ನದಿಯ ಪ್ರವಾಹ ಕಡಿಮೆ ಆದ ಮೇಲೆ ತರಕಾರಿ ಬೆಳೆಯುವ ಜಮೀನನ್ನು ಪರಿಶೀಲಿಸಲಾಗುವುದು. ನೆರೆ ಪರಿಹಾರಕ್ಕೆ ಶಿಫಾರಸು ಮಾಡಲು ಕ್ರಮಕೈಗೊಳ್ಳಲಾಗುವುದು.
ಎಚ್.ಎನ್. ಶಶಿಧರ್ ಸ್ವಾಮಿ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಹರಿಹರ
ನನಗೆ ಇರುವುದೇ ಒಂದೆಕರೆ ಜಮೀನು. ಅದರಲ್ಲಿ ಬೆಂಡೆ ಮೂಲಂಗಿ ಸೊಪ್ಪು ಟೊಮೆಟೊ ಕೊತ್ತಂಬರಿ ಇನ್ನಿತರೆ ತರಕಾರಿ ಬೆಳೆಯುತ್ತಿದ್ದೆ. ಕುಟುಂಬ ನಿರ್ವಹಣೆಗೆ ಸಮಸ್ಯೆ ಇರಲಿಲ್ಲ. ಇದ್ದಕ್ಕಿದ್ದಂತೆ ತುಂಬಿ ಹರಿದ ನದಿ ನೀರಿನಿಂದ ಜಮೀನು ನೀರಿನಲ್ಲಿ ಮುಳುಗಿದೆ. ₹2 ಲಕ್ಷ ಆದಾಯ ನೀರುಪಾಲಾಗಿದೆ. ಸಂಬಂಧಪಟ್ಟ ಇಲಾಖೆ ಪರಿಹಾರ ಒದಗಿಸಬೇಕು.
ಪದ್ಮಪ್ಪ ಪೂಜಾರ್, ತರಕಾರಿ ಬೆಳೆಗಾರ ಉಕ್ಕಡಗಾತ್ರಿ
ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿ ಬಳಿ ತರಿಕಾರಿ ಬೆಳೆದಿದ್ದ ಜಮೀನು ನೀರಿನಲ್ಲಿ ಮುಳುಗಿರುವುದು