ಆಜಾದಿಸೇ ಸ್ವರಾಜ್ ರಾಷ್ಟ್ರಮಟ್ಟದ ಅಭಿಯಾನದ ಅಂಗವಾಗಿ ಕೂಡಲ ಸಂಗಮ, ಮಂಗಳೂರು, ಕುಸೂರು, ಕೋಲಾರದಿಂದ ಆರಂಭಗೊಂಡಿರುವ ಯಾತ್ರೆಗಳು ಜ.11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದ್ದು, ಅಂದು ಜಾಥಾಗಳ ಸಮಾಗಮ ಸತ್ಯಾಗ್ರಹ ಸಮಾವೇಶ ನಡೆಯಲಿದೆ. ಸಮಾರೋಪದಲ್ಲಿ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ದಾಸ್, ಪ್ರಗತಿಪರ ಚಿಂತಕ ಜಿ. ರಾಮಕೃಷ್ಣ ಇತರರು ಭಾಗವಹಿಸುವರು ಎಂದರು.