<p><strong>ಕಡರನಾಯ್ಕನಹಳ್ಳಿ</strong>: ಸಮೀಪದ ಕೊಕ್ಕನೂರು ಹೊರವಲಯದಲ್ಲಿರುವ ಹೊರಬೀರದೇವರ ದೊಡ್ಡ ಎಡೆ ಜಾತ್ರೆ ವಿವಿಧ ಗ್ರಾಮದ 106 ದೇವತಾ ಉತ್ಸವ ಮೂರ್ತಿಗಳು, ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.</p>.<p>ಮುಂಜಾನೆ ಈರಗಾರರಿಂದ ಹಲಗ ಹಾಯುವ ಮತ್ತು ಸಾಂಪ್ರದಾಯಿಕ ಆಚರಣೆಗಳು ನಡೆದವು. ದೊಡ್ಡ ಎಡೆ ಸಿದ್ಧವಾದ ನಂತರ ಬೀರದೇವರ ಆಯುದ ಹಿಡಿದು ಈರಗಾರರು ವೀರಾವೇಶದ ಭಂಗಿಯನ್ನು ಪ್ರದರ್ಶನ ಮಾಡಿದರು. </p>.<p>ಜಾತ್ರೆಯ ಪ್ರಯುಕ್ತ ದೇವಸ್ಥಾನವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು.</p>.<p>ಶನಿವಾರ ಸಂಜೆ ಕೊಕ್ಕನೂರು ಗ್ರಾಮಕ್ಕೆ ವಿವಿಧ ಗ್ರಾಮಗಳಿಂದ 106 ದೇವತಾ ಉತ್ಸವ ಮೂರ್ತಿಗಳು ಪಲ್ಲಕ್ಕಿಯಲ್ಲಿ ಆಗಮಿಸಿ ಆಂಜನೇಯ ಸ್ವಾಮಿ ರಥಬೀದಿಯಲ್ಲಿ ಅನಾವರಣಗೊಂಡವು. ನಂತರ ಹೊರವಲಯದ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತಲುಪಿದವು.</p>.<p>ನಂತರ ಎಲ್ಲಾ ಉತ್ಸವ ಮೂರ್ತಿಗಳಿಗೆ ಭಕ್ತರು ಪೂಜೆ ಸಲ್ಲಿಸಿದರು. ಭಾನುವಾರ ಬ್ರಾಹ್ಮಿ ಮೂಹೂರ್ತದಲ್ಲಿ ಅಭಿಷೇಕ, ವಿಶೇಷ ಪೂಜೆ ಮಾಡಲಾಯಿತು.</p>.<p>ನಂದಿಗುಡಿ ವೃಷಭ ಪುರಿ ಮಹಾಸಂಸ್ಥಾನದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪೂಜೆ ಸಲ್ಲಿಸಿದರು.</p>.<p>ಭಕ್ತಿ ಸಾಗರದಂತೆ 106 ದೇವತಾ ಉತ್ಸವ ಮೂರ್ತಿಗಳೊಡನೆ ಸಹಸ್ರಾರು ಭಕ್ತರು ಸೇರಿ ಆಚರಿಸುತ್ತಿರುವ ಬೀರಲಿಂಗೇಶ್ವರ ದೇವರ ದೊಡ್ಡ ಎಡೆ ಸಂಭ್ರಮ ಸೌಹಾರ್ದತೆಯ ಸಂಕೇತವಾಗಿದೆ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡರನಾಯ್ಕನಹಳ್ಳಿ</strong>: ಸಮೀಪದ ಕೊಕ್ಕನೂರು ಹೊರವಲಯದಲ್ಲಿರುವ ಹೊರಬೀರದೇವರ ದೊಡ್ಡ ಎಡೆ ಜಾತ್ರೆ ವಿವಿಧ ಗ್ರಾಮದ 106 ದೇವತಾ ಉತ್ಸವ ಮೂರ್ತಿಗಳು, ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.</p>.<p>ಮುಂಜಾನೆ ಈರಗಾರರಿಂದ ಹಲಗ ಹಾಯುವ ಮತ್ತು ಸಾಂಪ್ರದಾಯಿಕ ಆಚರಣೆಗಳು ನಡೆದವು. ದೊಡ್ಡ ಎಡೆ ಸಿದ್ಧವಾದ ನಂತರ ಬೀರದೇವರ ಆಯುದ ಹಿಡಿದು ಈರಗಾರರು ವೀರಾವೇಶದ ಭಂಗಿಯನ್ನು ಪ್ರದರ್ಶನ ಮಾಡಿದರು. </p>.<p>ಜಾತ್ರೆಯ ಪ್ರಯುಕ್ತ ದೇವಸ್ಥಾನವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು.</p>.<p>ಶನಿವಾರ ಸಂಜೆ ಕೊಕ್ಕನೂರು ಗ್ರಾಮಕ್ಕೆ ವಿವಿಧ ಗ್ರಾಮಗಳಿಂದ 106 ದೇವತಾ ಉತ್ಸವ ಮೂರ್ತಿಗಳು ಪಲ್ಲಕ್ಕಿಯಲ್ಲಿ ಆಗಮಿಸಿ ಆಂಜನೇಯ ಸ್ವಾಮಿ ರಥಬೀದಿಯಲ್ಲಿ ಅನಾವರಣಗೊಂಡವು. ನಂತರ ಹೊರವಲಯದ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತಲುಪಿದವು.</p>.<p>ನಂತರ ಎಲ್ಲಾ ಉತ್ಸವ ಮೂರ್ತಿಗಳಿಗೆ ಭಕ್ತರು ಪೂಜೆ ಸಲ್ಲಿಸಿದರು. ಭಾನುವಾರ ಬ್ರಾಹ್ಮಿ ಮೂಹೂರ್ತದಲ್ಲಿ ಅಭಿಷೇಕ, ವಿಶೇಷ ಪೂಜೆ ಮಾಡಲಾಯಿತು.</p>.<p>ನಂದಿಗುಡಿ ವೃಷಭ ಪುರಿ ಮಹಾಸಂಸ್ಥಾನದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪೂಜೆ ಸಲ್ಲಿಸಿದರು.</p>.<p>ಭಕ್ತಿ ಸಾಗರದಂತೆ 106 ದೇವತಾ ಉತ್ಸವ ಮೂರ್ತಿಗಳೊಡನೆ ಸಹಸ್ರಾರು ಭಕ್ತರು ಸೇರಿ ಆಚರಿಸುತ್ತಿರುವ ಬೀರಲಿಂಗೇಶ್ವರ ದೇವರ ದೊಡ್ಡ ಎಡೆ ಸಂಭ್ರಮ ಸೌಹಾರ್ದತೆಯ ಸಂಕೇತವಾಗಿದೆ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>