ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ದಾವಣಗೆರೆ | ಸಂಚಾರ ನಿಯಮ ಉಲ್ಲಂಘನೆ: 11 ದಿನದಲ್ಲಿ ₹ 16.57 ಲಕ್ಷ ದಂಡ ಪಾವತಿ

Published : 4 ಸೆಪ್ಟೆಂಬರ್ 2025, 6:04 IST
Last Updated : 4 ಸೆಪ್ಟೆಂಬರ್ 2025, 6:04 IST
ಫಾಲೋ ಮಾಡಿ
Comments
ನೆಲವಾಗಲು ಮಂಜುನಾಥ್
ನೆಲವಾಗಲು ಮಂಜುನಾಥ್
ಇನ್ನೂ ಸಾಕಷ್ಟು ಪ್ರಕರಣಗಳು ಇತ್ಯರ್ಥಗೊಳ್ಳಬೇಕಿದೆ. ವಾಹನ ಸವಾರರು ನಿರ್ಲಕ್ಷ್ಯ ವಹಿಸದೇ ರಿಯಾಯಿತಿ ಸೌಲಭ್ಯದ ಮೂಲಕ ದಂಡ ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬೇಕು. ಇಲ್ಲವಾದರೆ ನೋಟಿಸ್‌ ನೋಡಿ ವಾಹನ ಜಪ್ತಿ ಮಾಡಿಕೊಳ್ಳಲಾಗುವುದು ನೆಲವಾಗಲು
ಮಂಜುನಾಥ್ ಸಿಪಿಐ ದಾವಣಗೆರೆ ಸಂಚಾರ ವಿಭಾಗ
ನಿಯಮ ಉಲ್ಲಂಘನೆ: ದ್ವಿಚಕ್ರ ವಾಹನಗಳೇ ಅಧಿಕ
ದ್ವಿಚಕ್ರ ವಾಹನ ಸವಾರರ ವಿರುದ್ಧವೇ ಸಂಚಾರ ನಿಯಮ ಉಲ್ಲಂಘನೆಯ ಅಧಿಕ ಪ್ರಕರಣಗಳು ದಾಖಲಾಗಿವೆ. ದಂಡ ಪಾವತಿಸಿದವರ ಪೈಕಿಯೂ ದ್ವಿಚಕ್ರ ವಾಹನ ಸವಾರರೇ ಮುಂದಿದ್ದಾರೆ. ದ್ವಿಚಕ್ರ ವಾಹನ ಸವಾರರೊಬ್ಬರ ವಿರುದ್ಧ ಸಂಚಾರ ನಿಯಮ ಉಲ್ಲಂಘನೆಯಡಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ರಿಯಾಯಿತಿ ಇರುವುದರಿಂದ ಅರ್ಧದಷ್ಟು ದಂಡದ ಮೊತ್ತವನ್ನು (₹13000) ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದಾರೆ. ಇಂತಹ ಹಲವು ಪ್ರಕರಣಗಳು ರಿಯಾಯಿತಿ ಸೌಲಭ್ಯದಿಂದ ಇತ್ಯರ್ಥಗೊಂಡಿವೆ ಎಂದು ಸಂಚಾರ ವಿಭಾಗದ ಸಿಪಿಐ ನೆಲವಾಗಲು ಮಂಜುನಾಥ್ ತಿಳಿಸಿದರು. ‘ವಾಹನ ಸವಾರರು ಯಾವುದೇ ಕಾರಣಕ್ಕೂ ಸಂಚಾರ ನಿಯಮಗಳನ್ನು ಉಲ್ಲಂಘಿಸಬಾರದು. ನಿಯಮ ಉಲ್ಲಂಘನೆಯಿಂದ ದಿನದಿಂದ ದಿನಕ್ಕೆ ಅಪಘಾತ ಪ್ರಕರಣಗಳೂ ಹೆಚ್ಚುತ್ತಿವೆ. ತಮ್ಮ ಪ್ರಾಣ ಮಾತ್ರವಲ್ಲದೇ ಬೇರೆಯವರ ಜೀವದ ಬಗ್ಗೆಯೂ ವಾಹನ ಸವಾರರು ಕಾಳಜಿ ವಹಿಸಬೇಕು. ಚಾಲನೆ ವೇಳೆ ನಿರ್ಲಕ್ಷ್ಯ ತೋರಬಾರದು’ ಎಂದು ಅವರು ಮನವಿ ಮಾಡಿದರು.
‘ಆನ್‌ಲೈನ್‌ನಲ್ಲೇ ಪರೀಕ್ಷಿಸಿಕೊಳ್ಳಿ’
ಬೈಕ್ ಕಾರ್‌ ಸೇರಿದಂತೆ ಯಾವುದೇ ವಾಹನದ ಸಂಚಾರ ನಿಯಮ ಉಲ್ಲಂಘನೆಗೆ ಎಷ್ಟು ಪ್ರಕರಣ ದಾಖಲಾಗಿವೆ. ದಂಡದ ರೂಪದಲ್ಲಿ ಎಷ್ಟು ಮೊತ್ತ ಪಾವತಿಸಬೇಕಿದೆ ಎಂಬುದನ್ನು ತಿಳಿಯಲು ಪೊಲೀಸ್ ಠಾಣೆಗೆ ಹೋಗಬೇಕಿಲ್ಲ. ಬದಲಿಗೆ ಗೂ‌ಗಲ್‌ ಪ್ಲೇ ಸ್ಟೋರ್‌ನಲ್ಲಿ mParivahan ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡು Transport Services ಮೇಲೆ ಕ್ಲಿಕ್ ಮಾಡಿ challan Status ನಲ್ಲಿ ವಾಹನದ ಸಂಖ್ಯೆಯನ್ನು ಹಾಕಿದರೆ ಮಾಹಿತಿ ದೊರೆಯಲಿದೆ. ಇಲ್ಲವೇ Google 0r Chrome ನಲ್ಲಿ eChallan Status ಎಂದು ಸರ್ಚ್ ಮಾಡಿ ನಂತರ ಬರುವ Challan Details ಮೇಲೆ ಕ್ಲಿಕ್ ಮಾಡಿ ವಾಹನ ಸಂಖ್ಯೆ ನಮೂದಿಸಿದರೆ ಮಾಹಿತಿ ಲಭ್ಯವಾಗಲಿದೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT