<p><strong>ಬಸವಾಪಟ್ಟಣ:</strong> ಪ್ರಸಕ್ತ ವರ್ಷ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಘನಘೋರವಾಗಿ ಪರಿಣಮಿಸಿರುವ ಬೇಸಿಗೆಯ ಬಿರು ಬಿಸಿಲಿನಿಂದಾಗಿ ‘ಹಣ್ಣುಗಳ ರಾಜ’ ಮಾವಿನ ಫಸಲು ಕ್ಷೀಣವಾಗಿದೆ. ಮಾವಿನ ಮರಗಳಲ್ಲಿನ ಹೂವು ಮತ್ತು ಹೀಚು ಉದುರುತ್ತಿದ್ದು, ರೈತರು ಮತ್ತು ಕೇಣಿದಾರರಿಗೆ ಅಪಾರ ನಷ್ಟ ಸಂಭವಿಸಿದೆ.</p>.<p>ಹೋಬಳಿಯಾದ್ಯಂತ ಇರುವ ಮಾನಿವ ತೋಟಗಳಲ್ಲಿ ಆಪೂಸ್ ತಳಿಯ ಮರಗಳು ಹೆಚ್ಚಾಗಿವೆ. ಬಿಸಿಲಿನ ತಾಪದಿಂದ ಶೇಕಡ 75ರಷ್ಟು ಮರಗಳಲ್ಲಿನ ಹೂವು ಮತ್ತು ಹೀಚು ಉದುರುತ್ತಿವೆ.</p>.<p>‘ಮಾವಿನ ಮರಗಳಲ್ಲಿ ಹೂ ಬಿಡಲಾರಂಭಿಸಿದ ಕೂಡಲೇ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ತೋಟದ ಕಾಯಿ ಖರೀದಿಸಲು ಮುಂಗಡ ಹಣ ಪಾವತಿಸುತ್ತೇವೆ. ಸುಮಾರು 600 ಮರಗಳನ್ನು ಕೇಣಿಗೆ ಪಡೆದಿದ್ದು, ಮರಗಳ ನಿರ್ವಹಣೆ, ಕೊಯ್ಲು ನಾವೇ ಮಾಡುತ್ತೇವೆ. ಈವರೆಗೆ ₹ 1 ಲಕ್ಷ ವೆಚ್ಚದಲ್ಲಿ ನಾಲ್ಕು ಬಾರಿ ಕೀಟನಾಶಕ ಸಿಂಪಡಿಸಿದ್ದೇವೆ. ಬಿಸಿಲಿನಿಂದಾಗಿ ಮರಗಳಲ್ಲಿ ಕಾಯಿಗಳೇ ಇಲ್ಲವಾಗಿದೆ. ಇದರಿಂದ ಅಪಾರ ನಷ್ಟ ಸಂಭವಿಸಿದೆ’ ಎಂದು ಕೇಣಿದಾರ ಸೈಯದ್ ಹಿದಾಯತ್ ಬೇಸರ ವ್ಯಕ್ತಪಡಿಸಿದರು.</p>.<p>‘ಈ ವರ್ಷ ಹಿಂದೆಂದೂ ಕಾಣದಷ್ಟು ತಾಪಮಾನ ಇದೆ. ಇತ್ತೀಚಿನ ದಿನಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಸೂಕ್ಷ್ಮ ಫಸಲಾದ ಮಾವಿನ ಮರಗಳ ಹೂ, ಹೀಚು ಬಿಸಿಲಿಗೆ ಬಾಡಿ ಉದುರಿ ಹೋಗಿವೆ. ನಾವು ರೈತರೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಅವರಿಗೆ ಹಣ ನೀಡಬೇಕು. ಪ್ರಕೃತಿ ವಿಕೋಪದಿಂದ ಈ ರೀತಿ ಆಗಿದೆ ಎಂದು ನಾವು ಮನವರಿಕೆ ಮಾಡಿಕೊಟ್ಟಾಗ ಕೆಲ ರೈತರು ಅರ್ಧದಷ್ಟು ಹಣವನ್ನು ಕಡಿಮೆ ಮಾಡಿಕೊಳ್ಳಲು ಒಪ್ಪುತ್ತಾರೆ. ಈ ಬಾರಿ ಅಷ್ಟು ಹಣ ಕೊಡುವುದೂ ನಮಗೆ ಅಸಾಧ್ಯವಾಗಿದೆ. ಫಸಲು ಚೆನ್ನಾಗಿ ಬಂದಿದ್ದರೆ 24 ಹಣ್ಣುಗಳ ಬಾಕ್ಸ್ ಒಂದಕ್ಕೆ ₹ 400ರಿಂದ ₹ 600 ರವರೆಗೂ ದರ ಸಿಗುತ್ತಿತ್ತು. ಆದರೆ, ಈಗ ಹಾಕಿದ ಬಂಡವಾಳವೂ ಕೈ ಸೇರದಾಗಿದೆ’ ಎಂದು ಕೇಣಿದಾರರಾದ ಅಫನ್, ಮುಷ್ತಾಕ್ ಮತ್ತು ಆರಿಫ್ ಬೇಸರ ವ್ಯಕ್ತಪಡಿಸಿದರು.</p>.<p>‘ನಮ್ಮ ತೋಟ ಮತ್ತು ಹೊಲಗಳಲ್ಲಿ ಸಾಕಷ್ಟು ಕಾಯಿ ಬಿಡುವ ಉತ್ತಮ ತಳಿಯ ಆಪೂಸ್ ಮತ್ತು ರಸಪೂರಿ ಮಾವಿನ ಮರಗಳನ್ನು ಬೆಳೆಸಿದ್ದೇವೆ. ಪ್ರತಿ ವರ್ಷ ಮರಗಳಲ್ಲಿ ಫಸಲು ಚೆನ್ನಾಗಿ ಬಂದು ಸಾಕಷ್ಟು ಆದಾಯ ದೊರೆಯುತ್ತಿತ್ತು. ಆದರೆ, ಈ ವರ್ಷ ಭಾರಿ ಬಿಸಿಲಿನ ಹೊಡೆತಕ್ಕೆ ಮಾವಿನ ಫಸಲಿಗೆ ಧಕ್ಕೆಯಾಗಿದೆ. ಬಿಸಿಲಿನ ತಾಪದಿಂದ ಬೆಳೆ ಕೈಗೆ ಬಾರದೇ ನಷ್ಟವಾಗಿದೆ’ ಎಂದು ಹೋಬಳಿಯ ರೈತರಾದ ಶಿವಲಿಂಗಪ್ಪ ಮತ್ತು ನಾಗರಾಜಪ್ಪ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಾಪಟ್ಟಣ:</strong> ಪ್ರಸಕ್ತ ವರ್ಷ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಘನಘೋರವಾಗಿ ಪರಿಣಮಿಸಿರುವ ಬೇಸಿಗೆಯ ಬಿರು ಬಿಸಿಲಿನಿಂದಾಗಿ ‘ಹಣ್ಣುಗಳ ರಾಜ’ ಮಾವಿನ ಫಸಲು ಕ್ಷೀಣವಾಗಿದೆ. ಮಾವಿನ ಮರಗಳಲ್ಲಿನ ಹೂವು ಮತ್ತು ಹೀಚು ಉದುರುತ್ತಿದ್ದು, ರೈತರು ಮತ್ತು ಕೇಣಿದಾರರಿಗೆ ಅಪಾರ ನಷ್ಟ ಸಂಭವಿಸಿದೆ.</p>.<p>ಹೋಬಳಿಯಾದ್ಯಂತ ಇರುವ ಮಾನಿವ ತೋಟಗಳಲ್ಲಿ ಆಪೂಸ್ ತಳಿಯ ಮರಗಳು ಹೆಚ್ಚಾಗಿವೆ. ಬಿಸಿಲಿನ ತಾಪದಿಂದ ಶೇಕಡ 75ರಷ್ಟು ಮರಗಳಲ್ಲಿನ ಹೂವು ಮತ್ತು ಹೀಚು ಉದುರುತ್ತಿವೆ.</p>.<p>‘ಮಾವಿನ ಮರಗಳಲ್ಲಿ ಹೂ ಬಿಡಲಾರಂಭಿಸಿದ ಕೂಡಲೇ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ತೋಟದ ಕಾಯಿ ಖರೀದಿಸಲು ಮುಂಗಡ ಹಣ ಪಾವತಿಸುತ್ತೇವೆ. ಸುಮಾರು 600 ಮರಗಳನ್ನು ಕೇಣಿಗೆ ಪಡೆದಿದ್ದು, ಮರಗಳ ನಿರ್ವಹಣೆ, ಕೊಯ್ಲು ನಾವೇ ಮಾಡುತ್ತೇವೆ. ಈವರೆಗೆ ₹ 1 ಲಕ್ಷ ವೆಚ್ಚದಲ್ಲಿ ನಾಲ್ಕು ಬಾರಿ ಕೀಟನಾಶಕ ಸಿಂಪಡಿಸಿದ್ದೇವೆ. ಬಿಸಿಲಿನಿಂದಾಗಿ ಮರಗಳಲ್ಲಿ ಕಾಯಿಗಳೇ ಇಲ್ಲವಾಗಿದೆ. ಇದರಿಂದ ಅಪಾರ ನಷ್ಟ ಸಂಭವಿಸಿದೆ’ ಎಂದು ಕೇಣಿದಾರ ಸೈಯದ್ ಹಿದಾಯತ್ ಬೇಸರ ವ್ಯಕ್ತಪಡಿಸಿದರು.</p>.<p>‘ಈ ವರ್ಷ ಹಿಂದೆಂದೂ ಕಾಣದಷ್ಟು ತಾಪಮಾನ ಇದೆ. ಇತ್ತೀಚಿನ ದಿನಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಸೂಕ್ಷ್ಮ ಫಸಲಾದ ಮಾವಿನ ಮರಗಳ ಹೂ, ಹೀಚು ಬಿಸಿಲಿಗೆ ಬಾಡಿ ಉದುರಿ ಹೋಗಿವೆ. ನಾವು ರೈತರೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಅವರಿಗೆ ಹಣ ನೀಡಬೇಕು. ಪ್ರಕೃತಿ ವಿಕೋಪದಿಂದ ಈ ರೀತಿ ಆಗಿದೆ ಎಂದು ನಾವು ಮನವರಿಕೆ ಮಾಡಿಕೊಟ್ಟಾಗ ಕೆಲ ರೈತರು ಅರ್ಧದಷ್ಟು ಹಣವನ್ನು ಕಡಿಮೆ ಮಾಡಿಕೊಳ್ಳಲು ಒಪ್ಪುತ್ತಾರೆ. ಈ ಬಾರಿ ಅಷ್ಟು ಹಣ ಕೊಡುವುದೂ ನಮಗೆ ಅಸಾಧ್ಯವಾಗಿದೆ. ಫಸಲು ಚೆನ್ನಾಗಿ ಬಂದಿದ್ದರೆ 24 ಹಣ್ಣುಗಳ ಬಾಕ್ಸ್ ಒಂದಕ್ಕೆ ₹ 400ರಿಂದ ₹ 600 ರವರೆಗೂ ದರ ಸಿಗುತ್ತಿತ್ತು. ಆದರೆ, ಈಗ ಹಾಕಿದ ಬಂಡವಾಳವೂ ಕೈ ಸೇರದಾಗಿದೆ’ ಎಂದು ಕೇಣಿದಾರರಾದ ಅಫನ್, ಮುಷ್ತಾಕ್ ಮತ್ತು ಆರಿಫ್ ಬೇಸರ ವ್ಯಕ್ತಪಡಿಸಿದರು.</p>.<p>‘ನಮ್ಮ ತೋಟ ಮತ್ತು ಹೊಲಗಳಲ್ಲಿ ಸಾಕಷ್ಟು ಕಾಯಿ ಬಿಡುವ ಉತ್ತಮ ತಳಿಯ ಆಪೂಸ್ ಮತ್ತು ರಸಪೂರಿ ಮಾವಿನ ಮರಗಳನ್ನು ಬೆಳೆಸಿದ್ದೇವೆ. ಪ್ರತಿ ವರ್ಷ ಮರಗಳಲ್ಲಿ ಫಸಲು ಚೆನ್ನಾಗಿ ಬಂದು ಸಾಕಷ್ಟು ಆದಾಯ ದೊರೆಯುತ್ತಿತ್ತು. ಆದರೆ, ಈ ವರ್ಷ ಭಾರಿ ಬಿಸಿಲಿನ ಹೊಡೆತಕ್ಕೆ ಮಾವಿನ ಫಸಲಿಗೆ ಧಕ್ಕೆಯಾಗಿದೆ. ಬಿಸಿಲಿನ ತಾಪದಿಂದ ಬೆಳೆ ಕೈಗೆ ಬಾರದೇ ನಷ್ಟವಾಗಿದೆ’ ಎಂದು ಹೋಬಳಿಯ ರೈತರಾದ ಶಿವಲಿಂಗಪ್ಪ ಮತ್ತು ನಾಗರಾಜಪ್ಪ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>