ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿ.ಎಲ್. ಸಂತೋಷ್ ಅವರು ಕರ್ನಾಟಕದ ಪ್ರತಿನಿಧಿಯಾಗಿದ್ದು, ಇಲ್ಲಿನ ವಾತಾವರಣ ಅವರಿಗೆ ಗೊತ್ತಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಂಬ ಕಾರಣಕ್ಕೆ ಅವರನ್ನು ಭೇಟಿ ಮಾಡಿದ್ದೇವೆಯೇ ಹೊರತು ಬೇರೆ ಹಿನ್ನೆಲೆಯಿಂದಲ್ಲ. ಇವರ ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಸಂಪರ್ಕಿಸಿದೆವು. ಕೆಲವರು ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳುತ್ತಾರೆ. ಈ ಸಂಘಟನೆಯ ಜೊತೆಗೆ ಯಾರ ಕೈವಾಡವೂ ಇಲ್ಲ. ನಮಗೆ ಬೇಕಾಗಿರುವುದು ಎಸ್ಟಿ ಮೀಸಲಾತಿ. ಯಾರು ಕೊಡುತ್ತೇವೆ ಎಂದು ಹೇಳಿದರೂ ಸ್ವಾಗತಿಸುತ್ತೇವೆ’ ಎಂದರು.