‘ಈ ವರ್ಷ ಹಿಂದೆಂದೂ ಕಾಣದಷ್ಟು ತಾಪಮಾನ ಇದೆ. ಇತ್ತೀಚಿನ ದಿನಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಸೂಕ್ಷ್ಮ ಫಸಲಾದ ಮಾವಿನ ಮರಗಳ ಹೂ, ಹೀಚು ಬಿಸಿಲಿಗೆ ಬಾಡಿ ಉದುರಿ ಹೋಗಿವೆ. ನಾವು ರೈತರೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಅವರಿಗೆ ಹಣ ನೀಡಬೇಕು. ಪ್ರಕೃತಿ ವಿಕೋಪದಿಂದ ಈ ರೀತಿ ಆಗಿದೆ ಎಂದು ನಾವು ಮನವರಿಕೆ ಮಾಡಿಕೊಟ್ಟಾಗ ಕೆಲ ರೈತರು ಅರ್ಧದಷ್ಟು ಹಣವನ್ನು ಕಡಿಮೆ ಮಾಡಿಕೊಳ್ಳಲು ಒಪ್ಪುತ್ತಾರೆ. ಈ ಬಾರಿ ಅಷ್ಟು ಹಣ ಕೊಡುವುದೂ ನಮಗೆ ಅಸಾಧ್ಯವಾಗಿದೆ. ಫಸಲು ಚೆನ್ನಾಗಿ ಬಂದಿದ್ದರೆ 24 ಹಣ್ಣುಗಳ ಬಾಕ್ಸ್ ಒಂದಕ್ಕೆ ₹ 400ರಿಂದ ₹ 600 ರವರೆಗೂ ದರ ಸಿಗುತ್ತಿತ್ತು. ಆದರೆ, ಈಗ ಹಾಕಿದ ಬಂಡವಾಳವೂ ಕೈ ಸೇರದಾಗಿದೆ’ ಎಂದು ಕೇಣಿದಾರರಾದ ಅಫನ್, ಮುಷ್ತಾಕ್ ಮತ್ತು ಆರಿಫ್ ಬೇಸರ ವ್ಯಕ್ತಪಡಿಸಿದರು.