ಹರಪನಹಳ್ಳಿ ತಾಲ್ಲೂಕಿನ ರೈತರು ಬಳ್ಳಾರಿ ಬದಲಾಗಿ ದಾವಣಗೆರೆಯನ್ನೇ ಅವಲಂಭಿಸಿರುವುದರಿಂದ ಅವರಿಗೂ ತೊಂದರೆಯಾಗದಂತೆ ಜಿಲ್ಲೆಯಿಂದಲೇ ಯೂರಿಯಾ ಪೂರೈಕೆ ಮಾಡಲಾಗುತ್ತಿದೆ. ಆದ್ದರಿಂದ ಸಂಸದರು ಜಿಲ್ಲೆಯ ಜುಲೈ ತಿಂಗಳ ಕೋಟಾ 3400 ಮೆಟ್ರಿಕ್ಟನ್ ಹಾಗೂ ಆಗಸ್ಟ್ ತಿಂಗಳ ಕೋಟಾ 11,500 ಮೆಟ್ರಿಕ್ಟನ್ ಯೂರಿಯಾವನ್ನು ಶೀಘ್ರ ಪೂರೈಕೆ ಮಾಡುವಂತೆ ದೂರವಾಣಿ ಮೂಲಕ ಮನವಿ ಮಾಡಿದ್ದಾರೆ