‘ವರ್ಷದಿಂದ ವರ್ಷಕ್ಕೆ ತೆರಿಗೆ ಬದಲಾಗುತ್ತಿರುತ್ತದೆ. ಆದನ್ನು ತಿಳಿಸುವ ಯಾವುದೇ ಮಾಹಿತಿ ಫಲಕ ಅಳವಡಿಸಿಲ್ಲ. ತೆರಿಗೆ ಕಟ್ಟಲು ಕೌಂಟರ್ನಲ್ಲಿ ನಗದನ್ನೇ ಕೊಡಬೇಕು. ಚೆಕ್ಗಳನ್ನು ನೀಡಲು, ಡೆಬಿಟ್ ಕಾರ್ಡ್, ಗೂಗಲ್ ಪೇನಲ್ಲಿ ಪಾವತಿಸಲು ಅವಕಾಶವಿಲ್ಲ. ಕೇಂದ್ರ ಸರ್ಕಾರ ನಗದುರಹಿತ ಆಡಳಿತ ನಡೆಸಿ ಎಂದು ಹೇಳುತ್ತಿದೆ. ಆದರೆ ಪಾಲಿಕೆಯಲ್ಲಿ ಈ ವ್ಯವಸ್ಥೆ ಇಲ್ಲ’ ಎಂಬುದುದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಎಸ್. ಶಿಶುಪಾಲ ಅವರ ಅನುಭವ
ನುಡಿ.