ದಾವಣಗೆರೆ: 14 ದಿನಗಳ ಲಾಕ್ಡೌನ್ ಜಾರಿಯಾದ ಎರಡನೇ ದಿನವೂ ಪೊಲೀಸರು ಹಲವು ಕಡೆ ಒತ್ತಾಯಪೂರ್ವಕವಾಗಿ ಅಂಗಡಿಗಳನ್ನು ಬಂದ್ ಮಾಡಿಸಬೇಕಾಯಿತು. ಹಲವು ಜಂಕ್ಷನ್ಗಳಲ್ಲಿ ಜನರ ಓಡಾಟ ನಿಲ್ಲಿಸಲು ಪೊಲೀಸರು ಲಾಠಿ ಬೀಸಿದರು.
ಅಗತ್ಯ ವಸ್ತುಗಳನ್ನ ಕೊಳ್ಳುವ ಸಮಯ ಮುಗಿದಿದ್ದರೂ ಜನರ ಓಡಾಟ ಇತ್ತು. ದ್ವಿಚಕ್ರ ವಾಹನಗಳಲ್ಲಿ ಸಂಚಾರ ಹೆಚ್ಚಾಗಿತ್ತು. ಅನಗತ್ಯ ಓಡಾಡುವ ವಾಹನಗಳ ತಡೆದು ಪೊಲೀಸರ ತಪಾಸಣೆ ನಡೆಸಿದರು. ಇದರಿಂದ ಗುಂಡಿ ಸರ್ಕಲ್ ಸಹಿತ ಕೆಲವೆಡೆ ಟ್ರಾಫಿಕ್ ಜಾಮ್ ಆಯಿತು.
ವಿವಿಧ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ಕೆಲವು ಕಡೆಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಆವರಗೆರೆ ಸಹಿತ ಕೆಲವು ಕಡೆಗಳಲ್ಲಿ ಯಾರೂ ಓಡಾಡಿದರೂ ಕೇಳುವವರಿರಲಿಲ್ಲ.