ವೃತ್ತಿ ರಂಗಭೂಮಿಯ ಜತೆಗೆ ಸುಗಮ ಸಂಗೀತ, ಜನಪದ ಸಂಗೀತ, ಭರತನಾಟ್ಯ, ಆರ್ಕೆಸ್ಟ್ರಾ ಕಲಾವಿದರಿಗೂ ತೊಂದರೆಯಾಗಿದೆ. ಅಧಿಕಾರಿಗಳು, ಅಕಾಡೆಮಿ ಅಧ್ಯಕ್ಷರು, ನಿರ್ದೇಶಕರು ಎಲ್ಲರೂ ಇಂಥ ನಿಯಮ ಮಾಡುವ ಮೊದಲು ಯೋಚಿಸಬೇಕಿತ್ತು. ಕೂಡಲೇ ಈ ನಿಯಮವನ್ನು ತೆಗೆಯಬೇಕು. ರಂಗಭೂಮಿಯಲ್ಲಿ ಕೆಲಸ ಮಾಡುವ 18 ವರ್ಷ ದಾಟಿರುವ ಎಲ್ಲರಿಗೂ ₹ 3 ಸಾವಿರ ನೀಡಬೇಕು. ಆದರೂ ಷರತ್ತು ವಿಧಿಸಲೇಬೇಕು ಎಂದಿದ್ದರೆ 25 ವರ್ಷಕ್ಕೆ ನಿಗದಿ ಮಾಡಿ ಎಂದು ಶಂಭುಲಿಂಗಪ್ಪ ಮನವಿ ಮಾಡಿದ್ದಾರೆ.