ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳಲ್ಲಿ ರೈತರ ಸಂಖ್ಯೆ ಹೆಚ್ಚಿದೆ. ಬೆಳಿಗ್ಗೆ ತರಕಾರಿ ಕೊಯ್ದು ತಂದು ಮಾರಾಟ ಮಾಡಲು, ಮಂಗಳೂರು, ಉಡುಪಿ ಮತ್ತಿತರ ಜಿಲ್ಲೆಗಳಿಗೆ ಸರಬರಾಜು ಮಾಡಲು ಈ ಅವಧಿ ಸಾಕಾಗುವುದಿಲ್ಲ. ತರಕಾರಿ, ಶೇಂಗಾ, ಮೆಕ್ಕೆಜೋಳಗಳನ್ನು ದಾವಣಗೆರೆ ಎಪಿಎಂಸಿಗೆ ಸಾಗಾಟ ಮಾಡಬೇಕಾಗುತ್ತದೆ. ಅಲ್ಲಿ ತಲುಪುವಷ್ಟರಲ್ಲಿ 10 ಗಂಟೆ ದಾಟಿರುತ್ತದೆ. ಅವಸರದಲ್ಲಿ ಕಡಿಮೆ ಬೆಲೆಗೆ ನೀಡಿ ಬರಬೇಕಾಗುತ್ತದೆ. ಅದಕ್ಕಾಗಿ ಮಧ್ಯಾಹ್ನ 3ರವರೆಗೆ ಓಡಾಟದ ಸಮಯವನ್ನು ವಿಸ್ತರಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ವಿಶ್ವನಾಥ್ ಇದ್ದರು.