<p><strong>ಹರಿಹರ:</strong> ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವುದರಿಂದ ಜನರು ನದಿಪಾತ್ರಕ್ಕೆ ತೆರಳದಂತೆ ತಾಲ್ಲೂಕು ಆಡಳಿತ ಎಚ್ಚರಿಸಿದೆ. ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಏರಿಕೆಯಾಗುತ್ತಿದೆ. </p>.<p>ಸದ್ಯಕ್ಕೆ ಕೆಲವೆಡೆ ನದಿ ದಡದ ಜಮೀನುಗಳಿಗೆ ನೀರು ನುಗ್ಗಿದೆ. ಸೋಮವಾರ ಬೆಳಿಗ್ಗೆ ಇಲ್ಲಿನ ಗಂಗಾನಗರದ ಎರಡು ಮನೆಗಳ ಸಮೀಪಕ್ಕೆ ಆಗಮಿಸಿದ್ದ ನದಿ ನೀರು ಸಂಜೆ ಹಿಂದಕ್ಕೆ ಸರಿದಿದೆ. ರಾಘವೇಂದ್ರ ಮಠ ಹಿಂಭಾಗದ ತುಂಗಭದ್ರಾರತಿ ಮಂಟಪದ ಮೆಟ್ಟಿಲುಗಳು ಜಲಾವೃತವಾಗಿವೆ. </p>.<p><strong>ನಿಷೇಧಾಜ್ಞೆ:</strong> ತಾಲ್ಲೂಕಿನ ಉಕ್ಕಡಗಾತ್ರಿ, ಗೋವಿನಹಾಳು, ಇಂಗಳಗೊಂದಿ, ಎಳೆಹೊಳೆ, ಮಳಲಹಳ್ಳಿ, ನಂದಿಗುಡಿ, ಪಾಳ್ಯ, ನಂದಿಗಾವಿ, ಬಿಳಸನೂರು, ಹುಲಗಿನಹೊಳೆ, ರಾಜನಹಳ್ಳಿ, ಹಲಸಬಾಳು, ತಿಮ್ಮಾಪುರ, ಗುತ್ತೂರು, ದೀಟೂರು, ಪಾಮೇನಹಳ್ಳಿ, ಚಿಕ್ಕಬಿದರಿ ಗ್ರಾಮಗಳ ನದಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. </p>.<p>ನದಿಯಲ್ಲಿ ಈಜಾಡುವುದು, ಬಟ್ಟೆ ಒಗೆಯುವುದು, ವಾಹನ, ದನಕರುಗಳನ್ನು ತೊಳೆಯುವುದು, ದನಕರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ಗುರುಬಸವರಾಜ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ:</strong> ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವುದರಿಂದ ಜನರು ನದಿಪಾತ್ರಕ್ಕೆ ತೆರಳದಂತೆ ತಾಲ್ಲೂಕು ಆಡಳಿತ ಎಚ್ಚರಿಸಿದೆ. ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಏರಿಕೆಯಾಗುತ್ತಿದೆ. </p>.<p>ಸದ್ಯಕ್ಕೆ ಕೆಲವೆಡೆ ನದಿ ದಡದ ಜಮೀನುಗಳಿಗೆ ನೀರು ನುಗ್ಗಿದೆ. ಸೋಮವಾರ ಬೆಳಿಗ್ಗೆ ಇಲ್ಲಿನ ಗಂಗಾನಗರದ ಎರಡು ಮನೆಗಳ ಸಮೀಪಕ್ಕೆ ಆಗಮಿಸಿದ್ದ ನದಿ ನೀರು ಸಂಜೆ ಹಿಂದಕ್ಕೆ ಸರಿದಿದೆ. ರಾಘವೇಂದ್ರ ಮಠ ಹಿಂಭಾಗದ ತುಂಗಭದ್ರಾರತಿ ಮಂಟಪದ ಮೆಟ್ಟಿಲುಗಳು ಜಲಾವೃತವಾಗಿವೆ. </p>.<p><strong>ನಿಷೇಧಾಜ್ಞೆ:</strong> ತಾಲ್ಲೂಕಿನ ಉಕ್ಕಡಗಾತ್ರಿ, ಗೋವಿನಹಾಳು, ಇಂಗಳಗೊಂದಿ, ಎಳೆಹೊಳೆ, ಮಳಲಹಳ್ಳಿ, ನಂದಿಗುಡಿ, ಪಾಳ್ಯ, ನಂದಿಗಾವಿ, ಬಿಳಸನೂರು, ಹುಲಗಿನಹೊಳೆ, ರಾಜನಹಳ್ಳಿ, ಹಲಸಬಾಳು, ತಿಮ್ಮಾಪುರ, ಗುತ್ತೂರು, ದೀಟೂರು, ಪಾಮೇನಹಳ್ಳಿ, ಚಿಕ್ಕಬಿದರಿ ಗ್ರಾಮಗಳ ನದಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. </p>.<p>ನದಿಯಲ್ಲಿ ಈಜಾಡುವುದು, ಬಟ್ಟೆ ಒಗೆಯುವುದು, ವಾಹನ, ದನಕರುಗಳನ್ನು ತೊಳೆಯುವುದು, ದನಕರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ಗುರುಬಸವರಾಜ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>