ಕೊರಟಿಕೆರೆ, ಹಿರೇಗಂಗುರು, ಚಿಕ್ಕಗಂಗೂರು, ಬೊಮ್ಮೇನಹಳ್ಳಿ, ನುಗ್ಗಿಹಳ್ಳಿ, ಬುಳುಸಾಗರ ಮುಂತಾದ ಗ್ರಾಮಗಳ ಕೊಳವೆಬಾವಿಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಈ ಕಾರಣದಿಂದ ಈ ಭಾಗದ ರೈತರಲ್ಲಿ ಸಂತಸ ಮನೆ ಮಾಡಿದೆ.</p>.<p>ಚನ್ನಗಿರಿ– 5.5 ಮಿ.ಮೀ., ದೇವರಹಳ್ಳಿ– 8.2 ಮಿ.ಮೀ., ಬಸವಾಪಟ್ಟಣ– 5.4 ಮಿ.ಮೀ., ಉಬ್ರಾಣಿ– 12.4 ಮಿ.ಮೀ. ಹಾಗೂ ಕೆರೆಬಿಳಚಿ ಗ್ರಾಮದಲ್ಲಿ 8.8 ಮಿ.ಮೀ. ಮಳೆಯಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪ್ರಭಾರ ತಹಶೀಲ್ದಾರ್ ಅರುಣ್ ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>