<p><strong>ಹೊನ್ನಾಳಿ:</strong> ತಾಲ್ಲೂಕಿನ ಕುಳಗಟ್ಟೆ ಕ್ರಾಸ್ ಬಳಿ ಅಕ್ರಮವಾಗಿ ಗಂಧದ ಮರ ಸಾಗಾಟ ಮಾಡುತ್ತಿದ್ದಾಗ ಮೂವರನ್ನು ಬಂಧಿಸಿರುವ ಪೊಲೀಸರು ₹ 42,000 ಮೌಲ್ಯದ 21 ಕೆ.ಜಿ. ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.</p>.<p>ತಾಲ್ಲೂಕಿನ ಚೀಲಾಪುರ ಗ್ರಾಮದ ಸೈಯದ್ ಅಲ್ಲಾಭಕ್ಷಿ, ಮಹಮದ್ ರಫೀಕ್, ನೂರುಲ್ಲಾ ಬಂಧಿತರು.</p>.<p>ಹೊನ್ನಾಳಿ ಠಾಣೆಯ ಪಿಎಸ್ಐ ಸಿದ್ದಪ್ಪ ಅವರು ಗಸ್ತಿನಲ್ಲಿದ್ದಾಗ ಆರೋಪಿಗಳು ಗಂಧದ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದಾಗ ಸೆರೆ ಸಿಕ್ಕಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯ ಸಿಬ್ಬಂದಿ ಪರಶುರಾಮಪ್ಪ ಎಎಸ್ಐ, ದೊಡ್ಡಬಸಪ್ಪ, ಧರ್ಮಪ್ಪ, ಸಿದ್ದನಗೌಡ, ರಾಘವೇಂದ್ರ, ಮಂಜುನಾಥ, ಸುರೇಶನಾಯ್ಕ ದಾಳಿಯ ವೇಳೆ ಇದ್ದರು.</p>.<p><strong>ಗಂಧದ ಮರ ಕಳವು</strong></p><p>ನ್ಯಾಮತಿ: ತಾಲ್ಲೂಕಿನ ಫಲವನಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಬೆಳೆದಿದ್ದ ಗಂಧದ ಮರಗಳನ್ನು ಕಳವು ಮಾಡಿದ ಪ್ರಕರಣ ಮಂಗಳವಾರ ನಡೆದಿದೆ.</p>.<p>ಗ್ರಾಮದ ಕೆ.ಎಚ್. ಸಂತೋಷಕುಮಾರ ಅವರು ಕಂಚಿಗನಹಳ್ಳಿ ಗಡಿಯಲ್ಲಿರುವ ಜಮೀನಿನಲ್ಲಿ 2,150 ಗಂಧದ ಮರಗಳನ್ನು ಬೆಳೆದಿದ್ದು ಅದರಲ್ಲಿ 8 ವರ್ಷದ 10 ಗಂಧದ ಮರಗಳನ್ನು ಮಿಷನ್ನಲ್ಲಿ ಕತ್ತರಿಸಿ ಕಳವು ಮಾಡಿದ್ದಾರೆ ಎಂದು ನ್ಯಾಮತಿ ಪೊಲೀಸರಿಗೆ ದೂರು ನೀಡಿದ್ದಾರೆ.</p>.<p>ಪಿಎಸ್ಐ ಪಿ.ಎಸ್.ರಮೇಶ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ:</strong> ತಾಲ್ಲೂಕಿನ ಕುಳಗಟ್ಟೆ ಕ್ರಾಸ್ ಬಳಿ ಅಕ್ರಮವಾಗಿ ಗಂಧದ ಮರ ಸಾಗಾಟ ಮಾಡುತ್ತಿದ್ದಾಗ ಮೂವರನ್ನು ಬಂಧಿಸಿರುವ ಪೊಲೀಸರು ₹ 42,000 ಮೌಲ್ಯದ 21 ಕೆ.ಜಿ. ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.</p>.<p>ತಾಲ್ಲೂಕಿನ ಚೀಲಾಪುರ ಗ್ರಾಮದ ಸೈಯದ್ ಅಲ್ಲಾಭಕ್ಷಿ, ಮಹಮದ್ ರಫೀಕ್, ನೂರುಲ್ಲಾ ಬಂಧಿತರು.</p>.<p>ಹೊನ್ನಾಳಿ ಠಾಣೆಯ ಪಿಎಸ್ಐ ಸಿದ್ದಪ್ಪ ಅವರು ಗಸ್ತಿನಲ್ಲಿದ್ದಾಗ ಆರೋಪಿಗಳು ಗಂಧದ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದಾಗ ಸೆರೆ ಸಿಕ್ಕಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯ ಸಿಬ್ಬಂದಿ ಪರಶುರಾಮಪ್ಪ ಎಎಸ್ಐ, ದೊಡ್ಡಬಸಪ್ಪ, ಧರ್ಮಪ್ಪ, ಸಿದ್ದನಗೌಡ, ರಾಘವೇಂದ್ರ, ಮಂಜುನಾಥ, ಸುರೇಶನಾಯ್ಕ ದಾಳಿಯ ವೇಳೆ ಇದ್ದರು.</p>.<p><strong>ಗಂಧದ ಮರ ಕಳವು</strong></p><p>ನ್ಯಾಮತಿ: ತಾಲ್ಲೂಕಿನ ಫಲವನಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಬೆಳೆದಿದ್ದ ಗಂಧದ ಮರಗಳನ್ನು ಕಳವು ಮಾಡಿದ ಪ್ರಕರಣ ಮಂಗಳವಾರ ನಡೆದಿದೆ.</p>.<p>ಗ್ರಾಮದ ಕೆ.ಎಚ್. ಸಂತೋಷಕುಮಾರ ಅವರು ಕಂಚಿಗನಹಳ್ಳಿ ಗಡಿಯಲ್ಲಿರುವ ಜಮೀನಿನಲ್ಲಿ 2,150 ಗಂಧದ ಮರಗಳನ್ನು ಬೆಳೆದಿದ್ದು ಅದರಲ್ಲಿ 8 ವರ್ಷದ 10 ಗಂಧದ ಮರಗಳನ್ನು ಮಿಷನ್ನಲ್ಲಿ ಕತ್ತರಿಸಿ ಕಳವು ಮಾಡಿದ್ದಾರೆ ಎಂದು ನ್ಯಾಮತಿ ಪೊಲೀಸರಿಗೆ ದೂರು ನೀಡಿದ್ದಾರೆ.</p>.<p>ಪಿಎಸ್ಐ ಪಿ.ಎಸ್.ರಮೇಶ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>