ಎಸ್ಪಿ ಆರ್. ಚೇತನ್ ಅವರ ಸೂಚನೆಯಂತೆ ಡಿವೈಎಸ್ಪಿ ಎಸ್.ಎಂ. ನಾಗರಾಜ್, ಸಿಪಿಐ ಎ.ಆನಂದ್, ಪಿಎಸ್ಐ ವೀರಬಸಪ್ಪ ಕುಸಲಾಪುರ, ದಕ್ಷಿಣ ಸಂಚಾರ ಪಿಎಸ್ಐ ಹನುಮಂತಪ್ಪ ಎಂ. ಶಿರಿಹಳ್ಳಿ ನೇತೃತ್ವದಲ್ಲಿ ಸೋಮವಾರ 22 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆರ್ಟಿಒ ಕಚೇರಿಯಿಂದ ಮೋಟರ್ ವೆಹಿಕಲ್ ಇನ್ಸ್ಪೆಕ್ಟರ್ ಅವರನ್ನು ಕರೆಸಿ ಟೆಕ್ನಿಶಿಯನ್ ಮೂಲಕ ಸೈಲೆನ್ಸರ್ ಪರಿಶೀಲಿಸಲಾಯಿತು.