‘ಉಪ್ಪಾರ, ಲಂಬಾಣಿ, ಲಿಂಗಾಯತ, ವಿಶ್ವಕರ್ಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸೇರಿ ಹಲವು ಸಮುದಾಯಗಳು ಇವೆ. ಆದರೆ ಹಿಂದುಳಿದ ಪರಿಶಿಷ್ಟ ಜಾತಿಯವರಿಗೆ ಹೂಳಲು ಜಮೀನು ಇಲ್ಲ. ಜಮೀನು ಇದ್ದವರು ಅಲ್ಲಿ ಹೂಳುತ್ತಾರೆ. ಇಲ್ಲದವರು ಎಲ್ಲಿ ಹೋಗಬೇಕು. ಹಲವು ಬಾರಿ ಮನವಿ ಕೊಟ್ಟಿದ್ದೇವೆ. ಹಣವೂ ಬಿಡುಗಡೆಯಾಗಿದೆ. ಆದರೆ ಜಾಗ ಸಿಗುತ್ತಿಲ್ಲ’ ಎಂದು ಅಳಲು ತೋಡಿಕೊಳ್ಳುತ್ತಾರೆ.